ಮಂಡ್ಯದಿಂದ ವಿಜಯೇಂದ್ರ ಚುನಾವಣಾ ಪ್ರವಾಸ, ಸ್ಪರ್ಧಿಸುವ ಕ್ಷೇತ್ರ ಯಾವುದು?
ಪಕ್ಷದ ಏಳು ಮೋರ್ಚಾಗಳು (ವಿಂಗ್ಸ್) ಜಿಲ್ಲಾ ಮಟ್ಟದ ಸಮಾವೇಶಗಳನ್ನು ಆಯೋಜಿಸಲು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಕಿರಿಯ ಪುತ್ರ ವಿಜಯೇಂದ್ರ ಅವರನ್ನು ಸಂಚಾಲಕರನ್ನಾಗಿ ನೇಮಿಸಲಾಗಿದೆ.
ಮಂಡ್ಯ, ಫೆಬ್ರವರಿ 13: ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಫೆಬ್ರವರಿ 20 ರಂದು ಮಂಡ್ಯದಿಂದ ತಮ್ಮ ಚುನಾವಣಾ ಪ್ರವಾಸವನ್ನು ಪ್ರಾರಂಭಿಸಲಿದ್ದು, ಒಕ್ಕಲಿಗ ಪ್ರಾಬಲ್ಯವಿರುವ ಜಿಲ್ಲೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಹೊಂದಿದೆ.
ಪಕ್ಷದ ಏಳು ಮೋರ್ಚಾಗಳು (ವಿಭಾಗ) ಜಿಲ್ಲಾ ಮಟ್ಟದ ಸಮಾವೇಶಗಳನ್ನು ಆಯೋಜಿಸಲು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಕಿರಿಯ ಪುತ್ರ ವಿಜಯೇಂದ್ರ ಅವರನ್ನು ಸಂಚಾಲಕರನ್ನಾಗಿ ನೇಮಿಸಲಾಗಿದೆ. ಅವರು ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲಿ ಸಮಾವೇಶಗಳನ್ನು ಯೋಜಿಸುವ ಮತ್ತು ಸಂಘಟಿಸುವಲ್ಲಿ ಮುಂದಾಳತ್ವ ವಹಿಸಲಿದ್ದಾರೆ. ಅದ್ಯಾಗೂ ತಾವು ಸ್ಪರ್ಧಿಸುವ ಕ್ಷೇತ್ರದ ಮಾಹಿತಿಯನ್ನು ವಿಜಯೇಂದ್ರ ಬಿಟ್ಟುಕೊಟ್ಟಿಲ್ಲ.
ಈ ಬಗ್ಗೆ ವಿಜಯೇಂದ್ರ ಅವರು ಪಕ್ಷ ದುರ್ಬಲವಾಗಿರುವ ಪ್ರದೇಶದಿಂದ ತಮ್ಮ ಪ್ರವಾಸವನ್ನು ಪ್ರಾರಂಭಿಸಲು ಬಯಸಿರುವ ಕಾರಣ ಇಂತಹ ಮೊದಲ ಸಮಾವೇಶ ಮಂಡ್ಯದಲ್ಲಿ ನಡೆಯಲಿದೆ. ಪಕ್ಷದ ಅನೇಕರು ನಾನು ಪ್ರವಾಸವನ್ನು ಭದ್ರಕೋಟೆಯಿಂದ ಪ್ರಾರಂಭಿಸಬೇಕೆಂದು ಸಲಹೆ ನೀಡಿದರು. ಆದರೆ ನನ್ನದು ತಳಮಟ್ಟದ ವಿಧಾನವಾಗಿದೆ. ಹೀಗಾಗಿ ಮಂಡ್ಯದಿಂದಲೇ ಆರಂಭಿಸಬೇಕು ಎಂದು ಒತ್ತಾಯಿಸಿದ್ದೇನೆ ಎಂದರು.
ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡುವ ಅತಿಥಿಗಳ ಪಟ್ಟಿಯನ್ನು ಸಮಿತಿಯು ಸಿದ್ಧಪಡಿಸುತ್ತಿದೆ. ಎಲ್ಲ 224 ಕ್ಷೇತ್ರಗಳಲ್ಲಿ 20 ದಿನಗಳ ಅವಧಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವುದು ನಮ್ಮ ದೊಡ್ಡ ಸವಾಲು. ಫೆಬ್ರವರಿ 20 ರಂದು ಮಂಡ್ಯದಲ್ಲಿ ನಮ್ಮ ಮೊದಲ ಸಮಾವೇಶ ನಡೆಯಲಿದ್ದು, ಮಾರ್ಚ್ 15 ರಂದು ಕೊನೆಯ ಸಮಾವೇಶ ನಡೆಯಲಿದೆ ಎಂದರು.
ಉದಾಹರಣೆಗೆ ಶಿಕಾರಿಪುರದಲ್ಲಿ ಮಹಿಳಾ ಮೋರ್ಚಾ ಜಿಲ್ಲಾ ಮಟ್ಟದ ಸಮಾವೇಶ ನಡೆಸಿದರೆ, ಯುವ ಮೋರ್ಚಾ ಶಿವಮೊಗ್ಗದಲ್ಲಿ ಸಮಾವೇಶ ನಡೆಸಲಿದೆ. ರೈತ ಮೋರ್ಚಾ ತೀರ್ಥಹಳ್ಳಿಯಲ್ಲಿ ಮತ್ತು ಒಬಿಸಿ ಮೋರ್ಚಾ ಸೊರಬದಲ್ಲಿ ಸಮಾವೇಶ ನಡೆಸಬಹುದು. ಈ ಮೂಲಕ ಶಿವಮೊಗ್ಗ ಜಿಲ್ಲೆಯ ಎಲ್ಲ ಏಳು ಕ್ಷೇತ್ರಗಳಿಗೂ ತಲಾ ಒಂದು ಸಮಾವೇಶ ನಡೆಯುತ್ತದೆ,'' ಎಂದು ಹೇಳಿದರು.

ಎಲ್ಲಾ ಮೋರ್ಚಾಗಳ ಸಂಚಾಲಕ ವಿಜಯೇಂದ್ರ
ಬಿಜೆಪಿ ಮೂಲಗಳ ಪ್ರಕಾರ, ಪಕ್ಷದ ಎಲ್ಲಾ ಮೋರ್ಚಾಗಳ ಸಂಚಾಲಕರಾಗಿ ಬಿ ವೈ ವಿಜಯೇಂದ್ರ ಅವರನ್ನು ನೇಮಕ ಮಾಡಿರುವುದು, ವಿಶೇಷವಾಗಿ ಲಿಂಗಾಯತ ಸಮುದಾಯದ ಕಾರ್ಯಕರ್ತರನ್ನು ಬಲಪಡಿಸಲು ರಾಜ್ಯಾದ್ಯಂತ ಪ್ರವಾಸ ಮಾಡುವ ಅವಕಾಶವನ್ನು ನೀಡುವುದಾಗಿದೆ. ವಿಜಯೇಂದ್ರ ಅವರು ತಮ್ಮ ತಂದೆ ಬಿ ಎಸ್ ಯಡಿಯೂರಪ್ಪ ಅವರಿಗೆ ಮತದಾರರಲ್ಲಿ ಇರುವ ಅಭಿಮಾನದ ಲಾಭ ಪಡೆಯುವ ನಿರೀಕ್ಷೆ ಇದೆ.

ಸುಧಾಕರ್ ನೇತೃತ್ವದ ಪ್ರಣಾಳಿಕೆ ಸಮಿತಿ
ಹೈಕಮಾಂಡ್ ಜವಾಬ್ದಾರಿಗಳನ್ನು ವಿತರಿಸುವಲ್ಲಿ ಅಧಿಕಾರದ ಸಮೀಕರಣಗಳಲ್ಲಿ ಸಮತೋಲನವನ್ನು ಸಾಧಿಸಲು ಪ್ರಯತ್ನಿಸಿದೆ. ಆರೋಗ್ಯ ಸಚಿವ ಕೆ ಸುಧಾಕರ್ ನೇತೃತ್ವದ ಪ್ರಣಾಳಿಕೆ ಸಮಿತಿಯಲ್ಲಿ ಯುವ ಮೋರ್ಚಾ ನಾಯಕ ಮತ್ತು ಲೋಕಸಭಾ ಸಂಸದ ತೇಜಸ್ವಿ ಸೂರ್ಯ ಮತ್ತು ಪಕ್ಷದ ದಿವಂಗತ ಅನಂತ್ ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಇದ್ದಾರೆ.

ವಿವಿಧ ಮೋರ್ಚಾಗಳ ಸಮಾವೇಶ
ಬಿಜೆಪಿ ಹೈಕಮಾಂಡ್ ಇತ್ತೀಚೆಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಕಳೆದ ಕೆಲ ಸಮಯದಿಂದ ಮೌನವಾಗಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಚುನಾವಣೆಗೂ ಮುನ್ನ 224 ವಿಧಾನಸಭಾ ಕ್ಷೇತ್ರಗಳಲ್ಲಿ ವಿವಿಧ ಮೋರ್ಚಾಗಳ ಸಮಾವೇಶಗಳನ್ನು ಆಯೋಜಿಸುವ ಸಮಿತಿಯ ನೇತೃತ್ವದ ಜವಾಬ್ದಾರಿಯನ್ನು ನೀಡಿದೆ. ಈ ಹಿಂದೆ ಕೆಲವು ಕ್ಷೇತ್ರಗಳಲ್ಲಿ ಉಪಚುನಾವಣೆ ತಯಾರಿಯ ಉಸ್ತುವಾರಿ ವಹಿಸಿದ್ದ ವಿಜಯೇಂದ್ರ ಅವರಿಗೆ ರಾಜ್ಯ ಮಟ್ಟದ ಚುನಾವಣೆ ಜವಾಬ್ದಾರಿ ನೀಡಿರುವುದು ಇದೇ ಮೊದಲು.

ಸಂಘಟನಾ ಕೌಶಲ್ಯಕ್ಕೆ ಪಕ್ಷದಿಂದ ದೊರೆತ ಮನ್ನಣೆ
ಇದು ಯುವ ನಾಯಕನ ಸಂಘಟನಾ ಕೌಶಲ್ಯಕ್ಕೆ ಪಕ್ಷದಿಂದ ದೊರೆತ ಮನ್ನಣೆ ಎಂದೇ ಬಿಂಬಿಸಲಾಗುತ್ತಿದೆ. ಆದರೆ ಪಕ್ಷದಲ್ಲಿ ಅವರ ಮುಂದಿನ ಬೆಳವಣಿಗೆ ಈ ಸಮಾವೇಶಗಳ ಫಲಿತಾಂಶದ ಮೇಲೆ ಅವಲಂಬಿತವಾಗಿದೆ ಎಂದು ಹೇಳಲಾಗುತ್ತಿದೆ. ಇಂತಹ ಜವಾಬ್ದಾರಿಯನ್ನು ವಿಜಯೇಂದ್ರ ಅವರಿಗೆ ನೀಡಿದರೆ ಯಡಿಯೂರಪ್ಪನವರ ಸೇವೆಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಸಹಾಯವಾಗುತ್ತದೆ ಎಂದು ಕೆಲವು ನಾಯಕರು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications