ಕಾಂಗ್ರೆಸ್ ಸರ್ಕಾರ ಪ್ರತಿಯೊಂದು ವರ್ಗಕ್ಕೆ ಕೊಟ್ಟ ಕೊಡುಗೆಯ ಪಟ್ಟಿ
ಬೆಂಗಳೂರು,ಡಿಸೆಂಬರ್ 20: ಕಾಂಗ್ರೆಸ್ ಸರ್ಕಾರ ಸರ್ವ ಜನಾಂಗದ ವಿರೋಧ ಕಟ್ಟಿಕೊಂಡು ಕರ್ನಾಟಕವನ್ನು ದಿವಾಳಿ ಮಾಡುತ್ತಿದೆ. ಇದಕ್ಕೆ ಪರಿಹಾರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಮತದಾರರು ತಕ್ಕ ಪಾಠ ಶೀಘ್ರದಲ್ಲೇ ಕಲಿಸಿಕೊಡುತ್ತಾರೆ ಎಂದು ರಾಜ್ಯ ಬಿಜೆಪಿ ಟ್ವೀಟ್ ಮೂಲಕ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
ಜನ ವಿರೋಧಿ - ನಾಡ ವಿರೋಧಿ @INCKarnataka ಸರ್ಕಾರ ಪ್ರತಿಯೊಂದು ವರ್ಗಕ್ಕೆ ಕೊಟ್ಟ ಕೊಡುಗೆಯ ಪಟ್ಟಿ:
— BJP Karnataka (@BJP4Karnataka) December 20, 2023
▪️ರೈತ ವಿರೋಧಿ : 456 ಅನ್ನದಾತರ ಸಾವು
▪️ಮಹಿಳಾ ವಿರೋಧಿ : ರಕ್ಷಣೆಯೂ ಇಲ್ಲ ಗೌರವವೂ ಇಲ್ಲ
▪️ಪರಿಶಿಷ್ಟ ಸಮುದಾಯ ವಿರೋಧಿ : ₹11,000 ಕೋಟಿಗೆ ಪಂಗನಾಮ
▪️ ಹಿಂದೂ ವಿರೋಧಿ : ದೇವಾಲಯಗಳ ಮೇಲೆ ಕಳ್ಳಗಣ್ಣು
ಕಾಂಗ್ರೆಸ್ ಸರ್ಕಾರ ಸರ್ವ…
ಜನ ವಿರೋಧಿ - ನಾಡ ವಿರೋಧಿ ಕಾಂಗ್ರೆಸ್ ಸರ್ಕಾರ ಪ್ರತಿಯೊಂದು ವರ್ಗಕ್ಕೆ ಕೊಟ್ಟ ಕೊಡುಗೆಯ ಪಟ್ಟಿ:
▪️ರೈತ ವಿರೋಧಿ : 456 ಅನ್ನದಾತರ ಸಾವು
▪️ಮಹಿಳಾ ವಿರೋಧಿ : ರಕ್ಷಣೆಯೂ ಇಲ್ಲ ಗೌರವವೂ ಇಲ್ಲ
▪️ಪರಿಶಿಷ್ಟ ಸಮುದಾಯ ವಿರೋಧಿ : ₹11,000 ಕೋಟಿಗೆ ಪಂಗನಾಮ
▪️ ಹಿಂದೂ ವಿರೋಧಿ : ದೇವಾಲಯಗಳ ಮೇಲೆ ಕಳ್ಳಗಣ್ಣು

ಕರ್ನಾಟಕದಲ್ಲಿ ಶೈಕ್ಷಣಿಕ ಮೂಲಸೌಕರ್ಯ ಸಂಪೂರ್ಣ ಕುಸಿದಿದೆ. ಅದರಲ್ಲೂ ಪರಿಶಿಷ್ಟ ಜಾತಿ ಸಮುದಾಯ ಹಾಗೂ ಹಿಂದುಳಿದ ವರ್ಗಗಳ ಮಕ್ಕಳ ವಸತಿ ಶಾಲೆಗಳ ಸ್ಥಿತಿಯಂತೂ ದಯನೀಯವಾಗಿದೆ. ವಿಧಾನ ಮಂಡಲ ಸಮಿತಿಯೇ ಈ ವಿಚಾರ ಒಪ್ಪಿಕೊಂಡಿದ್ದರೂ ಕಾಂಗ್ರೆಸ್ ಸರ್ಕಾರ ಮಾತ್ರ ಇನ್ನೂ ಎಚ್ಚೆತ್ತುಕೊಂಡಿಲ್ಲ. ಶಿಕ್ಷಣ ವ್ಯವಸ್ಥೆ ಇಂಥ ಶೋಚನೀಯ ಸ್ಥಿತಿಗೆ ಬರದಂತೆ ಖಾತರಿಪಡಿಸುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಈ ಸರ್ಕಾರ ತಿರಸ್ಕರಿಸಿದ್ದು ಯಾವ ಕಾರಣಕ್ಕೆ ಎಂಬುದು ಇದರಿಂದ ಸ್ಪಷ್ಟ ಎಂದು ಬಿಜೆಪಿ ತಿಳಿಸಿದೆ.












Click it and Unblock the Notifications