ಭಾರತ ಬಂದ್ : ಕರ್ನಾಟಕದ ಜಿಲ್ಲೆಗಳಲ್ಲಿ ಶಾಲಾ-ಕಾಲೇಜಿಗೆ ರಜಾ ಇದೆ, ಇಲ್ಲ
ಬೆಂಗಳೂರು, ಜನವರಿ 07 : ಕಾರ್ಮಿಕ ಸಂಘಟನೆಗಳು ಜನವರಿ 8 ಮತ್ತು 9ರಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿವೆ. ಸಾರಿಗೆ ಸಂಚಾರ ಎರಡು ದಿನಗಳ ಕಾಲ ಸ್ಥಬ್ದಗೊಳ್ಳುವ ನಿರೀಕ್ಷೆ ಇದೆ. ಹಲವು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಬೆಂಗಳೂರಿನಲ್ಲಿ ಸರ್ಕಾರಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ನಗರದ ಹಲವು ಖಾಸಗಿ ಕಾಲೇಜುಗಳು ಸಹ ರಜೆ ಘೋಷಣೆ ಮಾಡಿವೆ. ಬಿಎಂಟಿಸಿ ಬಸ್ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದ್ದು, ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ಆಗಮಿಸುವುದಕ್ಕೂ ತೊಂದರೆ ಆಗಲಿದೆ.
ಜನವರಿ 8 ಮತ್ತು 9ರಂದು ಎರಡು ದಿನಗಳ ಕಾಲ ಮುಷ್ಕರ ನಡೆಯಲಿದೆ. ಆದರೆ, ಜನವರಿ 8ರಂದು ಮಾತ್ರ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ರಜೆ ಘೋಷಣೆ ಮಾಡಿಲ್ಲ.

ಪರೀಕ್ಷೆ ಮುಂದೂಡಿಕೆ : ಎರಡು ದಿನದ ಮುಷ್ಕರದ ಹಿನ್ನಲೆಯಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ (ಆರ್ಸಿಯು) ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಪರೀಕ್ಷೆಗಳನ್ನು ಮುಂದೂಡಲಾಗಿದೆ. ಜನವರಿ 8 ಮತ್ತು 9ರಂದು ನಡೆಯಬೇಕಿದ್ದ ಪರೀಕ್ಷೆಗಳನ್ನು ಜನವರಿ 24 ಮತ್ತು 25ರಂದು ನಡೆಸಲಾಗುತ್ತದೆ.
ಯಾವ ಜಿಲ್ಲೆಯಲ್ಲಿ ರಜೆ ಇಲ್ಲ
* ಶಿವಮೊಗ್ಗ
* ಹಾವೇರಿ
* ಯಾದಗಿರಿ
* ಬೆಳಗಾವಿ
* ದಕ್ಷಿಣ ಕನ್ನಡ
* ಉಡುಪಿ
* ರಾಮನಗರ
* ಕೊಡಗು
* ಹಾಸನ
* ಚಿಕ್ಕಮಗಳೂರು
* ಉತ್ತರ ಕನ್ನಡ
* ವಿಜಯಪುರ
ಯಾವ ಜಿಲ್ಲೆಗಳಲ್ಲಿ ರಜೆ ಇದೆ
* ಕೋಲಾರ
* ದಾವಣಗೆರೆ
* ಕೊಪ್ಪಳ
* ಚಿಕ್ಕಬಳ್ಳಾಪುರ
* ಕಾರವಾರ
* ರಾಯಚೂರು
* ಚಿತ್ರದುರ್ಗ
* ಧಾರವಾಡ
* ಬಳ್ಳಾರಿ
* ಚಾಮರಾಜನಗರ
* ಮೈಸೂರು
* ಮಂಡ್ಯ
* ತುಮಕೂರು
* ಬೆಂಗಳೂರು












Click it and Unblock the Notifications