ಸಿಬಿಐ ಅಧಿಕೃತ ಹೇಳಿಕೆ: ದಾಳಿಯ ವೇಳೆ ಡಿಕೆಶಿ ಮನೆಯಲ್ಲಿ ಸಿಕ್ಕಿದ್ದು ಬರೀ ಪಂಚೆ, ಸೀರೆಯಲ್ಲ
ಬೆಂಗಳೂರು, ಅ 5: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮನೆ ಮತ್ತು ವಿವಿದೆಡೆ ನಡೆದ ಸಿಬಿಐ ದಾಳಿ ಸೋಮವಾರ (ಅ 5) ಸಂಜೆ ಮುಕ್ತಾಯಗೊಂಡಿದೆ. ಇದಾದ ನಂತರ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಡಿಕೆಶಿ, "ತಿಹಾರ್ ಜೈಲಿನಿಂದ ಹೊರಗೆ ಬಂದಾಗ, ಕೈಮುಗಿದು ಹೊರಗೆ ಬಂದಿದ್ದೇನೆ, ನೊಂದು ಹೊರಗೆ ಬಂದಿದ್ದೇನೆ"ಎಂದು ಹೇಳಿದರು.
ಇದಕ್ಕೂ ಮೊದಲು ಸದಾಶಿವ ನಗರದ ನಿವಾಸದಲ್ಲಿ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಡಿ.ಕೆ.ಶಿವಕುಮಾರ್,"ನೀವು ತೋರಿದ ಪ್ರೀತಿಗೆ ಆಭಾರಿಯಾಗಿದ್ದೇನೆ. ಈ ಜನ್ಮದಲ್ಲಿ ಇದನ್ನು ಮರೆಯುವುದಿಲ್ಲ"ಎಂದು ಭಾವನಾತ್ಮಕವಾಗಿ ನುಡಿದರು.
"ಮುಂಬೈನಲ್ಲಿ ಮೂರು ಕೋಟಿ ಸಿಕ್ಕಿತು, ಬೆಂಗಳೂರಿನಲ್ಲಿ ಐವತ್ತು ಲಕ್ಷ ಸಿಕ್ಕಿತು ಎಂದು ಮಾಧ್ಯಮದದಲ್ಲಿ ವರದಿಯಾಗಿದೆ. ಹಾರೆ, ಪಿಕ್ಕಾಸಿನಿಂದ ಬಾಗಿಲು ಒಡೆದರು ಎಂದೆಲ್ಲಾ ಮಾಧ್ಯಮದವರು ವರದಿ ಮಾಡಿದರು. ಆದರೆ, ಈ ಬಗ್ಗೆ ನನಗೆ ಬೇಸರವಿಲ್ಲ"ಎಂದು ಡಿಕೆಶಿ ಹೇಳಿದರು.
"ಸಿಬಿಐ ದಾಳಿಯ ವೇಳೆ ಪಂಚೆ, ಸೀರೆ, ಪ್ಯಾಂಟ್, ಶರ್ಟ್ ಸಿಕ್ಕಿದೆ, ಅದನ್ನು ಅಧಿಕಾರಿಗಳು ತೆಗೆದುಕೊಂಡಿದ್ದಾರೆ"ಎಂದು ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದರು. ಆದರೆ, ಅಧಿಕೃತವಾಗಿ ಡಿಕೆಶಿ ಮನೆಯಲ್ಲಿ ಸಿಕ್ಕಿದ್ದೇನು?ಮುಂದೆ ಓದಿ..

ಡಿ.ಕೆ.ಶಿವಕುಮಾರ್
ನನ್ನ ಮನೆಯಲ್ಲಿ 1.77ಲಕ್ಷ, ನನ್ನ ತಮ್ಮನ ದೆಹಲಿ ನಿವಾಸದಲ್ಲಿ ಒಂದೆರಡು ಲಕ್ಷ ರೂಪಾಯಿ ಸಿಕ್ಕಿರಬಹುದು. ಇನ್ನು ನನ್ನ ತಾಯಿಯ ಮನೆಯಲ್ಲಿ ಏನೇನು ಸಿಕ್ಕಿದೆ ಎನ್ನುವುದು ನನಗೆ ತಿಳಿದಿಲ್ಲ. ದಾಳಿಯ ವೇಳೆ, ಬೇರೆಯವರ ಮನೆಯಲ್ಲಿ ಏನೇನು ಸಿಕ್ಕಿದರೆ, ಅದಕ್ಕೆ ನಾನು ಜವಾಬ್ದಾರನಲ್ಲ"ಎಂದು ಡಿ.ಕೆ.ಶಿವಕುಮಾರ್ ಹೇಳಿದರು. (ಚಿತ್ರ: ಡಿಕೆಶಿ ಮನೆ, ಕೃಪೆ ಪಿಟಿಐ)

ಸಿಬಿಐ ಅಧಿಕೃತವಾಗಿ ಈ ಸಂಬಂಧ ಟ್ವಿಟ್ಟರ್ ಮೂಲಕ ಸ್ಪಷ್ಟನೆ
ದಾಳಿಯ ವೇಳೆ 57ಲಕ್ಷ ರೂಪಾಯಿ ಹಣವನ್ನು ವಶ ಪಡಿಸಿಕೊಳ್ಳಲಾಗಿದೆ. ಇದಲ್ಲದೇ, 74.93ಕೋಟಿ ಮೌಲ್ಯದ ಅಕ್ರಮ ಆಸ್ತಿ ಹೊಂದಿರುವ ಆರೋಪದ ಮೇಲೆ ಡಿಕೆಶಿ ಮತ್ತು ಇತರರ ಮೇಲೆ ಪ್ರಕರಣವೂ ದಾಖಲಾಗಿದೆ ಎಂದು. ಸಿಬಿಐ ಅಧಿಕೃತವಾಗಿ ಈ ಸಂಬಂಧ ಟ್ವಿಟ್ಟರ್ ಮೂಲಕ ಸ್ಪಷ್ಟ ಪಡಿಸಿದೆ.

ಡಿಕೆಶಿ ಒಡೆತನಕ್ಕೆ ಸಂಬಂಧಿಸಿದ ದಾಖಲೆಗಳು
ಕರ್ನಾಟಕದ ಒಂಬತ್ತು, ದೆಹಲಿಯ ನಾಲ್ಕು ಮತ್ತು ಮುಂಬೈನ ಒಂದು ಕಡೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ ಎಂದು ಸಿಬಿಐ ಹೇಳಿದೆ. ಇದರ ಜೊತೆಗೆ, ಡಿಕೆಶಿ ಒಡೆತನಕ್ಕೆ ಸಂಬಂಧಿಸಿದ ದಾಖಲೆಗಳು, ಕಂಪ್ಯೂಟರ್ ಹಾರ್ಡ್ ಡಿಸ್ಕ್ ಮತ್ತು ಇತರ ದಾಖಲೆಗಳನ್ನೂ ವಶ ಪಡಿಸಿಕೊಳ್ಳಲಾಗಿದೆ ಎಂದು ಸಿಬಿಐ ಹೇಳಿದೆ.
Recommended Video

ಸತ್ಯವನ್ನೂ ತೋರಿಸಿದ್ದೀರಿ, ಅಸತ್ಯವನ್ನೂ ಹೇಳಿದ್ದೀರಿ
ನನಗೆ ಕೊಟ್ಟಿರುವ ಪಂಚನಾಮ ನನಗೆ ಸಿಕ್ಕ ಶಕ್ತಿ. ನೀವು (ಮಾಧ್ಯಮದವರು) ಇಂದು ಸತ್ಯವನ್ನೂ ತೋರಿಸಿದ್ದೀರಿ, ಅಸತ್ಯವನ್ನೂ ಹೇಳಿದ್ದೀರಿ. ಆದರೆ, ನನ್ನ ಕುಟುಂಬ ಈ ದೇಶದ ಕಾನೂನಿಗೆ ಬೆಲೆ ಕೊಡುವವರು. ಇಂತಹ ದಾಳಿಯಿಂದ ನನ್ನನ್ನು ಕುಗ್ಗಿಸಬಹುದು ಎಂದರೆ ಅದು ಸಾಧ್ಯವಿಲ್ಲ"ಎಂದು ಡಿಕೆಶಿ ಹೇಳಿದರು.
-
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Railway Food: ರೈಲು ಪ್ರಯಾಣಿಕರ ಬಳಿ ಬರುತ್ತೆ ಆಹಾರ: ರೈಲ್ವೆ ಇಲಾಖೆಗೆ ಕಂಪನಿಗಳ ಸಾಥ್ -
ಭಾರತೀಯ ರೈಲ್ವೆಯ ಹೊಸ ಹೆಜ್ಜೆ: 12 ಸ್ಲೀಪರ್ ವಂದೇ ಭಾರತ್ ರೈಲುಗಳ ಪರಿಚಯ, ಎಲ್ಲೆಲ್ಲಿ-ಯಾವಾಗ? -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ












Click it and Unblock the Notifications