ಕಾವೇರಿ ವಿವಾದ : ಸರ್ವಪಕ್ಷ ಸಭೆ ಕರೆದ ಸಿದ್ದರಾಮಯ್ಯ
ಬೆಂಗಳೂರು, ಸೆಪ್ಟೆಂಬರ್ 06 : ತಮಿಳುನಾಡಿಗೆ ನೀರು ಹರಿಸಬೇಕು ಎಂಬ ಸುಪ್ರೀಂಕೋರ್ಟ್ ಆದೇಶವನ್ನು ಖಂಡಿಸಿ ಮಂಗಳವಾರ ಮಂಡ್ಯ ಬಂದ್ಗೆ ಕರೆ ನೀಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ ನಡೆ ಬಗ್ಗೆ ಚರ್ಚಿಸಲು ಸರ್ವಪಕ್ಷ ಸಭೆ ಕರೆದಿದ್ದಾರೆ.
ಮಂಗಳವಾರ
ಸಂಜೆ
ವಿಧಾನಸಭೆ
ಮತ್ತು
ವಿಧಾನಪರಿಷತ್
ಪ್ರತಿಪಕ್ಷ
ನಾಯಕರ
ಸಭೆಯಲ್ಲಿ
ಮುಖ್ಯಮಂತ್ರಿಗಳು
ಕರೆದಿದ್ದಾರೆ.
ಸುಪ್ರೀಂಕೋರ್ಟ್
ಆದೇಶದ
ಬಗ್ಗೆ
ಸಭೆಯಲ್ಲಿ
ಚರ್ಚೆ
ನಡೆಸಲಾಗುತ್ತದೆ
ಮತ್ತು
ಮುಂದಿನ
ಹೋರಾಟದ
ಕುರಿತು
ಚರ್ಚಿಸಿ,
ತೀರ್ಮಾನವನ್ನು
ಕೈಗೊಳ್ಳಲಾಗುತ್ತದೆ.[Live
:
ಕಾವೇರಿ
ವಿವಾದ,
ಮಂಡ್ಯ
ಬಂದ್
ಕ್ಷಣ-ಕ್ಷಣದ
ಮಾಹಿತಿ]
ತಮಿಳುನಾಡಿಗೆ ನೀರು ಹರಿಸಬೇಕು ಎಂಬ ಸುಪ್ರೀಂಕೋರ್ಟ್ ಆದೇಶ ಖಂಡಿಸಿ ಕಾವೇರಿ ಹಿತರಕ್ಷಣಾ ವೇದಿಕೆ ಮಂಗಳವಾರ ಮಂಡ್ಯ ಬಂದ್ಗೆ ಕರೆ ನೀಡಿದೆ. ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.[ಕಾವೇರಿ ವಿವಾದ ಸೆ.9ರಂದು ಕರ್ನಾಟಕ ಬಂದ್]
10 ದಿನಗಳ ಕಾಲ ಪ್ರತಿದಿನ 15 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡುವಂತೆ ಸುಪ್ರೀಂಕೋರ್ಟ್ ಸೋಮವಾರ ಆದೇಶ ನೀಡಿದೆ. ಎರಡೂ ರಾಜ್ಯಗಳು ಮೇಲುಸ್ತುವಾರಿ ಸಮಿತಿಗೆ ನೀರಿನ ಪ್ರಮಾಣ ಎಷ್ಟಿದೆ? ಎಂದು ಮಾಹಿತಿ ನೀಡಬೇಕು ಎಂದು ಸೂಚನೆ ನೀಡಿದೆ.[ಕಾವೇರಿ ತೀರ್ಪು: ರಾಜ್ಯ ಸರ್ಕಾರ ರೈತರ ಕ್ಷಮೆ ಕೇಳಲಿ]
ಈ ವರ್ಷದ ಆಗಸ್ಟ್ 31ರ ತನಕ ಕೇವಲ 33 ಟಿಎಂಸಿ ನೀರನ್ನು ಮಾತ್ರ ಬಿಡುಗಡೆ ಮಾಡಲಾಗಿದೆ ಎಂದು ತಮಿಳುನಾಡು ಸುಪ್ರೀಂಕೋರ್ಟ್ನಲ್ಲಿ ಹೇಳಿದೆ. ಉತ್ತಮವಾಗಿ ಮಳೆಯಾದಾಗ ಕರ್ನಾಟಕ 98 ಟಿಎಂಸಿ ನೀರನ್ನು ಹರಿಬಿಡಬೇಕು ಎಂದು ತಮಿಳುನಾಡು ಕೋರ್ಟ್ಗೆ ಹೇಳಿದೆ.