ಕೋಲಾರದ ನಾಗರಿಕರಿಗೆ ಸಿಹಿಸುದ್ದಿ ನೀಡಿದ ರೈಲ್ವೆ ಇಲಾಖೆ
ಬೆ೦ಗಳೂರು, ನವೆಂಬರ್, 20: ಕೋಲಾರದಿಂದ ರಾಜಧಾನಿ ಬೆಂಗಳೂರಿಗೆ ಆಗಮಿಸುವವರಿಗೆ ರೈಲ್ವೆ ಇಲಾಖೆ ಸಿಹಿಸುದ್ದಿ ನೀಡಿದೆ. ಪ್ರಯಾಣಿಕರ ಅನೇfಕ ದಿನಗಳ ಬೇಡಿಕೆಯನ್ನು ರೈಲ್ವೆ ಇಲಾಖೆ ಪೂರೈಸಿದೆ.
ಬೆ೦ಗಳೂರು- ಚಿಕ್ಕಬಳ್ಳಾಪುರ ಪ್ಯಾಸೆ೦ಜರ್ ರೈಲನ್ನು ಪ್ರಯಾಣಿಕರ ರೈಲು ಇನ್ನು ಮುಂದೆ ಕೋಲಾರದವರೆಗೆ ಸಂಚರಿಸಲಿದೆ. ನವೆಂಬರ್ 20ರಿ೦ದ ಪ್ರತಿದಿನ ಸ೦ಜೆ 6.10ಕ್ಕೆ ಬೆ೦ಗಳೂರಿನಿ೦ದ ಹೊರಡುವ ರೈಲು ರಾತ್ರಿ 9 ಗ೦ಟೆಗೆ ಕೋಲಾರ ತಲುಪಲಿದೆ. ಹಾಗೆಯೇ, ಬೆಳಗ್ಗೆ 6ಕ್ಕೆ ಕೋಲಾರದಿ೦ದ ಹೊರಡುವ ರೈಲು ಚಿಕ್ಕಬಳ್ಳಾಪುರ ಮಾಗ೯ವಾಗಿ ಬೆಳಗ್ಗೆ 9.45ಕ್ಕೆ ಬೆ೦ಗಳೂರು ಮಹಾನಗರ ತಲುಪಲಿದೆ.[ರೈಲ್ವೆ ತತ್ಕಾಲ್ ಟಿಕೆಟ್ ಬುಕಿಂಗ್ ಸಮಯ ಬದಲು]

ಇಕ್ಕಟ್ಟಿಗೆ ಸಿಲುಕಿದ ಕೋಲಾರದ ಟೊಮೆಟೋ ಬೆಳೆಗಾರ
ನಿರಂತರ ಮಳೆ ಕೋಲಾರದ ಟೊಮೆಟೋ ಬೆಳಗಾರರನ್ನು ಸಂಕಷ್ಟಕ್ಕೆ ತಂದು ನಿಲ್ಲಿಸಿದೆ. ಧಾರಣೆಯಲ್ಲಿ ಏರಿಕೆ ಕಂಡಿದ್ದು ಕೆಜಿ ಟೊಮೆಟೋ 60 ರು. ಗೆ ತಲುಪಿದೆ. ಮ ಆದರೆ ಇಳುವರಿ ಇಲ್ಲ.[30 ಸೆಕೆಂಡ್ ನಲ್ಲಿ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಹೇಗೆ?]
ಮಾರುಕಟ್ಟೆಗೆ ಬರುತ್ತಿರುವ ಟೊಮೆಟೋ ದಲ್ಲಿ ಭಾರೀ ಇಳಿಕೆಯಾಗಿದೆ. ಮಳೆ ಆವಾಂತರವೇ ದರ ಏರಿಕೆಗೆ ಕಾರಣವಾಗಿದ್ದರೂ ಕೋಲಾರದ ರೈತರ ಜಮೀನಿಗೆ ನೀರು ನುಗ್ಗಿದ್ದು ಕೈ ಗೆ ಬಂದ ತುತ್ತು ಬಾಯಿಗೆ ಇಲ್ಲ ಎಂಬಂಥ ಸ್ಥಿತಿ ನಿರ್ಮಾಣವಾಗಿದೆ












Click it and Unblock the Notifications