ಬ್ಯಾಡ್ ಬೆಂಗಳೂರನ್ನಾಗಿ ಮಾಡುವುದೇ ಡಿಕೆ ಶಿವಕುಮಾರ್ ಸಾಹೇಬರ ಮಹಾ ಗುರಿ!
ಬೆಂಗಳೂರು, ಅಕ್ಟೋಬರ್ 25: ಬೆಂಗಳೂರು ನಗರದಲ್ಲಿ ಈಗಾಗಲೇ ಇರುವ ಸಮಸ್ಯೆಗಳನ್ನು ಬಗೆಹರಿಸುವುದು ಬಿಟ್ಟು ಮತ್ತಷ್ಟು ಪ್ರದೇಶಗಳನ್ನು ಸೇರಿಸಿ ಸಮಸ್ಯೆಗಳನ್ನು ಹೆಚ್ಚಿಸಿ ಬ್ರ್ಯಾಂಡ್ ಬೆಂಗಳೂರನ್ನು ಬ್ಯಾಡ್ ಬೆಂಗಳೂರನ್ನಾಗಿ ಮಾಡುವುದೇ ಡಿಕೆ ಸಾಹೇಬರ ಮಹಾ ಗುರಿ ಎಂದು ರಾಜ್ಯ ಬಿಜೆಪಿ ವ್ಯಂಗ್ಯವಾಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಬ್ರ್ಯಾಂಡ್ ಬೆಂಗಳೂರನ್ನು "ಆ ದಿನಗಳ" ಬೆಂಗಳೂರನ್ನಾಗಿ ಮಾಡುವುದೇ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಗ್ಯಾರಂಟಿ ಎಂದು ಹೇಳಿದೆ.

ಆ ದಿನದ ಬೆಂಗಳೂರಿನ ಬಗ್ಗೆ ಬಿಜೆಪಿ ಹೇಳಿದ್ದೇನು?
- ಮತ್ತೆ ತಲೆ ಎತ್ತಿದ ರಿಯಲ್ ಎಸ್ಟೇಟ್ ಮಾಫಿಯಾ..!
- ಬಿಬಿಎಂಪಿ ಗುತ್ತಿಗೆದಾರರಿಗಿಲ್ಲ ಕಾಮಗಾರಿ ಬಿಲ್..!
- ಕ್ರೈಮ್ ಸಿಟಿ ಆಗುತ್ತಿದೆ ರಾಜಧಾನಿ ಬೆಂಗಳೂರು..!
- ಕುಡಿಯುವ ಹನಿ ನೀರಿಗೂ ಬಂದಿದೆ ಕುತ್ತು..!
- ಲೋಡ್ಶೆಡ್ಡಿಂಗ್ನಿಂದ ಕೈಗಾರಿಕೆಗಳು ಕಂಗಾಲು..!
- ಉದ್ಘಾಟನೆಯಾಗದೆ ಉಳಿದ ಮೆಟ್ರೋ ನಿಲ್ದಾಣಗಳು..!
- ರಸ್ತೆಗಳ ಅಭಿವೃದ್ಧಿಯಂತೂ ಮಂಗಮಾಯ..!
- ಬೀದಿಗೆ ಬಂದ ಆಟೋ, ಟ್ಯಾಕ್ಸಿ ಚಾಲಕರ ಬದುಕು..!
- ಜನಸಾಮಾನ್ಯರಿಗೆ ದುಬಾರಿಯಾಯ್ತು ಉದ್ಯಾನ ನಗರಿ..!
- ಐಟಿ ಸಿಟಿ ಬಿಟ್ಟು ಹೊರ ರಾಜ್ಯಕ್ಕೆ ಸ್ಟಾರ್ಟ್ಅಪ್ಗಳು ವಲಸೆ..!












Click it and Unblock the Notifications