ಗಣಪತಿ ಆತ್ಮಹತ್ಯೆ, ಸಂಸತ್ನಲ್ಲಿ ವಿಷಯ ಪ್ರಸ್ತಾಪಿಸಲಿದೆ ಬಿಜೆಪಿ
ಉಡುಪಿ, ಜುಲೈ 18 : 'ಕರ್ನಾಟಕದಲ್ಲಿ ಪೊಲೀಸ್ ಅಧಿಕಾರಿಗಳ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ಹಾಗೂ ರಾಜ್ಯ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿಯ ಬಗ್ಗೆ ಸಂಸತ್ನಲ್ಲಿ ವಿಷಯ ಪ್ರಸ್ತಾಪಿಸಲಾಗುವುದು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ' ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಉಡುಪಿಯ
ಜಿಲ್ಲಾ
ಬಿಜೆಪಿ
ಕಚೇರಿಯಲ್ಲಿ
ಸೋಮವಾರ
ಮಾತನಾಡಿದ
ಉಡುಪಿ-ಚಿಕ್ಕಮಗಳೂರು
ಸಂಸದೆ
ಶೋಭಾ
ಕರಂದ್ಲಾಜೆ
ಅವರು,
'ಕಾಟಾಚಾರಕ್ಕೆ
ಸರ್ಕಾರ
ಅಧಿವೇಶನ
ನಡೆಸುತ್ತಿದೆ.
ವಿರೋಧದ
ನಡುವೆಯೇ
ಸದನದಲ್ಲಿ
4
ನಿಮಿಷದಲ್ಲಿ
5
ಬಿಲ್
ಪಾಸ್
ಮಾಡಿದ್ದಾರೆ.
ಪ್ರತಿಪಕ್ಷಗಳು
ಎಂ.ಕೆ.ಗಣಪತಿ
ಆತ್ಮಹತ್ಯೆ
ಪ್ರಕರಣವನ್ನು
ಸಿಬಿಐಗೆ
ನೀಡುವಂತೆ
ಒತ್ತಡ
ಹೇರುತ್ತಿದ್ದರೂ
ಸರ್ಕಾರ
ಕಡೆಗಣಿಸುತ್ತಿದೆ'
ಎಂದು
ಟೀಕಿಸಿದರು.
[ಡಿವೈಎಸ್ಪಿ
ಗಣಪತಿ
ಸಾವು
ಪ್ರಕರಣದ
Timeline]
'ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವ ಜೊತೆಗೆ, ಸಚಿವ ಜಾರ್ಜ್ ಸೇರಿದಂತೆ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳಾದ ಮೊಹಾಂತಿ ಮತ್ತು ಎ.ಎಂ.ಪ್ರಸಾದ್ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕು' ಎಂದರು ಅವರು ಒತ್ತಾಯಿಸಿದರು. [ಗಣಪತಿ ಆತ್ಮಹತ್ಯೆ ಸಿಐಡಿ ವರದಿ ಸೋರಿಕೆ, ಸರಕಾರಕ್ಕೆ ಮುಜುಗರ?]
ಅಭಿವೃದ್ಧಿ ಬೇಡ : 'ಕರ್ನಾಟಕ ಸರ್ಕಾರಕ್ಕೆ ಅಭಿವೃದ್ಧಿ ಬೇಡವಾಗಿದೆ. ಸರ್ವಾಧಿಕಾರಿ ಧೋರಣೆಗೆ ಅಂಟಿಕೊಂಡಿರುವ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿ ಕರೆದ ನೀತಿ ಆಯೋಗದ ಸಭೆಗೆ ಹೋಗದೆ ಗೈರು ಹಾಜರಾಗಿದ್ದಾರೆ' ಎಂದು ದೂರಿದರು. [ನಾನು ಅವರ ಹಾದಿ ಹಿಡಿಯಬೇಕಾ?: ಪಾವನಾ ಗಣಪತಿ]
'ಕೇಂದ್ರ ಸರ್ಕಾರ ಬರಪರಿಹಾರ ಕಾಮಗಾರಿಗಳಿಗೆ ನೀಡಿದ 1,520 ಕೋಟಿ ರೂ. ಹಣ ದುರುಪಯೋಗವಾಗಿದೆ. ಕುಡಿಯುವ ನೀರು, ಗ್ರಾಮೀಣಾಭಿವೃದ್ಧಿಗೆ ನೀಡಿರುವ 3,600 ಕೋಟಿ ರೂ. ಅನುದಾನವನ್ನು ಖರ್ಚು ಮಾಡದೆ ಬ್ಯಾಂಕಿನಲ್ಲಿ ಇಟ್ಟು ಬಡ್ಡಿಯನ್ನು ಪಡೆಯಲಾಗುತ್ತಿದೆ' ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದರು.
'ಅಡಿಕೆಗೆ ಬೆಂಬಲ ಬೆಲೆ ನೀಡುವುದಾಗಿ ಕೇಂದ್ರ ವಾಣಿಜ್ಯ ಸಚಿವರು ಹೇಳಿದ್ದರೂ ರಾಜ್ಯ ಸರ್ಕಾರ ಯಾವುದೇ ಪ್ರಸ್ತಾವನೆ ಸಲ್ಲಿಸಿಲ್ಲ. ಕೋಡಿಕನ್ಯಾಣ ಬಂದರಿಗೆ 6.5ಕೋ.ರೂ. ಅನುದಾನ ಬಿಡುಗಡೆಯಾಗಿ ಒಂದೂವರೆ ವರ್ಷ ಕಳೆದರೂ ಸರ್ಕಾರ ಇನ್ನು ಟೆಂಡರ್ ಕರೆದಿಲ್ಲ' ಎಂದು ಶೋಭಾ ಕರಂದ್ಲಾಜೆ ಹೇಳಿದರು.