ಅಯ್ಯೋ ರಾಮಲಿಂಗಾರೆಡ್ಡಿ ಸಾರ್ ಸುಮ್ನಿರಿ… ಕಾಂಗ್ರೆಸ್ ವಿರುದ್ಧ ಬಿಜೆಪಿ ಗರಂ!
ಬೆಂಗಳೂರು: ಉಚಿತ ಬಸ್ ಪ್ರಯಾಣಕ್ಕೆ ಕ್ಷಣಗಣನೆ ಶುರುವಾಗಿದೆ. ರಾಜ್ಯದಲ್ಲಿ ನಾಳೆಯಿಂದಲೇ ಮಹಿಳೆಯರಿಗೆ ಉಚಿತ ಬಸ್ ಸೇವೆ ಸಿಗಲಿದೆ. ಈ ಕುರಿತು ಖುದ್ದು ಸಿಎಂ ಅಧಿಕೃವಾಗಿ ಮಾಹಿತಿ ನೀಡಿದ್ದಾರೆ. ಆದರೆ ಮತ್ತೊಂದ್ಕಡೆ ಶಾಕ್ ಕೂಡ ಸಿಕ್ಕಿದೆ, ಇದೇ ವಿಚಾರ ಇಟ್ಟುಕೊಂಡು ಈಗ ಸಾರಿಗೆ ಸಚಿವರು ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಗರಂ ಆಗಿದೆ!
ಸಿಎಂ ಸಿದ್ದರಾಮಯ್ಯ, ಚುನಾವಣಾ ಪೂರ್ವದಲ್ಲಿ ಜನತೆಗೆ ನೀಡಿದ ವಚನದಂತೆ ಐದೂ ಗ್ಯಾರೆಂಟಿಗಳಿಗೆ ಅನುಮೋದನೆ ನೀಡಿ ನುಡಿದಂತೆ ನಡೆದಿದ್ದೇವೆ. ಮಹಿಳಾ ಸಬಲೀಕರಣದ ದಿಶೆಯಲ್ಲಿ ಇತಿಹಾಸ ಬರೆಯಲಿರುವ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಕಲ್ಪಿಸುವ "ಶಕ್ತಿ" ಯೋಜನೆಗೆ ನಾಳೆ ಬೆಳಗ್ಗೆ 11 ಗಂಟೆಗೆ ಚಾಲನೆ ನೀಡುತ್ತಿದ್ದೇವೆ. ಉದ್ಯೋಗ, ಶಿಕ್ಷಣ, ಕುಟುಂಬ ನಿರ್ವಹಣೆ ಮುಂತಾದ ಜವಾಬ್ದಾರಿ ನಿರ್ವಹಿಸುವ ಕಾರಣಕ್ಕಾಗಿ ನಿತ್ಯ ಸಂಚರಿಸುವ ನಾಡಿನ ಅಸಂಖ್ಯ ಮಹಿಳೆಯರ ಹೋರಾಟದ ಬದುಕಿಗೆ ನಮ್ಮ ಈ ಯೋಜನೆ ಬಲ ತುಂಬಲಿದೆ ಎಂಬ ವಿಶ್ವಾಸವಿದೆ. ಎಂದು ಟ್ವೀಟ್ ಮಾಡಿ ಉಚಿತ ಬಸ್ ಸೇವೆ ಆರಂಭದ ಬಗ್ಗೆ ಮಾಹಿತಿ ನೀಡಿದ್ದರು. ಆದರೂ ಉಚಿತ ಬಸ್ ಸೇವೆಯಲ್ಲಿ ಮತ್ತೊಂದು ಗೊಂದಲ ಶುರುವಾಗಿದೆ!

'ಅಯ್ಯೋ ರಾಮಲಿಂಗಾರೆಡ್ಡಿ ಸಾರ್ ಸುಮ್ನಿರಿ...'
ಹೌದು, ಸಾರಿಗೆ ಸಚಿವರು ಉಚಿತ ಬಸ್ ಸೇವೆ ಕುರಿತು ಮಾಹಿತಿ ನೀಡಿದ್ದರು. ಇದಕ್ಕೆ ಬಿಜೆಪಿಯ ರಿಯಾಕ್ಷನ್ ಕೆಂಡವಾಗಿತ್ತು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾಡಿದ್ದ ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಗರಂ ಆಗಿದೆ, ಅಲ್ಲದೆ ಉಚಿತ ಬಸ್ ಸೇವೆಯಲ್ಲಿ ಎದ್ದಿರುವ ಮತ್ತೊಂದು ಗೊಂದಲದ ಬಗ್ಗೆ ಆಕ್ರೋಶ ಹೊರಹಾಕಿದೆ. 'ಅಯ್ಯೋ @RLR_BTM ಸಾರ್, ಸುಮ್ನಿರಿ... ಉಚಿತ, ಖಚಿತ ನಿಶ್ಚಿತ ಅಂತ 'ಸ್ಟಿಕ್ಕರ್' ಹಾಕಿಕೊಂಡು ಓಡಾಡಬೇಕಷ್ಟೇ ಅಂತ ಜನ ಮಾತನಾಡುತಿದ್ದಾರೆ. ಅಂದಹಾಗೆ, ನಾಳೆ ಈ "ಉಚಿತ ಪ್ರಯಾಣ"ದ ಉದ್ಘಾಟನೆಗಾದರೂ, 'ಸ್ಟಿಕ್ಕರ್' ಅಂಟಿಸಿರುವ ಫ್ರೀ ಬಸ್ ಬರಲಿದೆಯೇ???' ಎಂದು ಬಿಜೆಪಿ ಪ್ರಶ್ನೆ ಮಾಡಿದೆ.
ಅಯ್ಯೋ @RLR_BTM ಸಾರ್, ಸುಮ್ನಿರಿ…
— BJP Karnataka (@BJP4Karnataka) June 10, 2023
ಉಚಿತ, ಖಚಿತ, ನಿಶ್ಚಿತ ಅಂತ ‘ಸ್ಟಿಕ್ಕರ್’ ಹಾಕಿಕೊಂಡು ಓಡಾಡಬೇಕಷ್ಟೇ ಅಂತ ಜನ ಮಾತನಾಡುತಿದ್ದಾರೆ…
ಅಂದಹಾಗೆ, ನಾಳೆ ಈ “ಉಚಿತ ಪ್ರಯಾಣ”ದ ಉದ್ಘಾಟನೆಗಾದರೂ, ‘ಸ್ಟಿಕ್ಕರ್’ ಅಂಟಿಸಿರುವ ಫ್ರೀ ಬಸ್ ಬರಲಿದೆಯೇ??? https://t.co/qkK6JFYzVo
ಸಾರಿಗೆ ಸಚಿವರು ಹೇಳಿದ್ದೇನು?
'ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ 'ಶಕ್ತಿ ಯೋಜನೆ' ಮೂಲಕ ರಾಜ್ಯದ ಎಲ್ಲಾ ಮಹಿಳೆಯರಿಗೆ ಕರ್ನಾಟಕದಾದ್ಯಂತ ಸರ್ಕಾರಿ ಬಸ್ ನಲ್ಲಿ ಉಚಿತವಾಗಿ ಪ್ರಯಾಣಿಸುವ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮ. ದಿನಾಂಕ: 11.06.2023 (ಭಾನುವಾರ) ಸ್ಥಳ: ವಿಧಾನಸೌಧದ ಪೂರ್ವ ದ್ವಾರದ ಮುಂಭಾಗ (ಗ್ರಾಂಡ್ ಸ್ಟೆಪ್ಸ್), ಬೆಂಗಳೂರು ಸಮಯ: ಬೆಳಗ್ಗೆ 10:30 ಗಂಟೆಗೆ' ಎಂದು ಸಾರಿಗೆ ಸಚಿವರು ನಾಳಿನ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ್ದರು. ಈ ಟ್ವೀಟ್ಗೆ ರೀಪ್ಲೇ ನೀಡಿರುವ ಬಿಜೆಪಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದೆ. ಹೀಗೆ ಗ್ಯಾರಂಟಿ ವಿಚಾರದಲ್ಲಿ ಎರಡೂ ಪಕ್ಷಗಳ ನಡುವೆ ವಾರ್ ಮುಂದುವರಿದಿದೆ.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ 'ಶಕ್ತಿ ಯೋಜನೆ' ಮೂಲಕ ರಾಜ್ಯದ ಎಲ್ಲಾ ಮಹಿಳೆಯರಿಗೆ (ವಿದ್ಯಾರ್ಥಿನಿಯರು ಸೇರಿದಂತೆ) ಕರ್ನಾಟಕದಾದ್ಯಂತ ಸರ್ಕಾರಿ ಬಸ್ ನಲ್ಲಿ ಉಚಿತವಾಗಿ ಪ್ರಯಾಣಿಸುವ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮ.
— Ramalinga Reddy (@RLR_BTM) June 10, 2023
ದಿನಾಂಕ: 11.06.2023 (ಭಾನುವಾರ)
ಸ್ಥಳ: ವಿಧಾನಸೌಧದ ಪೂರ್ವ ದ್ವಾರದ ಮುಂಭಾಗ (ಗ್ರಾಂಡ್ ಸ್ಟೆಪ್ಸ್), ಬೆಂಗಳೂರು… pic.twitter.com/qIIZ4jk6NY
ಫ್ರೀ ಬಸ್.. ಸ್ಟಿಕ್ಕರ್ ವಾರ್ಗೆ ಶುರು!
ಹಾಗೇ ಇನ್ನೊಂದು ಟ್ವೀಟ್ ಮೂಲಕವೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶವನ್ನ ಹೊರಹಾಕಿದೆ. '#ConditionsApplyGovt ನ ಹೊಸ ಕಂಡೀಷನ್! ಉಚಿತ ಪ್ರಯಾಣದ ಬಸ್ಗಳಿಗೆ ಸ್ಟಿಕ್ಕರ್ ಅಂಟಿಸುತ್ತಾರಂತೆ. ಸ್ವಾಮಿ @siddaramaiahನವರೇ, ಬಸ್ ಹತ್ತುವ ಮಹಿಳೆಯರು, ಬಸ್ ನಂಬರ್ ನೋಡಬೇಕೋ, ನೀವು ಮೆತ್ತಿರುವ ಸ್ಟಿಕ್ಕರ್ ಗಮನಿಸಬೇಕೋ... ಲಕ್ಸುರಿ ಅಲ್ಲದ ಎಲ್ಲಾ ಸಾಮಾನ್ಯ ಬಸ್ಗಳಲ್ಲಿ ಫ್ರೀ, ಫ್ರೀ, ಫ್ರೀ ಎಂದಿದ್ದು ನೀವೇ ಅಲ್ಲವೇ... ಹಾಗಾದ್ರೆ ಈಗ ಈ ಸ್ಟಿಕ್ಕರ್ ಯಾಕೆ? ಸಾಮಾನ್ಯ ಬಸ್ಗಳಲ್ಲಿಯೂ ಕೆಲವೇ ಕೆಲವಕ್ಕೆ ಸ್ಟಿಕ್ಕರ್ ಅಂಟಿಸಿ ನಾಡಿನ ಹೆಣ್ಣು ಮಕ್ಕಳ ಕಿವಿಗೆ ಚೆಂಡು ಹೂವು ಮುಡಿಸುವ 'ಗ್ಯಾರಂಟಿ ಪ್ರೋಗ್ರಾಂ' ಇದು! ಇದು ನಿಮಗೆ 'ಉಚಿತ'ವಲ್ಲ.' ಎಂದಿದೆ ಬಿಜೆಪಿ.
#ConditionsApplyGovt ನ ಹೊಸ ಕಂಡೀಷನ್!
— BJP Karnataka (@BJP4Karnataka) June 10, 2023
ಉಚಿತ ಪ್ರಯಾಣದ ಬಸ್ಗಳಿಗೆ ಸ್ಟಿಕ್ಕರ್ ಅಂಟಿಸುತ್ತಾರಂತೆ.
ಸ್ವಾಮಿ @siddaramaiah ನವರೇ,
ಬಸ್ ಹತ್ತುವ ಮಹಿಳೆಯರು, ಬಸ್ ನಂಬರ್ ನೋಡಬೇಕೋ, ನೀವು ಮೆತ್ತಿರುವ ಸ್ಟಿಕ್ಕರ್ ಗಮನಿಸಬೇಕೋ…
ಲಕ್ಸುರಿ ಅಲ್ಲದ ಎಲ್ಲಾ ಸಾಮಾನ್ಯ ಬಸ್ಗಳಲ್ಲಿ ಫ್ರೀ, ಫ್ರೀ, ಫ್ರೀ ಎಂದಿದ್ದು ನೀವೇ ಅಲ್ಲವೇ...… pic.twitter.com/hIfmtQFVQF
ಹೀಗೆ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ಮಧ್ಯೆ ಫ್ರೀ ಬಸ್ ವಿಚಾರ ದೊಡ್ಡ ಚರ್ಚೆಗೆ ವೇದಿಕೆ ಒದಗಿಸಿದೆ. ಅತ್ತ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಆರೋಪ ಮಾಡುತ್ತಿದ್ದರೆ, ಈ ಕಡೆ ಕೈ ಪಡೆ ಕೂಡ ಬಿಜೆಪಿ ನಾಯಕರ ವಿರುದ್ಧ ಆರೋಪ ಮಾಡುತ್ತಿದೆ. ಹೀಗೆ ಇಬ್ಬರ ನಡುವೆ ಟ್ವೀಟ್ ಯುದ್ಧ ಜೋರಾಗಿದ್ದು, ಯಾವಾಗ ಇದೆಲ್ಲಾ ಕೊನೆಯಾಗುತ್ತೋ ಕಾದು ನೋಡಬೇಕಿದೆ.
-
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
ಸಿದ್ದರಾಮಯ್ಯ ವಿರುದ್ಧ ಆರ್. ಅಶೋಕ್ ತೀವ್ರ ವಾಗ್ದಾಳಿ: ರಾಜಕೀಯದಲ್ಲಿ ಹೊಸ ವಿವಾದ -
ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಕೈ ಹಿಡಿಯುತ್ತವೆ: ಸಿದ್ದರಾಮಯ್ಯ ಹೇಳಿಕೆ -
GST: ಕಾಂಗ್ರೆಸ್ ಜನರ ಪರವೋ ಅಥವಾ ಹೆಚ್ಚಿನ ತೆರಿಗೆ ದರದ ಪರವೋ? ಮಾಜಿ ಸಿಎಂ ನೇರ ಪ್ರಶ್ನೆ -
ತಮಿಳುನಾಡಿನಲ್ಲಿ ರಂಗೇರಿದ ಅಖಾಡ: ಹೊಸ ಶಕ್ತಿಯಾಗಿ ವಿಜಯ್ ಪ್ರವೇಶ, ಪ್ರಮುಖ ಪಕ್ಷಗಳು, ಚರ್ಚೆಯ ವಿಷಯಗಳು -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Water4Life: ಅತ್ಯಮೂಲ್ಯ ಜಲಮೂಲಗಳ ಸಂರಕ್ಷಣೆಗೆ ರಿಲಯನ್ಸ್ ಫೌಂಡೇಷನ್ನಿಂದ ಜನ ಚಳವಳಿ, ಡಿಟೇಲ್ಸ್ ಇಲ್ಲಿದೆ -
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ












Click it and Unblock the Notifications