ಕೇಂದ್ರ ಅನುದಾನ ಹಂಚಿಕೆಯ ಸಿದ್ದರಾಮಯ್ಯ ಆರೋಪಕ್ಕೆ ತಿರುಗೇಟು: UPA-NDA ಅವಧಿಯ ಲೆಕ್ಕ ಕೊಟ್ಟ ಬಿಜೆಪಿ
ಬೆಂಗಳೂರು, ಅಕ್ಟೋಬರ್ 30: ಕೇಂದ್ರ ಸರ್ಕಾರಕ್ಕೆ ತೆರಿಗೆ ಪಾವತಿಯಲ್ಲಿ ಕರ್ನಾಟಕವೇ ಅಗ್ರಸ್ಥಾನದಲ್ಲಿದೆ. ಹೀಗದ್ದರೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳಾದರೂ ಸಹಿತ 23 ಇಲಾಖೆಗಳಿಗೆ ನಯಾಪೈಸೆ ಅನುದಾನ ನೀಡಿಲ್ಲ ಎಂದು ಪ್ರಧಾನಿ ಸೇರಿದಂತೆ ಕೇಂದ್ರ ಸರ್ಕಾರವನ್ನು ಸಿಎಂ ಸಿದ್ದರಾಮಯ್ಯ ದೂರಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿಯು ಮುಖ್ಯಮಂತ್ರಿಗಳಿಗೆ ತಿರುಗೇಟು ನೀಡಿದೆ.
12ಕ್ಕೂ ಹೆಚ್ಚು ಬಾರಿ ಕರ್ನಾಟಕದ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿಯೊಬ್ಬರು ಸಾರ್ವಜನಿಕರ ಹಣಕಾಸಿನ ಬಗ್ಗೆ ತಲೆ ಕೆಡಿಸಿಕೊಂಡಿರುವುದು ಬೇಸರದ ಸಂಗತಿ ಎಂದು ಸೋಮವಾರ ಬೆಳಗ್ಗೆ 'ಎಕ್ಸ್' ಜಾಲತಣದಲ್ಲಿ ಟ್ವೀಟ್ ಮಾಡಿ ಲೇವಡಿ ಮಾಡಿದೆ. ಅಲ್ಲದೇ ಯುಪಿಎ ಸರ್ಕಾರದಲ್ಲಿ ಮತ್ತು ಎನ್ಡಿಎ ಸರ್ಕಾರದ ಅವಧಿಯಲ್ಲಿ ರಾಜ್ಯಕ್ಕೆ ಬಂದ ಅನುದಾನದ ಲೆಕ್ಕ ನೀಡಿದೆ.

ಹಣಕಾಸಿನ ಈ ಬಗೆಗಿನ ತಿಳುವಳಿಕೆಯೊಂದಿಗೆ ಕಾಂಗ್ರೆಸ್ ಸರ್ಕಾರವು ಎಲ್ಲೆಲ್ಲಿ ಚುಕ್ಕಾಣಿ ಹಿಡಿದಿದ್ದರೂ, ಆರ್ಥಿಕತೆಯು ಮೂರ್ಛೆ ಹೋಗುವುದರಲ್ಲಿ ಆಶ್ಚರ್ಯವಿಲ್ಲ. ಸಿದ್ದರಾಮಯ್ಯನವರೆ ನೀವು ಹೇಳುತ್ತಿರುವ ಅನುದಾನ ಒದಗಿಸುವ ಶಿಫಾರಸು 15ನೇ ಹಣಕಾಸು ಆಯೋಗದ ವರದಿಯ ಭಾಗವಾಗಿರಲಿಲ್ಲ. ಹೀಗಿರುವಾಗ, ಕೇಂದ್ರವು ಇದನ್ನು ಒಪ್ಪಿಕೊಳ್ಳುವುದಾದರೂ ಹೇಗೆ? ನಿಮ್ಮ ವಾದದ ತಳಹದಿಯೇ ದೋಷಪೂರಿತವಾಗಿದೆ ಎಂದು ಬಿಜೆಪಿ ತಿರುಗೇಟು ನೀಡಿತು.
