ಲೋಕಾಯುಕ್ತದಲ್ಲಿ ಭ್ರಷ್ಟಾಚಾರ, ಭಾಸ್ಕರರಾವ್ ವಿಚಾರಣೆ ಏಕೆ?
ಬೆಂಗಳೂರು, ಮಾರ್ಚ್ 01 : ಮಾಜಿ ಲೋಕಾಯುಕ್ತ ನ್ಯಾ.ಭಾಸ್ಕರರಾವ್ ಅವರ ವಿರುದ್ಧ ಮೊಕದ್ದಮೆ ದಾಖಲಿಸಲು ಎಸ್ಐಟಿ ಸರ್ಕಾರದ ಅನುಮತಿ ಕೇಳಿದೆ. ಭಾಸ್ಕರರಾವ್ ವಿರುದ್ಧ ಮೊಕದ್ದಮೆ ದಾಖಲು ಮಾಡುವ ಕುರಿತು ಸರ್ಕಾರಕ್ಕೆ 500 ಪುಟಗಳ ವಿವರಣೆ ನೀಡಲಾಗಿದೆ.
ಲೋಕಾಯುಕ್ತದಲ್ಲಿ
ನಡೆದ
ಭ್ರಷ್ಟಾಚಾರ
ಪ್ರಕರಣದ
ತನಿಖೆ
ನಡೆಸುತ್ತಿರುವ
ಎಸ್ಐಟಿ,
ತಮ್ಮ
ಪುತ್ರ
ಅಶ್ವಿನ್
ರಾವ್
ಭ್ರಷ್ಟಾಚಾರದಲ್ಲಿ
ತೊಡಗಿದ್ದರೂ
ಭಾಸ್ಕರರಾವ್
ಅವರು
ಸಂಬಂಧಪಟ್ಟ
ಇಲಾಖೆಗೆ
ಮಾಹಿತಿ
ನೀಡಿಲ್ಲ
ಎಂಬ
ಆರೋಪದಡಿ
ಅವರ
ವಿರುದ್ಧ
ಮೊಕದ್ದಮೆ
ದಾಖಲು
ಮಾಡಲಿದೆ.
[ಭಾಸ್ಕರರಾವ್
ರಾಜೀನಾಮೆ]
ಭಾಸ್ಕರರಾವ್ ವಿರುದ್ಧ ಮೊಕದ್ದಮೆ ದಾಖಲು ಮಾಡಲು ಅನುಮತಿ ನೀಡುವಂತೆ ಕೋರಿ ಎಸ್ಐಟಿ ಕರ್ನಾಟಕ ಸರ್ಕಾರಕ್ಕೆ 500 ಪುಟಗಳ ವರದಿಯನ್ನು ನೀಡಿದೆ. ಕರ್ನಾಟಕ ಸರ್ಕಾರ ಮೊಕದ್ದಮೆ ದಾಖಲು ಮಾಡಲು ಅನುಮತಿ ನೀಡಿದ ಬಳಿಕ, ರಾಜ್ಯಪಾಲರು ಅದಕ್ಕೆ ಒಪ್ಪಿಗೆ ನೀಡಬೇಕಾಗಿದೆ. [ಲೋಕಾ ಹಗರಣ : ಭಾಸ್ಕರರಾವ್ ಗೆ ಸಂಕಟ?]
ಸರ್ಕಾರಕ್ಕೆ ಎಸ್ಐಟಿ ಸಲ್ಲಿಸಿರುವ ವರದಿಯಲ್ಲಿ ಐಪಿಸಿ ಸೆಕ್ಷನ್ 202 (ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡದಿರುವುದು), 217 (ಅಪರಾಧವನ್ನು ಉದ್ದೇಶಪೂರ್ವಕ ಮರೆಮಾಚುವುದು) ರ ಅನ್ವಯ ಪ್ರಕರಣ ದಾಖಲು ಮಾಡಲಾಗುತ್ತದೆ ಎಂದು ಹೇಳಿದೆ. [ಲೋಕಾಯುಕ್ತದಲ್ಲಿ ಏನಿದು ಹಗರಣ?]
ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ನ್ಯಾ.ಭಾಸ್ಕರರಾವ್ ಅವರನ್ನು ವಿಚಾರಣೆ ನಡೆಸಲಿದೆ. ಅಶ್ವಿನ್ ರಾವ್ ಮತ್ತು ಇತರ ಆರೋಪಿಗಳು ಲೋಕಾಯುಕ್ತ ಕಚೇರಿಯ ಮುಖ್ಯ ಹಾಲ್ ಮತ್ತು ಲೋಕಾಯುಕ್ತರ ನಿವಾಸವನ್ನು ಬೆದರಿಕೆ ಹಾಕಲು ಬಳಸಿಕೊಂಡಿದ್ದರು ಎಂಬ ಆರೋಪಗಳಿವೆ.
ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣದಲ್ಲಿ ಭಾಸ್ಕರರಾವ್ ಪುತ್ರ ಅಶ್ವಿನ್ ರಾವ್ ಅವರು ಮೊದಲ ಆರೋಪಿಯಾಗಿದ್ದು, ಎಸ್ಐಟಿ ಅವರನ್ನು ಬಂಧಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಎಸ್ಐಟಿ 10ಕ್ಕೂ ಅಧಿಕ ಆರೋಪಿಗಳನ್ನು ಬಂಧಿಸಿದೆ.