ಸರ್ಕಾರಿ ಸುತ್ತೋಲೆಗೆ ಶಕ್ತಿಸೌಧದ ಮಹಿಳಾ ಉದ್ಯೋಗಿಗಳು ಗರಂ
ಬೆಂಗಳೂರು, ಜೂ. 04 : ವಿಧಾನಸೌಧದ ನೌಕರರಿಗೆ ಹೊರಡಿಸಿರುವ ಸುತ್ತೋಲೆ ವಿವಾದಕ್ಕೆ ಕಾರಣವಾಗಿದೆ. ಮೊಬೈಲ್ನಲ್ಲಿ ಮಾತನಾಡಬೇಡಿ, ಕಾರಿಡಾರ್ನಲ್ಲಿ ತಿರುಗಾಡಬೇಡಿ ಎಂಬ ಸುತ್ತೋಲೆಗೆ ನೋಡಿದ ಮಹಿಳಾ ನೌಕರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಹಿಳಾ ಉದ್ಯೋಗಿಗಳನ್ನು ಮಾತ್ರ ಗುರಿಯಾಗಿ ಸುತ್ತೋಲೆ ಹೊರಡಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರ ಆದೇಶದಂತೆ ಮೇ 21ರಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸುತ್ತೋಲೆಯನ್ನು ಹೊರಡಿಸಿತ್ತು. ಕಚೇರಿ ಸಮಯದಲ್ಲಿ ನೌಕರರು ಮೊಬೈಲ್ನಲ್ಲಿ ಜೋರಾಗಿ ಮಾತನಾಡಬಾರದು, ಕಾರಿಡಾರ್ನಲ್ಲಿ ಸುಮ್ಮನೆ ತಿರುಗಾಡಬಾರದು, ಗುಂಪು-ಗುಂಪಾಗಿ ಓಡಾಡಬಾರದು ಎಂಬುದು ಸುತ್ತೋಲೆಯ ಪ್ರಮುಖ ಅಂಶಗಳು.

ಆದರೆ, ಈ ಸುತ್ತೋಲೆಯಲ್ಲಿ ಮಹಿಳಾ ನೌಕರರು ಎಂದು ನಮೂದಿಸಿರುವುದು ಮಹಿಳಾ ನೌಕರರ ಅಸಮಾಧಾನಕ್ಕೆ ಕಾರಣವಾಗಿದೆ. ಸುತ್ತೋಲೆಗೆ ವಿರುದ್ಧವಾಗಿ ನಡೆದುಕೊಂಡರೆ ಕ್ರಮ ಜರುಗಿಸಲಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಲಾಗಿದ್ದು, ನೌಕರರು ಇದನ್ನು ನೋಡಿ ಗರಂ ಆಗಿದ್ದಾರೆ. [ಈ ಗ್ರಾಮದಲ್ಲಿ ಯುವತಿಯರು ಮೊಬೈಲ್ ಬಳಸುವಂತಿಲ್ಲ]
ನಮಗೆ ಮಾತ್ರ ಏಕೆ ನಿಯಮ? : ವಿಧಾನಸೌಧದ ನೌಕರರಿಗೆ ಬಂದಿರುವ ಸುತ್ತೋಲೆ ಹಿಂದಿರುವುದು ಸ್ಪೀಕರ್ ಕಾಗೋಡು ತಿಮ್ಮಪ್ಪ. ಉದ್ಯೋಗಿಗಳು ಕಚೇರಿ ಸಮಯದಲ್ಲಿ ಸುಮ್ಮನೆ ಕಾರಿಡಾರ್ನಲ್ಲಿ ಓಡಾಡುವುದು, ಜೋರಾಗಿ ಮೊಬೈಲ್ನಲ್ಲಿ ಮಾತನಾಡುವುದನ್ನು ಪ್ರತ್ಯಕ್ಷವಾಗಿ ನೋಡಿದ್ದ ಅವರು, ಸುತ್ತೋಲೆ ಹೊರಡಿಸಲು ಸೂಚಿಸಿದ್ದರು. [ಮೊಬೈಲ್ ಅಲುಗಾಡಿಸಿ, ಕಾಮಾಂಧರನ್ನು ಹಿಡಿದು ಕೊಡಿ]
ಎರಡು ದಿನಗಳ ಹಿಂದೆ ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಕಾಗೋಡು ತಿಮ್ಮಪ್ಪ ಅವರು, 'ಹಲವಾರು ಉದ್ಯೋಗಿಗಳು ಕಚೇರಿ ಸಮಯದಲ್ಲಿ ಕಾಲಹರಣ ಮಾಡುವುದು, ಜೋರಾಗಿ ಮೊಬೈಲ್ನಲ್ಲಿ ಮಾತನಾಡುವುದನ್ನು ನಾನು ಗಮನಿಸಿದ್ದೇ. ಆದ್ದರಿಂದ ಸುತ್ತೋಲೆ ಹೊರಡಿಸಲು ಸೂಚನೆ ಕೊಟ್ಟಿದ್ದೆ' ಎಂದು ಹೇಳಿದ್ದರು.
ಆದರೆ, ಈ ಸುತ್ತೋಲೆಯಲ್ಲಿ ಮಹಿಳಾ ನೌಕರರು ಎಂದು ಮಾತ್ರ ಏಕೆ ನಮೂದಿಸಲಾಗಿದೆ? ಎಂಬುದು ಉದ್ಯೋಗಿಗಳ ಪ್ರಶ್ನೆ. ಪುರುಷ ನೌಕರರು ಕಾರಿಡಾರ್ನಲ್ಲಿ ಸುತ್ತಾಡುವುದಿಲ್ಲವೇ? ಎಂದು ಉದ್ಯೋಗಿಗಳು ಪ್ರಶ್ನಿಸಿದ್ದಾರೆ.
-
ಕರ್ನಾಟಕ ಸರ್ಕಾರ: ಕಲೆ, ಸಾಹಿತ್ಯ ಗಣ್ಯರಿಗೆ ಗೌರವ, ಸಾಂಸ್ಕೃತಿಕ ಪ್ರಶಸ್ತಿಗಳ ಆಯ್ಕೆ ಪಟ್ಟಿ ಪ್ರಕಟ -
Karnataka Heatwave: ಕಲಬರಗಿಯಲ್ಲಿ 44 ಡಿಸೆ ತಾಪಮಾನ, 12 ಜಿಲ್ಲೆಗಳಿಗೆ ಮಹತ್ವದ ಎಚ್ಚರಿಕೆ: ಐಎಂಡಿ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
CBSE 10ನೇ ತರಗತಿ ಫಲಿತಾಂಶ 2026: ದಕ್ಷಿಣ ಭಾರತದ ವಿದ್ಯಾರ್ಥಿಗಳದ್ದೇ ಮೇಲುಗೈ, ಶೇ. 98.91ರಷ್ಟು ಸಾಧನೆ ಮಾಡಿದ ಬೆಂಗಳೂರು -
ಏಪ್ರಿಲ್ 14ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್










Click it and Unblock the Notifications