ಅಂಬೇಡ್ಕರ್ ಅವರು ಯಾವ ಕಾರಣಕ್ಕೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು? ಛಲವಾದಿ ಪ್ರಶ್ನೆ
ಬೆಂಗಳೂರು,ಡಿಸೆಂಬರ್ 23: ಡಾ.ಬಿ.ಆರ್.ಅಂಬೇಡ್ಕರ್ ಅವರು ಕೇಂದ್ರದ ಸಚಿವರಾಗಿದ್ದರು, ನೀವು ಕೊಟ್ಟ ಯಾವ ತೊಂದರೆಯಿಂದ ಬಾಬಾಸಾಹೇಬರಿಗೆ ನೋವಾಯಿತು? ಯಾವ ಕಾರಣಕ್ಕೆ ಅವರು ನೆಹರೂ ಅವರನ್ನು ವಿರೋಧಿಸಿ ರಾಜೀನಾಮೆ ಕೊಟ್ಟು ಹೊರಕ್ಕೆ ಬಂದರು ಎಂಬ ವಿಷಯದ ಕುರಿತು ಕಾಂಗ್ರೆಸ್ಸಿಗರು ಉತ್ತರ ಕೊಡಬೇಕ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಸವಾಲು ಹಾಕಿದರು.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬಾಬಾಸಾಹೇಬರ ಜೊತೆ ಪಿಎ ಆಗಿ ಸೇವೆ ಮಾಡಿಕೊಂಡಿದ್ದ ಕಾರಜೋಳಕರ್ ಎಂಬವರನ್ನು ಅವರಿಂದ ಕಸಿದುಕೊಂಡು ಹೋಗಿ ಅವರ ವಿರುದ್ಧವೇ ಎತ್ತಿ ಕಟ್ಟಿ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿದಿರಲ್ಲವೇ? ಜನಪ್ರಿಯತೆ ಬಾಬಾಸಾಹೇಬರಿಗೆ ಇತ್ತೇ ಅಥವಾ ಕಾರಜೋಳಕರ್ ಅವರಿಗಿತ್ತೇ? ಅಂದಮೇಲೆ ಮನೆ ಒಡೆಯುವ ಕೆಲಸವನ್ನು ನೀವು ಬಹಳ ಚೆನ್ನಾಗಿ ಮಾಡುತ್ತೀರಿ ಎಂದು ಆಕ್ಷೇಪಿಸಿದರು. ಇದು ಅಂಬೇಡ್ಕರರಿಗೆ ಮಾಡಿದ ದ್ರೋಹ.ಇದನ್ನೂ ಜನರಿಗೆ ತಿಳಿಸಿ ಎಂದು ಒತ್ತಾಯಿಸಿದರು.

ನೆಹರೂ, ಇಂದಿರಾಜೀ, ರಾಜೀವ್ ಗಾಂಧಿಯವರಿಗೆ ಕಾಂಗ್ರೆಸ್ಸಿಗರು ಭಾರತರತ್ನ ಕೊಟ್ಟರು. ಆದರೆ, ಬಾಬಾಸಾಹೇಬ ಅಂಬೇಡ್ಕರರಿಗೆ ಕೊಡದೆ ಇರಲು ಕಾರಣವೇನು? ಅಂಬೇಡ್ಕರರ ಪಿಎ ಆಗಿದ್ದ ಕಾರಜೋಳಕರ್ ಅವರಿಗೆ ನೀವು 1970ರಲ್ಲೇ ಪದ್ಮಭೂಷಣ ಪ್ರಶಸ್ತಿ ನೀಡಿದ್ದೀರಿ. ಅಂಬೇಡ್ಕರರು ಕಾರಜೋಳಕರ್ ಅವರಿಗಿಂತ ಕೀಳಾಗಿದ್ದರೇ ಎಂದು ಪ್ರಶ್ನೆಯನ್ನು ಮುಂದಿಟ್ಟರು.
ಅಂಬೇಡ್ಕರರನ್ನು ಕಾಂಗ್ರೆಸ್ಸಿಗರು ಸೋಲಿಸಿದ್ದರು. ನಂತರ ಅವರು ಗೆದ್ದ ಕ್ಷೇತ್ರವನ್ನು, ಪವಿತ್ರ ಜಾಗವನ್ನು 1947ರಲ್ಲಿ ನೀವು ಯಾಕೆ ಪಾಕಿಸ್ತಾನಕ್ಕೆ ಬಿಟ್ಟು ಕೊಟ್ಟಿರಿ? ಅವರು ಎಲ್ಲೂ ಗೆಲ್ಲಬಾರದು ಎಂಬ ಕಾರಣಕ್ಕೆ ತಾನೇ ಎಂದು ಕೇಳಿದರು.
ದಲಿತರಿಗೆ ಇಲ್ಲಿ ಭವಿಷ್ಯವಿಲ್ಲ ಎಂದುದು ಯಾಕೆ? ಹರಿಪ್ರಸಾದ್ ಅವರು ಇದಕ್ಕೂ ಉತ್ತರಿಸಬೇಕು ಎಂದು ಒತ್ತಾಯಿಸಿದರು. ಗಾಂಧಿ ಕುಟುಂಬಕ್ಕೆ ಸುಮಾರು 100 ಎಕರೆ ಭೂಮಿಯನ್ನು ದೆಹಲಿಯಲ್ಲಿ ಕೊಟ್ಟಿದ್ದ ನೀವು ದೆಹಲಿಯಲ್ಲೇ ಡಾ.ಬಾಬಾಸಾಹೇಬ ಅಂಬೇಡ್ಕರರು ಸ್ವರ್ಗಸ್ಥರಾದಾಗ ಅವರ ಅಂತ್ಯಕ್ರಿಯೆಗೆ ಯಾಕೆ ದೆಹಲಿಯಲ್ಲೇ ಜಾಗ ಕೊಡಲಿಲ್ಲ. ಇಂಥ ಕಾರಣಕ್ಕೆ ಕೊಟ್ಟಿಲ್ಲ ಎಂದು ನೀವು ಜನರ ಮುಂದೆ ಭಾಷಣ ಮಾಡಿ ತಿಳಿಸಬೇಕೆಂದು ಒತ್ತಾಯಿಸಿದರು.
ಕಾಂಗ್ರೆಸ್ ಎಂಬುದೇ ಒಂದು ನಕಲಿ ಕಾಂಗ್ರೆಸ್, ಗಾಂಧೀಜಿಯವರೇ ಸ್ವಾತಂತ್ರ್ಯ ಬಂದಿದೆ. ಈ ಪಕ್ಷವನ್ನು ವಿಸರ್ಜಿಸಿ ಎಂದು ತಿಳಿಸಿದ್ದರು. ನೀವ್ಯಾಕೆ ಅದೇ ಪಕ್ಷ ಇಟ್ಟುಕೊಂಡಿದ್ದೀರಿ. ನೆಹರೂ ಆದ ಬಳಿಕ ನಿಮಗೆ ಗಾಂಧಿ ಹೆಸರು ಬಂತು. ಇಂದಿರಾ ಗಾಂಧಿ, ರಾಜೀವ್ ಗಾಂಧಿ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಎಲ್ಲಿ ಬಂತು ಗಾಂಧಿ ನಿಮಗೆ? ಈ ಕಾಂಗ್ರೆಸ್ ಫೇಕ್ ಗಾಂಧಿಗಳ ಪಕ್ಷ. ರಿಯಲ್ ಗಾಂಧಿ ಕಾಂಗ್ರೆಸ್ ಇದಲ್ಲವೇ ಅಲ್ಲ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷವು ಅಂಬೇಡ್ಕರರಿಗೆ ಮಾಡಿದ ಅವಮಾನ, ನೋವು, ತೊಂದರೆ, ಹಿಂಸೆಯನ್ನು ಇಡಿಯಾಗಿ ಬಿಡಿಸಿಟ್ಟು, ಇಡೀ ದೇಶ ನೋಡುವಂತೆ ಮಾಡಿ ಕಾಂಗ್ರೆಸ್ ಮುಖವಾಡ ಕಳಚಿದ್ದಾರೆ. ಇದರಿಂದ ಕಾಂಗ್ರೆಸ್ಸಿಗರಿಗೆ ಅವಮಾನವಾಗಿದೆ. ಈಗ ಕಾಂಗ್ರೆಸ್ಸಿಗೆ ನೋವು ಏನೆಂದು ಅರ್ಥವಾಗಿದೆ. ಕಾಂಗ್ರೆಸ್ಸಿಗೆ ಆದ ನೋವು, ಅಪಮಾನವನ್ನು ಅಂಬೇಡ್ಕರರಿಗೆ ಆದ ಅವಮಾನ ಎಂಬಂತೆ ಬಿಂಬಿಸಲು ಹೊರಟಿದ್ದಾರೆ ಎಂದು ಟೀಕಿಸಿದರು.
ಅಂಬೇಡ್ಕರ್ ಎಂದರೆ ನಿಮಗೆ ಆಗುತ್ತಿರಲಿಲ್ಲ. ಅವರ ಬಗ್ಗೆ ಯಾವಾಗ ಕಾಂಗ್ರೆಸ್ಸಿಗರಿಗೆ ಪ್ರೀತಿ ಬಂತು? ಅಂಬೇಡ್ಕರರು ಕಾಂಗ್ರೆಸ್ ಒಂದು ಸುಡುವ ಮನೆ ಎಂದಿದ್ದರು. ದಲಿತರಿಗೆ ಅಲ್ಲಿ ಭವಿಷ್ಯವಿಲ್ಲ ಎಂದು ದೂರವಿಟ್ಟ ಮೇಲೆ ನಿಮಗೆ ಅವರ ಬಗ್ಗೆ ಇದ್ದಕ್ಕಿದ್ದಂತೆ ಪ್ರೀತಿ ಬರಲು ಕಾರಣವೇನು ಎಂದು ಪ್ರಶ್ನಿಸಿದರು.
ಪ್ರಿಯಾಂಕ್ ಖರ್ಗೆಯವರು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆದರೆ, ನಾನು ಬಾಬಾಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದೇನೆ. ಅವರು ನೈಜ ಅಂಬೇಡ್ಕರ್ ವಾದಿ ಅಲ್ಲ, ನಾನು ನಿಜವಾದ ಅಂಬೇಡ್ಕರ್ ವಾದಿ ಎಂದು ತಿಳಿಸಿದರು.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications