ನೀತಿ ಸಂಹಿತೆ ಜಾರಿ ನಂತರವೂ ಸಿಗುತ್ತಿವೆ ಲೆಕ್ಕವಿರದಷ್ಟು ಟಿವಿ, ಗಡಿಯಾರ, ಸೀರೆ, ನಗದು: ಯಾವ ಜಿಲ್ಲೆ? ಯಾರ ಕ್ಷೇತ್ರ ತಿಳಿಯಿರಿ

ಬೆಂಗಳೂರು, ಮಾರ್ಚ್‌ 30: ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಕರ್ನಾಟಕದ ವಿವಿಧೆಡೆ ಚುನಾವಣಾಧಿಕಾರಿಗಳು ಮತ್ತು ಪೊಲೀಸರು ನಗದು ಮತ್ತು ಉಡುಗೊರೆಗಳನ್ನು ವಶಪಡಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಮೇ 10ರಂದು ಚುನಾವಣೆ ನಡೆಯಲಿದ್ದು, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ. ಯಾವ ಜಿಲ್ಲೆಯಲ್ಲಿ ಈ ಉಡುಗೊರೆಗಳು ಸಿಕ್ಕಿವೆ ಎಂದು ತಿಳಿಯಿರಿ.

ಬಾಗಲಕೋಟೆ

ಬಾಗಲಕೋಟೆಯಲ್ಲಿ ಮತದಾರರಿಗೆ ಹಂಚಲು ಸಾಗಿಸುತ್ತಿದ್ದ 99 ಎಲ್‌ಇಡಿ ಟಿವಿ ಹಾಗೂ 11 ಸೌಂಡ್ ಸಿಸ್ಟಂಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹೈದರಾಬಾದ್‌ನಿಂದ ಬಾಗಲಕೋಟೆಗೆ ವಸ್ತುಗಳನ್ನು ಸಾಗಿಸಲಾಗುತ್ತಿತ್ತು. ವಸ್ತುಗಳನ್ನು ಸಾಗಿಸುತ್ತಿದ್ದ ವಾಹನದ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ.

Cash and goodies meant for distribution among voters seized across Karnataka

ಮತದಾರರಿಗೆ ಹಂಚಲು ಗೋಡೆ ಗಡಿಯಾರಗಳನ್ನು ಸಾಗಿಸುತ್ತಿದ್ದ ಎರಡು ಕಂಟೈನರ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಗೋಡೆ ಗಡಿಯಾರದಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಎಸ್ ಆರ್ ಪಾಟೀಲ್ ಅವರ ಫೋಟೋವನ್ನು ಮುದ್ರಿಸಲಾಗಿದೆ. ವಶಪಡಿಸಿಕೊಂಡ ಗೋಡೆ ಗಡಿಯಾರಗಳು 34 ಲಕ್ಷ ರೂ. ಮೌಲ್ಯದ್ದಾಗಿದೆ.

ಗದಗ

ಗದಗದ ತಾಲ್ಲೂಕಿನ ಹುಲಕೋಟೆಯಲ್ಲಿ 66, 980 ಮೌಲ್ಯದ 103 ಸೀರೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸೀರೆ ಸಾಗಿಸುತ್ತಿದ್ದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ಚಿಕ್ಕಮಗಳೂರು

ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಮೂಡಿಗೆರೆ ಶಾಸಕ ಕುಮಾರಸ್ವಾಮಿ ವಿರುದ್ಧ ಚುನಾವಣಾಧಿಕಾರಿ ಪ್ರಕರಣ ದಾಖಲಿಸಿದ್ದಾರೆ. ಮೂಡಿಗೆರೆ ತಾಲೂಕು ಚುನಾವಣಾಧಿಕಾರಿ ಪಿ. ರಾಜೇಶ್ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕುಮಾರಸ್ವಾಮಿ ಅವರು ಮಹಿಳಾ ಮತದಾರರಿಗೆ ಚೆಕ್ ವಿತರಿಸುವ ಕಾರ್ಯಕ್ರಮವನ್ನು ತಮ್ಮ ಮನೆಯಲ್ಲಿ ಆಯೋಜಿಸಿದ್ದರು ಎನ್ನಲಾಗಿದೆ.

Cash and goodies meant for distribution among voters seized across Karnataka

ರಾಮನಗರ

ರಾಮನಗರದ ಹನುಮಂತನಗರ ಚೆಕ್ ಪೋಸ್ಟ್ ಬಳಿ ಬಿಡದಿ ಪೊಲೀಸರು ಲೆಕ್ಕಕ್ಕೆ ಸಿಗದ 5 ಲಕ್ಷ ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ. ಬೆಂಗಳೂರಿನಿಂದ ಮೈಸೂರಿಗೆ ಕಾರಿನಲ್ಲಿ ನಗದು ಸಾಗಿಸಲಾಗುತ್ತಿತ್ತು.

ಬೆಂಗಳೂರು

ಕಾಂಗ್ರೆಸ್ ಮುಖಂಡ ಕೃಷ್ಣ ಬೈರೇಗೌಡ ಅವರು ಚುನಾವಣಾಧಿಕಾರಿಗಳ ವಿರುದ್ಧ ತಾರತಮ್ಯ ಆರೋಪದ ಮೇಲೆ ದೂರು ದಾಖಲಿಸಿದ್ದಾರೆ. ಬೈರೇಗೌಡ ಅವರು ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಿದರು. ಹಣ ಹಂಚಲು ಯತ್ನಿಸುತ್ತಿರುವ ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಚುನಾವಣಾಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬೈರೇಗೌಡ ಆರೋಪಿಸಿದರು.

ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ, 5.5 ಲಕ್ಷ ರೂಪಾಯಿ ನಗದು, ಎಸ್‌ಯುವಿ ಮತ್ತು ಕಿಚನ್ ಸೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

Cash and goodies meant for distribution among voters seized across Karnataka

ತಲಘಟ್ಟಪುರ ಪೊಲೀಸರು ಮಾರ್ಚ್ 26 ರಂದು ಸಂಜೆ 6.30 ರ ಸುಮಾರಿಗೆ ಬನಶಂಕರಿ 6 ನೇ ಹಂತದಲ್ಲಿ ( 100 ಅಡಿ ರಸ್ತೆ, ನೈಸ್ ರಸ್ತೆ ಜಂಕ್ಷನ್‌ ) ಮಾರುತಿ ಸುಜುಕಿ ವಿಟಾರಾ ಬ್ರೆಜ್ಜಾವನ್ನು ತಡೆದರು.

ಹಿಂಬದಿ ಸೀಟಿನಲ್ಲಿ ಪೊಲೀಸರಿಗೆ ಸಿಕ್ಕ 5,54,440 ರೂ. ನಗದು ಬಗ್ಗೆ ಕೇಳಿದಾಗ, ಕಾರು ಚಾಲಕ ರಾಜು ಎಸ್ ಅವರು ಖಾಸಗಿ ಸಂಸ್ಥೆಯೊಂದರಲ್ಲಿ ಕ್ಯಾಷಿಯರ್ ಕಲೆಕ್ಟರ್ ಆಗಿದ್ದು, ಹಣವು ಅವರ ಮಾಲೀಕರಿಗೆ ಸೇರಿದೆ ಎಂದು ಪೊಲೀಸರಿಗೆ ತಿಳಿಸಿದರು. ಆದರೆ ನಗದನ್ನು ತೋರಿಸಲು ಆತನ ಬಳಿ ಯಾವುದೇ ದಾಖಲೆ ಇರಲಿಲ್ಲ.

ಇನ್ನೊಂದು ಪ್ರಕರಣದಲ್ಲಿ ಶೇಷಾದ್ರಿಪುರಂನ ಸಿರೂರ್ ಪಾರ್ಕ್‌ನಲ್ಲಿರುವ ಆರ್ ಗುಂಡೂರಾವ್ ಕ್ರೀಡಾಂಗಣದಿಂದ ಮಾರ್ಚ್ 25 ರಂದು ರಾತ್ರಿ 9.30 ರ ಸುಮಾರಿಗೆ 165 ಬಾಕ್ಸ್‌ಗಳನ್ನು ತೆರಿಗೆ ನಿರೀಕ್ಷಕ ಆನಂದ್ ಎ ಒ ಮತ್ತು ಅವರ ತಂಡ ವಶಪಡಿಸಿಕೊಂಡಿದೆ. ಪ್ರತಿ ಪೆಟ್ಟಿಗೆಯು 11 ಸ್ಮಾರ್ಟ್ ಚೆಫ್ ಉಡುಗೊರೆ ಸೆಟ್‌ಗಳನ್ನು ಒಳಗೊಂಡಿದೆ.

ಮಂಗಳವಾರ ರಾತ್ರಿ ಹಲಸೂರು ಗೇಟ್ ಹಾಗೂ ಎಸ್ ಜೆ ಪಾರ್ಕ್ ಪೊಲೀಸರು ಕೆಲವು ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಂಡು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+