ಸತ್ಯಗಳನ್ನು ಪರಿಶೀಲಿಸದೇ ಕಾಂಗ್ರೆಸ್ ಆರೋಪ
ಕಾಂಗ್ರೆಸ್ನ ವಿಶಿಷ್ಟ ತಂತ್ರ ಎಂದರೆ ಅದು ಮೊದಲು ತಮ್ಮ ಸತ್ಯಗಳನ್ನು ಪರಿಶೀಲಿಸದೇ ಛಾವಣಿಯ ಮೇಲಿಂದ ಕೂಗುವುದಾಗಿದೆ. ಕಾಂಗ್ರೆಸ್ ಪಕ್ಷವು, ತಮ್ಮ ಎಂದಿನ ಶೈಲಿಯಲ್ಲಿ, ತಮ್ಮ ಸ್ವಂತ ಕಾರ್ಯಗಳ ಬಗ್ಗೆ ಒಮ್ಮೆ ಪ್ರತಿಬಿಂಬಿಸದೆ ಕೇಂದ್ರದತ್ತ ಬೆರಳು ತೋರಿಸಲು ಸಿದ್ದವಿರುತ್ತದೆ.
ಸಿದ್ದರಾಮಯ್ಯ ಅವರು ರಾಜ್ಯದ ಬಜೆಟ್, ಆರ್ಥಿಕತೆ ಕುರಿತು ಆಲೋಚಿಸದೇ ವಿವಿಧ ಯೋಜನೆಗಳನ್ನು ಜಾರಿ ಬಗ್ಗೆ ಜನರಿಗೆ ಭರವಸೆ ನೀಡಿದರು. ಇದು ಕ್ಲಾಸಿಕ್ ಕಾಂಗ್ರೆಸ್, ಭರವಸೆಗಳು ನೀಡುವುದು, ತಮ್ಮ ಕನಸುಗಳನ್ನು ನಿಜವಾಗಿ ಸಾಧಿಸುವುದು ಹೇಗೆ ಎಂಬುದರ ಕುರಿತು ಕಾಂಗ್ರೆಸ್ ಸಂಪೂರ್ಣ ಶೂನ್ಯವಾಗಿದೆ. ಇವರ ಯೋಜನೆಗಳ ವಾಸ್ತವ ಪರಿಶೀಲಿಸಿದರೆ ಹಣಕಾಸಿನ ಸ್ಪಷ್ಟತೆ ಇಲ್ಲದ್ದ ಕಾಣುತ್ತದೆ. ಆಗ ಕಾಂಗ್ರೆಸ್ ಕೇಂದ್ರದತ್ತ ಬೆರಳು ಮಾಡುತ್ತದೆ ಎಂದು ಟೀಕಿಸಿದೆ.
ತನ್ನ ಭರವಸೆಗಳಿಂದಲೇ ಕಾಂಗ್ರೆಸ್ ಹತಾಶ: ಆರೋಪ
ಇನ್ನೂ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಜಾರಿಗೊಳಿಸುತ್ತಿರುವ ತಮ್ಮ ಅಜಾಗರೂಕ ಭರವಸೆಗಳು, ಸಾರ್ವಜನಿಕ ಹಣಕಾಸಿನ ಅಸಹಜ ನಿರ್ವಹಣೆಯಿಂದ ವಿಮುಖಗೊಂಡು ಹತಾಶವಾಗಿದೆ. ಅದರ ಭಾಗವಾಗಿಯೇ ಮೋದಿ ಸರ್ಕಾರವನ್ನು ದೂಷಿಸುವುದು, ಹಣ ಬಿಡುಗಡೆಯಾಗಿಲ್ಲ ಎಂದು ಬಿಂಬಿಸುವ ಪ್ರಯತ್ನವಾಗಿದೆ. ಇದೆಲ್ಲವು ಕಾಂಗ್ರೆಸ್ ಆಡಳಿತ ವೈಫಲ್ಯಗಳನ್ನೆ ಎತ್ತಿ ತೋರಿಸುತ್ತವೆ ಎಂದು ಕುಟುಕಿದೆ.

ಕೇಂದ್ರ ಸರ್ಕಾರದತ್ತ ಬೆಟ್ಟು ಮಾಡುವ ರಾಜಕೀಯ ರಂಗಭೂಮಿಯಲ್ಲಿ ತೊಡಗುವುದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ತನ್ನ ಹಣಕಾಸನ್ನು ಬುದ್ಧಿವಂತಿಕೆಯಿಂದ ನಿರ್ವಹಿಸಬೇಕು. ಆ ಮೂಲಕ ನಾಗರಿಕರ ಅಗತ್ಯಗಳ ಪೂರೈಕೆಗೆ ಆದ್ಯತೆ ನೀಡಬೇಕು ಎಂದು ಬಿಜೆಪಿ ಸಲಹೆ ನೀಡಿದೆ.
UPA ಮತ್ತು NDA ಅವಧಿಯಲ್ಲಿ ಸಿಕ್ಕ ಅನುದಾನ ಇಷ್ಟು
2014 ರಿಂದ ಜುಲೈ 2023 ರವರೆಗೆ ಕರ್ನಾಟಕವು ಕೇಂದ್ರ ಸರ್ಕಾರದಿಂದ 2,66,825 ಕೋಟಿ ರೂ. ಸ್ವೀಕರಿಸಿದೆ. ಇದು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ 2004 ರಿಂದ 2014 ರ ಅವಧಿಗೆ ಹೋಲಿಸಿದರೆ ಬಿಜೆಪಿ ಅವಧಿಯಲ್ಲಿ ಕರ್ನಾಟಕಕ್ಕೆ 3.2 ಪಟ್ಟು ಹೆಚ್ಚು ಹಣ ಪಾವತಿಯಾಗಿದೆ ಎಂದು ಬಿಜೆಪಿ ಸಮರ್ಥಿಸಿಕೊಂಡಿದೆ.
ಅಷ್ಟೇ ಅಲ್ಲದೇ 2014 ರಿಂದ 2023ರವರೆಗಿನ ಹಣಕಾಸು ವರ್ಷದಲ್ಲಿ 2,08,832 ಕೋಟಿ ರೂಪಾಯಿ ಹಣ ಕರ್ನಾಟಕಕ್ಕೆ ಸಿಕ್ಕಿದೆ. 2004ರಿಂದ 2014ರ ಯುಪಿಎ ಅವಧಿಯಲ್ಲಿ ಕರ್ನಾಟಕಕ್ಕೆ 60,779 ಕೋಟಿ ರೂಪಾಯಿ ಸಿಕ್ಕಿದೆ. ಈ ಮೂಲಕ ಬಿಜೆಪಿ ಅವಧಿಯಲ್ಲಿ ಕರ್ನಾಟಕಕ್ಕೆ 3.4 ಪಟ್ಟು ಹೆಚ್ಚು ಹಣ ನೀಡುವ ಮೂಲಕ ಕೇಂದ್ರ ಇಲ್ಲಿ ಅಭಿವೃದ್ಧಿಗೆ ಆದ್ಯತೆ ನೀಡಿದೆ ಎಂದು ಬಿಜೆಪಿ ವಿವರಿಸಿದೆ.
ಕರ್ನಾಟಕ ಬಿಜೆಪ ಕೇಂದ್ರ ಸರ್ಕಾರದ ಮೇಲೆ ಆರೋಪ ಹೊರಿಸುವ ಮೊದಲು ಸ್ವಂತ ಹಣಕಾಸಿನ ದುರುಪಯೋಗವಾಗಿದ್ದನ್ನು ಅರಿಯಬೇಕು ಎಂದು ತಿಳಿಸಿದೆ.
-
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಬೆಂಗಳೂರಿನಲ್ಲಿ ದೇಶದ ಮೊದಲ ಮನೋರೋಗ ಅಧ್ಯಯನದ ಡಿಜಿಟಲ್ 'ಕಾಮ್-ಬ್ರೈನ್' ಲೋಕಾರ್ಪಣೆ -
ಮಾರ್ಚ್ 26ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Jobs: ರಾಜ್ಯದ ಕಾರಾಗೃಹ ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯಕೀಯ ಸಿಬ್ಬಂದಿ ಹುದ್ದೆಗಳ ಭರ್ತಿಗೆ ಸರ್ಕಾರದ ಮಹತ್ವದ ಆದೇಶ -
'ಗ್ಯಾರಂಟಿ ಸಮಿತಿ' ಸಿಬ್ಬಂದಿ ಮಾಸಿಕ ವೇತನ ಸರ್ಕಾರದ ಮುಖ್ಯ ಕಾರ್ಯದರ್ಶಿಗಿಂತಲೂ ಹೆಚ್ಚು! ವರ್ಷಕ್ಕೆ ಕೋಟಿ ಕೋಟಿ.. -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಮಾರ್ಚ್ 25ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಸದನದಲ್ಲಿ ಬಜೆಟ್ ಚರ್ಚೆ: ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ -
ಮಾರ್ಚ್ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Bengaluru: 50 ವಾರ್ಡ್ಗಳಲ್ಲಿ ಕಸ ವಿಲೇವಾರಿ ಸ್ಥಗಿತ; ವೇತನ ವಿಳಂಬಕ್ಕೆ ಮುನಿದು ಸಾಮೂಹಿಕ ರಜೆ ಹಾಕಿದ ಕಾರ್ಮಿಕರು -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು












Click it and Unblock the Notifications