ಕಾವೇರಿ ಕೇಸ್ : ನಾರಿಮನ್ ಆಯ್ಕೆ ಮಾಡಿದ್ದು ಯಾರು?
ಬೆಂಗಳೂರು, ಸೆ. 07: ಕಾವೇರಿ ಜಲವಿವಾದ ಪ್ರಕರಣದಲ್ಲಿ ಕರ್ನಾಟಕದ ಪರ ವಾದ ಮಂಡಿಸಲು ಹಿರಿಯ ವಕೀಲರಾದ ಫಾಲಿ ನಾರಿಮನ್ ಅವರನ್ನು ಆಯ್ಕೆ ಮಾಡಿದ್ದು ಯಾರು? ಅಸಲಿಗೆ ವಕೀಲರ ಆಯ್ಕೆ ಪ್ರಕಿಯೆ ಹೀಗೆ ನಡೆಯುತ್ತದೆ ಎಂಬುದರ ಬಗ್ಗೆ ಸ್ಥೂಲ ಚಿತ್ರಣ ಇಲ್ಲಿದೆ.
ರಾಜ್ಯಕ್ಕೆ ಪದೇ ಪದೆ ಸೋಲುಂಟಾಗುತ್ತಿರುವುದಕ್ಕೆ ಫಾಲಿ ನಾರಿಮನ್ ಹಾಗೂ ಅವರ ತಂಡವೇ ಕಾರಣ. ಸಮರ್ಥವಾಗಿ ವಾದ ಮಂಡಿಸದ ಕಾರಣ, ಕರ್ನಾಟಕ ವಕೀಲರ ಆಯೋಗದ ಮುಖ್ಯಸ್ಥರಾದ ಫಾಲಿ ಎಸ್ ನಾರಿಮನ್ ಅವರನ್ನು ಬದಲಾಯಿಸುವಂತೆ ಎಂದು ಮಾಜಿ ಸಂಸದ, ಕಾವೇರರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ ಮಾದೇಗೌಡ ಅವರು ಆಗ್ರಹಿಸಿದ್ದು, ಇದಕ್ಕೆ ವ್ಯತಿರಿಕ್ತವಾಗಿ ಕರ್ನಾಟಕ ಸರ್ಕಾರ ಪ್ರತಿಕ್ರಿಯಿಸಿದ್ದು ಓದಿರಬಹುದು. [ಫಾಲಿ ನಾರಿಮನ್ ತೆಗೆದು ಹಾಕಿ, ಬೇಡಿಕೆಗೆ ಸೊಪ್ಪು ಹಾಕದ ಸಿಎಂ]
ಆಯ್ಕೆ ಪ್ರಕ್ರಿಯೆ : ಈ ಕೇಸಿನಲ್ಲಿ ವಾದ ಮಂಡಿಸಲು ಫಾಲಿ ನಾರಿಮನ್ ಅವರು ಸಮರ್ಥರಾಗಿದ್ದಾರೆ. ಇದರಲ್ಲಿ ಎರಡು ಮಾತಿಲ್ಲ. ಒಮ್ಮೆ ಕಾನೂನಿನ ಮೂಲಕ ಹೋರಾಟ ನಡೆಸಬೇಕು ಎಂದು ನಿರ್ಧರಿಸಿದ ಮೇಲೆ ವಕೀಲರ ಆಯೋಗ ನೇಮಕ ಮಾಡಬೇಕಾಗುತ್ತದೆ. ರಾಜ್ಯದ ಕಾನೂನು ಸಚಿವರ ನೇತೃತ್ವದ ನಡೆಸಲಾಗುತ್ತದೆ. ಕಾನೂನು ಕಾರ್ಯದರ್ಶಿ, ಅಡ್ವೊಕೇಟ್ ಜನರಲ್ ಉಪಸ್ಥಿತರಿರುತ್ತಾರೆ.[ತಮಿಳುನಾಡು ಸರ್ಕಾರಕ್ಕೆ ಸುಬ್ರಮಣ್ಯಯನ್ ಸ್ವಾಮಿ ಸಲಹೆ?]
ಈ ಸಭೆಯಲ್ಲಿ ಹಿರಿಯ ವಕೀಲರ ಹೆಸರನ್ನು ನಿರ್ಧರಿಸಲಾಗುತ್ತದೆ. ಆ ವಕೀಲರಿಗೆ ಮನವಿ ಮಾಡಲಾಗುತ್ತದೆ. ಅವರು ಒಪ್ಪಿಗೆ ಸೂಚಿಸಿದ ನಂತರ ಆ ವಕೀಲರ ಹೆಸರನ್ನು ಅಂದಿನ ಮುಖ್ಯಮಂತ್ರಿ ಅಂತಿಮಗೊಳಿಸುತ್ತಾರೆ.[ಸೆ.9ರ ಕರ್ನಾಟಕ ಬಂದ್ ಬಿಸಿ ಎಲ್ಲಿಗೆ ತಟ್ಟಲಿದೆ?]
ನಂತರ ಹಿರಿಯ ವಕೀಲರು, ಕಾನೂನು ಕಾರ್ಯದರ್ಶಿ ಹಾಗೂ ಅಡ್ವೊಕೇಟ್ ಜನರಲ್ ಅವರ ಮಾರ್ಗದರ್ಶನಲ್ಲಿ ವಕೀಲರ ಆಯೋಗ ನೇಮಕವಾಗುತ್ತದೆ. [ತಮಿಳುನಾಡಿಗೆ ಕಾವೇರಿ ನೀರು, ಸೋಮವಾರ ಸುಪ್ರೀಂಗೆ ಅರ್ಜಿ]

ವಕೀಲರಿಗೆ ಎಷ್ಟು ಮೊತ್ತ ನೀಡಲಾಗುತ್ತದೆ?:
ಸುಪ್ರೀಂಕೋರ್ಟ್ ನಲ್ಲಿ ವಾದ ಮಂಡನೆಗೂ ಮುನ್ನ ಕಾವೇರಿ ನೀರು ವಿವಾದ ನ್ಯಾಯಾಧಿಕರಣದ ಮುಂದೆ ನಾರಿಮನ್ ನೇತೃತ್ವದ ವಕೀಲರ ಆಯೋಗಕ್ಕೆ ಕರ್ನಾಟಕ ನೀಡಿರುವ ಮೊತ್ತ ಎಷ್ಟು ಎಂಬ ಪ್ರಶ್ನೆಗೆ ಪುರಶ್ಕಾರ ಫೋರಮ್ ನ ಕೃಷ್ಣ ಜೋಶಿ ಅವರು 2007ರಲ್ಲಿ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಉತ್ತರ ಕಂಡುಕೊಂಡಿದ್ದರು. ಅಂದಿನಿಂದ ಇಂದಿನವರೆಗೂ ಹೆಚ್ಚು ಕಮ್ಮಿ ವಕೀಲರ ಆಯೋಗಕ್ಕೆ ಸರಾಸರಿ ಅಷ್ಟೇ ಮೊತ್ತ ಸಿಗುತ್ತಿದೆ ಎಂಬ ಮಾಹಿತಿ ಇದೆ.[ಫಾಲಿ ನಾರಿಮನ್ ತೆಗೆದು ಹಾಕಿ, ಬೇಡಿಕೆಗೆ ಸೊಪ್ಪು ಹಾಕದ ಸಿಎಂ]
* ಕರ್ನಾಟಕ ಸರಿ ಸುಮಾರು 23.44 ಕೋಟಿ ರು ಮೊತ್ತ ನೀಡಿದೆ.
* ವಕೀಲರಿಗೆ ವಾದ ಮಂಡನೆಗೆ ಮೊತ್ತ, ಹೋಟೆಲ್ ಖರ್ಚು ವೆಚ್ಚ ಸೇರಿಸಿ ಎಲ್ಲವನ್ನು ಲೋಕೋಪಯೋಗಿ ಇಲಾಖೆ ನೀಡಿದ ಬಜೆಟ್ ನಂತೆ ಪಾವತಿಸಲಾಗುತ್ತದೆ.
* ಹಿರಿಯ ವಕೀಲ ಅನಿಲ್ ದಿವಾನ್ ಅವರಿಗೆ 9.66 ಕೋಟಿ ರು
* ಫಾಲಿ ಎಸ್ ನಾರಿಮನ್ ಅವರಿಗೆ 2.08 ಕೋಟಿ ರು (ಬೆಂಗಳೂರಿನಿಂದ ದೆಹಲಿಗೆ ಪ್ರಯಾಣ ವೆಚ್ಚ ಸೇರಿಸಿ)
* ಮೋಹನ್ ಕಾತರಿಕಿ ಅವರಿಗೆ 2.75 ಕೋಟಿ ರು
* ಎಸ್ಎಸ್ ಜವಳಿ ಅವರಿಗೆ 3.77 ಕೋಟಿ ರು
* ಶಂಬು ಪ್ರಸಾದ್ ಸಿಂಗ್ ಅವರಿಗೆ 2.41 ಕೋಟಿ ರು ನೀಡಲಾಗಿತ್ತು.[ಇಂದೂ ಬೆಂಗಳೂರು-ಮೈಸೂರು ರಸ್ತೆ ಬಂದ್?]
ಇದಲ್ಲದೆ 10 ಮಂದಿ ಅಡ್ವೊಕೇಟ್ ಜನರಲ್ ಅವರಿಗೆ 1990 ರಿಂದ 2007ರ ತನಕ 1.34 ಕೋಟಿ ರು ಮೊತ್ತ ನೀಡಲಾಗಿದೆ. ಹೆಚ್ಚಿನ ವಿವರವನ್ನು ಇಲ್ಲಿ ಪಡೆದುಕೊಳ್ಳಿ
-
ಸದನದಲ್ಲಿ ಬಜೆಟ್ ಚರ್ಚೆ: ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ -
"5 ತಿಂಗಳಾದ್ರೂ ಸಿಗದ ದಸರಾ ಲೆಕ್ಕ: ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ'' -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL












Click it and Unblock the Notifications