ವಿವಾಹದ ಹಿಂದಿನ ದಿನ ರೈಲಿಂದ ಜಿಗಿದು ಆತ್ಮಹತ್ಯೆ

ಮೃತರನ್ನು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗುಡ್ಡುಗಾಡು ಪ್ರದೇಶವಾದ ಯಮಕನಮರಡಿ ಗ್ರಾಮದ ಭಾಗೀರತಿ ಶಿವಪ್ಪಾ ಘಸ್ತಿ (28), ಸುರೇಶ ಲಿಂಗಪ್ಪಾ ಗುಡದೇರಿ (26), ವೈಷ್ಣವಿ ಶ್ರಾವಣ ಗುಡದೇರಿ (18) ಹಾಗೂ ಫಕೀರಪ್ಪಾ ಹೊಳೆಪ್ಪಾ ಗುಡದೇರಿ (24) ಎಂದು ಗುರುತಿಸಲಾಗಿದೆ.
ಭಾಗೀರತಿ ಶಿವಪ್ಪಾ ಘಸ್ತಿ ವಿವಾಹ ಗುರುವಾರ ನಿಗದಿಯಾಗಿತ್ತು. ಆದರೆ ಬುಧವಾರ ಬೆಳಗ್ಗೆ ಆಕೆ ಇನ್ನೂ ಮೂವರ ಜತೆಗೂಡಿ ಈ ದುಸ್ಸಾಹಸಕ್ಕೆ ಕೈಹಾಕಿದ್ದಾಳೆ. ಮಿರಜ್- ಕುರಡವಾಡಿ ಪ್ಯಾಸೆಂಜರ್ ರೈಲಿನಿಂದ ಜಿಗಿದು ಈ ನಾಲ್ವರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಿರಜ್- ಪಂಢರಪುರ ಮಾರ್ಗದಲ್ಲಿ ಕೃಷ್ಣಾ ಘಾಟಿನ ರೈಲು ಗೇಟ್ ಬಳಿ ಈ ಕುಖತ್ಯವೆಸಗಿದ್ದಾರೆ.
ರೈಲಿನಿಂದ ಜಿಗಿದ ಮೂವರು ಸ್ಥಳದಲ್ಲೇ ಮೃತಪಟ್ಟರೆ ಮತ್ತೊಬ್ಬ ಗಂಭೀರವಾಗಿ ಗಾಯಗೊಂಡು, ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ದುರಂತ ಅಂತ್ಯ ಕಂಡ 4 ಮಂದಿಯ ಅಂತ್ಯಕ್ರಿಯೆ ಮಿರಜ್ ನಲ್ಲಿಯೇ ನೆರವೇರಿಸಲಾಗಿದೆ. ಮಿರಜ್ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications