ಬಸ್ನಲ್ಲಿ ಕೋಳಿ ಜಗಳ; ಕೋಳಿಗೆ ಟಿಕೆಟ್ ಕೇಳಿದ ಕಂಡಕ್ಟರ್: ಕೋಳಿಗೂ ಸೀಟ್ ಬಿಡಿಸಿಕೊಂಡ ಮಹಿಳೆ
ವಿಜಯನಗರ, ಫೆಬ್ರವರಿ 13: ಇತ್ತಿಚ್ಚಿನ ದಿನಗಳಲ್ಲಿ ಸಾರಿಗೆ ಬಸ್ ಗಳಲ್ಲಿ ಕಂಡಕ್ಟರ್ ಹಾಗೂ ಪ್ರಯಾಣಿಕರ ನಡುವೆ ಜಗಳದ ಪ್ರಸಂಗಗಳು ಸಾಕಷ್ಟು ವರದಿಯಾಗುತ್ತಿದೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಸಾರಿಗೆ ಸಂಸ್ಥೆಯ ಬಸ್ ನಲ್ಲಿ ಕಂಡಕ್ಟರ್ ಮತ್ತು ಮಹಿಳೆ ನಡುವೆ ಭಾನುವಾರ ರಾತ್ರಿ ಕೋಳಿ ಜಗಳ ನಡೆದಿದೆ.
ಧರ್ಮಸ್ಥಳಕ್ಕೆ ತೆರಳುತ್ತಿದ್ದ ಹಗರಿಬೊಮ್ಮನಹಳ್ಳಿ ಘಟಕದ ಸಾರಿಗೆ ಬಸ್ ಹೊಸಪೇಟೆ ಮಾರ್ಗವಾಗಿ ಕೂಡ್ಲಿಗಿ ಪಟ್ಟಣಕ್ಕೆ ಬಂದಾಗ ಜಗಳೂರು ಕಡೆಗೆ ಹೋಗಲು ಮಹಿಳೆಯೊಬ್ಬರು ಬಸ್ ಹತ್ತಿದ್ದಾರೆ. ಈ ವೇಳೆ ಜನರಿಗೆ ಕಾಣದಂತೆ ರಟ್ಟಿನ ಬಾಕ್ಸ್ ನಲ್ಲಿ ಇಟ್ಟಿದ್ದ ಕೋಳಿ ಕೂಗಿದೆ. ಇದಕ್ಕೆ ಕಂಡಕ್ಟರ್ ಕೋಳಿ ಯಾರದೆಂದು ಕೇಳಿ ಟಿಕೆಟ್ ಪಡೆಯಲು ಹೇಳಿದ್ದಾರೆ. ಇದಕ್ಕೆ ಮಹಿಳೆ ಟಿಕೆಟ್ ತೆಗೆದುಕೊಳ್ಳುವೆ, ಕೋಳಿಗೂ ಸೀಟ್ ಕೊಡಬೇಕೆಂದು ವಾಗ್ವಾದಕ್ಕಿಳಿದ ಪ್ರಸಂಗ ನಡೆದಿದೆ.

ಕೂಡ್ಲಿಗಿ ಪಟ್ಟಣದಿಂದ ಭಾನುವಾರ ರಾತ್ರಿ 7-30ರ ಸುಮಾರಿಗೆ ಸಂಬಂಧಿಕರೊಂದಿಗೆ ಜಗಳೂರಿಗೆ ಪ್ರಯಾಣಿಸಲು ಮಹಿಳೆ ಬಸ್ ಹತ್ತಿದ್ದು, ರಟ್ಟಿನ ಬಾಕ್ಸ್ ನಲ್ಲಿದ್ದ ಕೋಳಿಯನ್ನು ಸೀಟಿನ ಮೇಲುಗಡೆ ಲಗೇಜ್ ಇಡುವ ಜಾಗದಲ್ಲಿ ಇಟ್ಟಿದ್ದರು. ಕೋಳಿ ಕೂಗಿನ ಸದ್ದಿಗೆ ಕಂಡಕ್ಟರ್ ಟಿಕೆಟ್ ಕೇಳಿದ್ದಾರೆ. ಆಗ ಮಹಿಳೆ, ಯಾವ್ ಸೀಮೆ ಕಂಡಕ್ಟರ್ ಸ್ವಾಮಿ ನೀನು, ಕೋಳಿಗ್ಯಾರಾದ್ರೂ ಟಿಕೆಟ್ ಕೇಳ್ತಾರಾ ಅಂದಾಗ ಅಮ್ಮೋ..ರೂಲ್ಸ್ ಪ್ರಕಾರ ಕೋಳಿಗೆ ಆಫ್ ಟಿಕೆಟ್ ತಗೋಬೇಕು. ಇಲ್ಲ ಅಂದ್ರೆ ಕೋಳಿ ಹಿಡ್ಕೊಂಡು ಕೆಳಗಿಳಿ ತಾಯಿ ಅನ್ನುತ್ತಿದ್ದಂತೆ, ಮಹಿಳೆಯು ಸರಿ ಕಂಡಕ್ಟರೇ.. ಟಿಕೆಟ್ ತಗಂತೀನಿ ಆದ್ರೆ ಕೋಳಿಗಾಗಿ ಸೀಟು ಕೊಡಲೇಬೇಕು ಎಂದು ಕಂಡಕ್ಟರ್ ಜೊತೆ ವಾಗ್ವಾದಕ್ಕಿಳಿದಿದ್ದಾರೆ.
ಕೋಳಿ ಜಗಳ ಜೋರಾಯಿತು. ಪ್ರಯಾಣಿಕರು ಸೇರಿ ಎಲ್ಲರೂ ಸಾಕಷ್ಟು ತಿಳಿ ಹೇಳಿದ ಬಳಿಕ ಮಹಿಳೆ ಟಿಕೆಟ್ ಪಡೆದರು. ಈ ವೇಳೆ ಕೆಲ ಪ್ರಯಾಣಿಕರು ಮಹಿಳೆಗೆ ರೂಲ್ಸ್ ಬಗ್ಗೆ ಹೇಳಿದರೂ ಕೇಳದ ಮಹಿಳೆ ಬಸ್ಸು ಕೂಡ್ಲಿಗಿಯಿಂದ ಕೊಟ್ಟೂರು ಕಡೆಗೆ ಸಾಗಿದರೂ ಜಗಳ ಮುಂದುವರೆದಿತ್ತು.
-
ಏರ್ ಕೂಲರ್ vs ಏರ್ ಕಂಡಿಷನರ್: ಬೇಸಿಗೆಯಲ್ಲಿ ನಿಮ್ಮ ಸರಿಯಾದ ಆಯ್ಕೆ ಯಾವುದು? -
ಖೇಲೋ ಇಂಡಿಯಾ ಬುಡಕಟ್ಟು ಕ್ರೀಡಾಕೂಟ: 23 ಚಿನ್ನದ ಪದಕ ಗೆದ್ದು ಸಮಗ್ರ ಚಾಂಪಿಯನ್ ಪಟ್ಟ ಅಲಂಕರಿಸಿದ ಕರ್ನಾಟಕ -
Jobs: ಹೈಕೋರ್ಟ್ನಲ್ಲಿ ಕೆಲಸ ಬೇಕೆ? 70 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO -
ಇಂಧನ ಪೂರೈಕೆ ಕೊರತೆ ಭೀತಿ: 2026ರಲ್ಲಿ ನೀವು ಖರೀದಿಸಬಹುದಾದ ಟಾಪ್ ಎಲೆಕ್ಟ್ರಿಕ್ ಸ್ಕೂಟರ್ ಗಳು ಇಲ್ಲಿವೆ -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications