ಕರ್ನಾಟಕ ರಾಜ್ಯ ಬಜೆಟ್ 2021: ಆದಾಯ ಮತ್ತು ಖರ್ಚಿನ ಲೆಕ್ಕಾಚಾರ ಹೀಗಿದೆ
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಸೋಮವಾರ 8ನೇ ಬಾರಿಗೆ ರಾಜ್ಯ ಬಜೆಟ್ ಅನ್ನು ಮಂಡಿಸಿದರು. ಬರೋಬ್ಬರಿ 2,46,406.92 ಕೋಟಿ ರೂಪಾಯಿ ಬಜೆಟ್ ಮಂಡಿಸಿದ ಬಿಎಸ್ವೈ ಕಳೆದ ಬಾರಿ ಬಜೆಟ್ ಗಾತ್ರ 2,37,893.33 ಕೋಟಿ ರೂಪಾಯಿಗಿಂತ ಸುಮಾರು 8,500 ಕೋಟಿ ರೂಪಾಯಿ ಹೆಚ್ಚಿನ ಗಾತ್ರದ ಬಜೆಟ್ ಮಂಡಿಸಿದ್ದಾರೆ.
Recommended Video
ಕೋವಿಡ್-19 ಸಾಂಕ್ರಾಮಿಕದ ಪರಿಣಾಮ ಆದಾಯ ಕುಸಿತದೊಂದಿಗೆ ಈಗಾಗಲೇ ರಾಜ್ಯದ ಬೊಕ್ಕಸಕ್ಕೆ ಭಾರೀ ನಷ್ಟದ ನಡುವೆ ಈ ಬಜೆಟ್ ಅನ್ನು ಮಂಡಿಸಲಾಯಿತು. ಕಳೆದ ಬಾರಿಗಿಂತ ಶೇಕಡಾ 3.4ರಷ್ಟು ಹೆಚ್ಚಿನ ಗಾತ್ರದ ಬಜೆಟ್ ಅನ್ನು ಬಿಎಸ್ವೈ ಮಂಡಿಸಿದ್ದಾರೆ.

ವಲಯವಾರು ಅನುದಾನ ಹಂಚಿಕೆ ಎಷ್ಟಿದೆ?
ಕೃಷಿ ಮತ್ತು ಪೂರಕ ಚಟುವಟಿಕೆಗಳು -31,028 ಕೋಟಿ ರೂಪಾಯಿ
ಮಹಿಳಾ ಉದ್ದೇಶಿತ ಯೋಜನೆಗಳು - 37,188 ಕೋಟಿ ರೂಪಾಯಿ
ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ- 62,150 ಕೋಟಿ ರೂಪಾಯಿ
ಆರ್ಥಿಕ ಅಭಿವೃದ್ಧಿಗೆ ಪ್ರಚೋದನೆ ನೀಡಲು- 52,529 ಕೋಟಿ ರೂಪಾಯಿ
ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿ- 7,795 ಕೋಟಿ ರೂಪಾಯಿ
ಸಂಸ್ಕೃತಿ, ಪರಂಪರೆ, ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ- 2,645 ಕೋಟಿ ರೂಪಾಯಿ
ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವೆ - 52,519 ಕೋಟಿ ರೂಪಾಯಿ

2021-22ರ ತೆರಿಗೆ/ಆದಾಯ ಸಂಗ್ರಹಣೆ ಗುರಿ
ವಾಣಿಜ್ಯ ತೆರಿಗೆಗಳ ಇಲಾಖೆ - 76,473 ಕೋಟಿ ರೂ.
ನೋಂದಣಿ ಮತ್ತು ಮುದ್ರಣ ಇಲಾಖೆ- 12,655 ಕೋಟಿ ರೂ.
ಅಬಕಾರಿ ಇಲಾಖೆ- 24,580 ಕೋಟಿ ರೂ.
ಸಾರಿಗೆ ಇಲಾಖೆ - 7,515 ಕೋಟಿ ರೂ.
ಹೀಗೆ ಮುಂದಿನ ಆರ್ಥಿಕ ವರ್ಷದಲ್ಲಿ ಆದಾಯ ಸಂಗ್ರಹಣೆ ಗುರಿಯನ್ನು ಹೊಂದಿರುವ ಸರ್ಕಾರವು ಬಜೆಟ್ನಲ್ಲಿ ಮಂಡಿಸಿರುವ ಆಯವ್ಯಯ ಪಟ್ಟಿಯ ಆದಾಯದ ಮೂಲ ಹಾಗೂ ಖರ್ಚಿನ ಮಾಹಿತಿ ಈ ಕೆಳಗೆ ನೋಡಬಹುದು. ಒಟ್ಟಾರೆ ಆದಾಯ ಹಾಗೂ ಖರ್ಚನ್ನು ರೂಪಾಯಿ ಲೆಕ್ಕಾಚಾರದಲ್ಲಿ ತಿಳಿಸಲಾಗಿದ್ದು, ಆದಾಯ ಮತ್ತು ವೆಚ್ಚವನ್ನು ಪೈಸೆಗಳಲ್ಲಿ ಲೆಕ್ಕ ಹಾಕಿ ತಿಳಿಸಲಾಗಿದೆ.

ಆದಾಯ ಮೂಲಗಳು ಯಾವುವು?
ರಾಜ್ಯ ತೆರಿಗೆ - 50 ಪೈಸೆ
ಸಾಲದಿಂದ- 29 ಪೈಸೆ
ಕೇಂದ್ರ ತೆರಿಗೆ ಪಾಲು- 10 ಪೈಸೆ
ಕೇಂದ್ರ ಸರ್ಕಾರದ ಸಹಾಯಾನುದಾನ- 6 ಪೈಸೆ
ರಾಜ್ಯ ತೆರಿಗೆಯೇತರ ರಾಜಸ್ವದಿಂದ - 3 ಪೈಸೆ
ಸಾರ್ವಜನಿಕ ಲೆಕ್ಕ ನಿವ್ವಳ - 2 ಪೈಸೆ

ವೆಚ್ಚಗಳು ಯಾವುವು?
ವೇತನ ಹಾಗೂ ಭತ್ಯೆಗಳು -21 ಪೈಸೆ
ಋಣ ಮೇಲುಸ್ತುವಾರಿ - 18 ಪೈಸೆ
ಬಂಡವಾಳ ವೆಚ್ಚ- 17 ಪೈಸೆ
ಇತರ ರಾಜಸ್ವ ವೆಚ್ಚ - 16 ಪೈಸೆ
ಸಹಾಯ ಧನ - 10 ಪೈಸೆ
ಪಿಂಚಣಿ - 10 ಪೈಸೆ
ಸಹಾಯಾನುದಾನ ಮತ್ತು ಇತರೆ - 4 ಪೈಸೆ
ಸಾಮಾಜಿಕ ಭದ್ರತಾ ಪಿಂಚಣಿಗಳ - 3 ಪೈಸೆ
ಆಡಳಿತಾತ್ಮಕ ವೆಚ್ಚಗಳು-1 ಪೈಸೆ
-
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Viral Video: ಮಗನ ಸಾಧನೆ ಕಂಡು ಭಾವುಕರಾದ ಪೋಷಕರು; ಕ್ಯೂಟ್ ವಿಡಿಯೋ ವೈರಲ್ -
ಸರ್ಕಾರಿ ಜಮೀನು ಒತ್ತುವರಿ ತಡೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸ್ಥಳಕ್ಕೆ ಭೇಟಿ ನೀಡುತ್ತಿರಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ -
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
Trisha Krishnan: ದಳಪತಿ ವಿಜಯ್ ಜೊತೆಗಿನ ಸಂಬಂಧ, ಡಿವೋರ್ಸ್ ಬಗ್ಗೆ ಮಾಧ್ಯಮಗಳ ಪ್ರಶ್ನೆ: ನಟಿ ತ್ರಿಶಾ ಕೊಟ್ಟ ಉತ್ತರವೇನು?












Click it and Unblock the Notifications