ಲೋಕಾಯುಕ್ತದಲ್ಲಿ ಕೋಟಿ ಡೀಲ್, ಸಿಸಿಬಿ ತನಿಖೆ
ಬೆಂಗಳೂರು, ಜೂ.26 : ಲೋಕಾಯುಕ್ತ ಕಚೇರಿಯಲ್ಲಿ ನಡೆದಿದೆ ಎನ್ನಲಾದ ಹಣದ ಬೇಡಿಕೆ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಲಾಗುತ್ತದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರರಾವ್ ಹೇಳಿದ್ದಾರೆ. ಲೋಕಾಯುಕ್ತ ಕಚೇರಿಯಲ್ಲಿ 1 ಕೋಟಿ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣ ಕೆಲವು ದಿನಗಳ ಹಿಂದೆ ಬೆಳಕಿಗೆ ಬಂದಿತ್ತು.
ಶುಕ್ರವಾರ
ಲೋಕಾಯುಕ್ತ
ಕಚೇರಿಯಲ್ಲಿ
ಪತ್ರಿಕಾಗೋಷ್ಠಿ
ನಡೆಸಿದ
ನ್ಯಾ.ವೈ.ಭಾಸ್ಕರರಾವ್
ಅವರು,
'ಲೋಕಾಯುಕ್ತ
ಕಚೇರಿಯಲ್ಲಿಯೇ
ಸರ್ಕಾರಿ
ಅಧಿಕಾರಿಯೊಬ್ಬರ
ಬಳಿ
1
ಕೋಟಿ
ರೂ.ಗೆ
ಬೇಡಿಕೆಯಿಟ್ಟ
ಪ್ರಕರಣದ
ಬಗ್ಗೆ
ಸಿಸಿಬಿ
ತನಿಖೆ
ನಡೆಸಲಾಗುತ್ತದೆ.
ತಮ್ಮ
ಮೇಲಿನ
ಆರೋಪ
ಸಾಬೀತಾದರೆ
ರಾಜೀನಾಮೆ
ನೀಡುತ್ತೇನೆ'
ಎಂದು
ತಿಳಿಸಿದರು.
[ಕೋಟಿ
ಡೀಲ್
ವರದಿ
ಕೇಳಿದ
ಉಪ
ಲೋಕಾಯುಕ್ತರು]
'ಈ ಪ್ರಕರಣದಲ್ಲಿ ನನ್ನ ಮಗ ಅಶ್ವಿನ್ ರಾವ್ ಹೆಸರನ್ನು ಅನಗತ್ಯವಾಗಿ ತರಲಾಗುತ್ತಿದೆ. ಈ ಪ್ರಕರಣಕ್ಕೂ ನನ್ನ ಮಗನಿಗೂ ಸಂಬಂಧವಿಲ್ಲ' ಎಂದು ಸ್ಪಷ್ಟಪಡಿಸಿದರು. 'ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ನನಗೆ ಅಧಿಕಾರವಿಲ್ಲ. ಆದ್ದರಿಂದ, ಸಿಸಿಬಿ ತನಿಖೆಗೆ ವಹಿಸುತ್ತಿದ್ದೇನೆ' ಎಂದು ಭಾಸ್ಕರರಾವ್ ಹೇಳಿದರು. [ಕರ್ನಾಟಕದಿಂದ ವರ್ಗಾವಣೆ ಬಯಸಿಲ್ಲ : ಸೋನಿಯಾ ನಾರಂಗ್]
ಲೋಕಾಯುಕ್ತದಲ್ಲಿ ಕೃಷ್ಣರಾವ್ ಎಂಬವರು ಡೀಲ್ ನಡೆಸುತ್ತಿದ್ದಾರೆ ಎನ್ನುವ ಆರೋಪದ ಕುರಿತು ಮಾತನಾಡಿದ ಲೋಕಾಯುಕ್ತರು, 'ಕೃಷ್ಣ ರಾವ್ ಯಾರು? ಎಂಬುದು ನನಗೆ ತಿಳಿದಿಲ್ಲ. ಕೃಷ್ಣರಾವ್ ನನ್ನ ಸಹಾಯಕರಲ್ಲ. ಕೃಷ್ಣರಾವ್ ಅವರ ಜೊತೆ ನಾನು ಕೆಲಸ ಮಾಡಿಲ್ಲ. ನನ್ನ ಸಹಾಯಕರ ಹೆಸರು ಉಪಾಧ್ಯಾಯ' ಎಂದು ಸ್ಪಷ್ಟನೆ ನೀಡಿದರು.
ಲೋಕಾಯುಕ್ತ ಕಚೇರಿಯಲ್ಲಿ ನಡೆದ ಹಣದ ಬೇಡಿಕೆ ಪ್ರಕರಣದ ಕುರಿತು ಜನಾಧಿಕಾರ ಸಂಘರ್ಷ ಪರಿಷತ್ ನೀಡಿದ್ದ ದೂರಿನ ಅನ್ವಯ ಉಪ ಲೋಕಾಯುಕ್ತ ಸುಭಾಷ್ ಬಿ.ಅಡಿ ಅವರು ಲೋಕಾಯಕ್ತ ಎಸ್ಪಿ ಸೋನಿಯಾ ನಾರಂಗ್ ನೇತೃತ್ವದಲ್ಲಿ ತನಿಖೆ ಆದೇಶ ನೀಡಿದ್ದರು. ಆದರೆ, ಇಂದು ಪ್ರಕರಣವನ್ನು ಸಿಸಿಬಿಗೆ ವಹಿಸಲಾಗಿದೆ.
ಏನಿದು ಹಗರಣ : ನಿಮ್ಮ ಮೇಲೆ ದಾಳಿ ನಡೆಯಲಿದೆ, ನಿಮ್ಮ ವಿರುದ್ಧ ದಾಖಲೆಗಳನ್ನು ಸಂಗ್ರಹಣೆ ಮಾಡಲಾಗಿದೆ. ದಾಳಿ ತಪ್ಪಿಸಬೇಕಾದರೆ 1 ಕೋಟಿ ಕೊಡಿ ಎಂದು ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಇಂಜಿನಿಯರ್ ಕೃಷ್ಣಮೂರ್ತಿ ಎಂಬುವವರಿಂದ ಕೃಷ್ಣರಾವ್ ಎಂಬುವವರು ಹಣ ಕೇಳಿದ್ದರು. ಕೃಷ್ಣರಾವ್ ಹಣ ಕೇಳಿದ್ದಾರೆ ಎಂದು ಕೃಷ್ಣಮೂರ್ತಿ ಅವರು ಸೋನಿಯಾ ನಾರಂಗ್ ಅವರ ಬಳಿ ಮೌಖಿಕವಾಗಿ ಹೇಳಿಕೊಂಡಿದ್ದರು.