ಮಾಗಡಿಯ ಕಲ್ಯಾ ಗ್ರಾಮದಲ್ಲಿ ವಾಮಾಚಾರಿಗಳ ಕಾಟ
ಇಂದಿನ ವೈಜ್ಞಾನಿಕ ಯುಗದಲ್ಲೂ ವಾಮಾಚಾರ ಎಂದರೆ ಜನರು ಬೆಚ್ಚಿ ಬೀಳುತ್ತಾರೆ. ರಾಮನಗರದ ಮಾಗಡಿ ತಾಲೂಕಿನ ಕಲ್ಯಾ ಗ್ರಾಮದಲ್ಲಿ ನಿರಂತರವಾಗಿ ವಾಮಾಚಾರ ನಡೆಯುತ್ತಿದ್ದು, ಜನರು ಆತಂಕಗೊಂಡಿದ್ದಾರೆ. ಈ ಕುರಿತು ಪೊಲೀಸ್ ಠಾಣೆಗೂ ದೂರು ನೀಡಲಾಗಿದೆ.
ನೂರಕ್ಕೂ ಹೆಚ್ಚು ಮನೆಗಳಿರುವ ಕಲ್ಯಾ ಗ್ರಾಮದಲ್ಲಿ ಕಂಡಕ್ಟರ್ ರಾಜಣ್ಣರ ಮನೆಯ ಮುಂದೆ ಮೂರು ಬಾರಿ ವಾಮಾಚಾರ ನಡೆದಿದೆ. ಮೂರು ದಿನಗಳ ಹಿಂದೆ ನಡೆದ ವಾಮಾಚಾರದ ಸಂದರ್ಭದಲ್ಲಿ ಹಂದಿಯ ರಕ್ತದಲ್ಲಿ ''ನೀನು ಸಾಯಬೇಕು'' ಎಂದು ಬರೆದಿರುವುದು ಕುಟುಂಬದವರ ಆತಂಕಕ್ಕೆ ಕಾರಣವಾಗಿದೆ.

ಈಗಾಗಲೇ ಮೂರು ಬಾರಿ ರಾಜಣ್ಣ ಮನೆಯ ಮುಂದೆ ವಾಮಾಚಾರ ನಡೆಸಲಾಗಿದೆ. ಮೊದಲು ಮಡಿಕೆಯಲ್ಲಿ ವಾಮಾಚಾರ ಮಾಡಲಾಗಿತ್ತು. ಮತ್ತೊಂದು ಬಾರಿ ಮಣ್ಣಿನಲ್ಲಿ ಮಾನವ ಆಕೃತಿ ಮಾಡಿ ತಾಳಿ ಕರಿಮಣಿ ಹಾಕಿ, ತೆಂಗಿನಗರಿಯಲ್ಲಿ ಚಟ್ಟದ ಆಕೃತಿಯಲ್ಲಿ ಬೊಂಬೆಯನ್ನು ಕೂರಿಸಿ ಹೊಸ ಬಿಳಿ ಬಟ್ಟೆಗಳನ್ನು ಸುಟ್ಟು ಕೂದಲುಗಳನ್ನಿಟ್ಟಿದ್ದರು. [ಸರ್ಕಾರದ ರಕ್ಷಣೆಗೆ ಮಾಟ, ಮಂತ್ರ, ವಾಮಾಚಾರ?]
ಮೂರು ದಿನಗಳ ಹಿಂದೆ ವಾಚಾರದ ಜೊತೆಗೆ ಹಂದಿಯ ರಕ್ತದಲ್ಲಿ ''ನೀನು ಸಾಯಬೇಕು'' ಎಂದು ಬರೆದಿಟ್ಟಿದ್ದಾರೆ. ಮಧ್ಯರಾತ್ರಿಯಲ್ಲಿ ಈ ವಾಮಾಚಾರ ನಡೆದಿದ್ದು, ಬೆಳಗ್ಗೆ ಬಾಗಿಲು ತೆರೆದಾಕ್ಷಣ ಮನೆಯವರು ಇದನ್ನು ನೋಡಿ ಆತಂಕ ಗೊಂಡಿದ್ದಾರೆ. ಗ್ರಾಮದ ಜನರು ವಾಮಚಾರ ಮಾಡಿದವರಿಗೆ ಹಿಡಿಶಾಪ ಹಾಕುತ್ತಿದ್ದಾರೆ. [ಮೂಢನಂಬಿಕೆ ಚಕ್ರಸುಳಿಯಲ್ಲಿ ಕಳ್ಳಿಪಾಳ್ಯ ಗ್ರಾಮಸ್ಥರು]
ಯಾವಾಗಲೂ ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನಗಳು ಹತ್ತಿರವಾದಾಗ ರಾಜಣ್ಣ ಮನೆಯ ಮುಂದೆ ವಾಮಾಚಾರ ನಡೆಯುತ್ತಿತ್ತು. ಆದರೆ, ಈ ಬಾರಿ ಅಮಾವಾಸ್ಯೆ ಹತ್ತಿರವಾದಾಗ ಗ್ರಾಮಸ್ಥರು ವಾಮಾಚಾರಿಗಳನ್ನು ಹಿಡಿಯಲು ಕಾದು ಕುಳಿತಿದ್ದರು. ಆದ್ದರಿಂದ ಮಂಗಳವಾರ ರಾತ್ರಿ ಮಾಟಮಂತ್ರ ಮಾಡಿ ಮನೆಯ ಬಾಗಿಲ ಬಳಿ ತಂದುಹಾಕಲಾಗಿದೆ.
ಕಾಕತಾಳೀಯ ಎಂಬಂತೆ ಈ ವಾಮಾಚಾರ ನಡೆದ ನಂತರ ಮನೆಯ ಕೆಲವು ಮಂದಿಗೆ ಕೈಕಾಲು ನೋವು ಸೇರಿದಂತೆ ಅನಾರೋಗ್ಯ ಕಾಣಿಸಿಕೊಂಡಿದೆ. ಈ ಮಾಟ ಮಂತ್ರದಿಂದ ಹೆದರದಂತೆ ರಾಜಣ್ಣ ಕುಟುಂಬದವರಿಗೆ ಮನವಿ ಮಾಡಿದ್ದೇವೆ. ಈಗಾಲಗೇ ಮೂರು ಬಾರಿ ಇಂತಹ ಕೃತ್ಯ ನಡೆದಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಗ್ರಾಮಸ್ಥರು ಮತ್ತು ರಾಜಣ್ಣ ಕುಟುಂಬದವರು ಸೇರಿ ವಾಮಾಚಾರ ನಡೆಯುತ್ತಿರುವ ಬಗ್ಗೆ ಮಾಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮಾಟ ಮಂತ್ರ ಎಂದು ಜನರನ್ನ ಬೆದರಿಸುವ ಮಂದಿ ಕೈಗೆ ಸಿಕ್ಕರೆ ಸರಿಯಾದ ಪಾಠ ಕಲಿಸುತ್ತೇವೆ ಎಂದು ಕಲ್ಯಾ ಗ್ರಾಮದ ಜನರು ಕಾದು ಕುಳಿತಿದ್ದಾರೆ.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion












Click it and Unblock the Notifications