ಜಾತ್ರೆಗೆ ಜೀವ ತುಂಬಿದ ಸೀರೆಯುಟ್ಟ ಸುಂದರಿಯರು!
ಮಂಡ್ಯ, ಏಪ್ರಿಲ್ 06 : ಸದಾ ಓದು, ಬರಹ, ಪಾಠ ಪ್ರವಚನಗಳಲ್ಲಿ ನಿರತರಾಗಿದ್ದ ವಿದ್ಯಾರ್ಥಿಗಳು ಅದೆಲ್ಲವನ್ನು ಮರೆತು ಸೀರೆಯುಟ್ಟು, ಅಡುಗೆ ಮಾಡಿ, ಹಾಡು ಹಾಡಿ, ಜನಪದ ಕಲೆಗಳಿಗೆ ಜೀವ ತುಂಬಿ ನಾವೇನು ಸಂಪೂರ್ಣ ಮಾಡರ್ನ್ ಆಗಿದ್ದರೂ ಸಂಪ್ರದಾಯವನ್ನು ಮರೆತಿಲ್ಲ ಎಂದು ಜನರಿಗೆ ತೋರಿಸಿಕೊಟ್ಟರು.
ಇದೆಲ್ಲವೂ ನಡೆದಿದ್ದು ಮಂಡ್ಯದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಆಯೋಜಿಸಿದ್ದ ಜಾನಪದ ಜಾತ್ರೆಯಲ್ಲಿ. ಇತರೆ ದಿನಗಳಲ್ಲಿ ಚೂಡಿದಾರ್, ಜೀನ್ಸ್ ಅಂಥ ತರಾವರಿಯ ಉಡುಗೆ ಧರಿಸಿ ಬರುತ್ತಿದ್ದ ವಿದ್ಯಾರ್ಥಿನಿಯರು ಸೀರೆಯುಟ್ಟು ಹೂವು ಮುಡಿದು ಅಲಂಕರಿಸಿಕೊಂಡು ಕಾಲೇಜಿಗೆ ಬರುವ ಮೂಲಕ ಜಾನಪದ ಜಾತ್ರೆಗೆ ಜೀವ ತುಂಬಿದರು.
ಒಂದೆಡೆ ವಿದ್ಯಾರ್ಥಿನಿಯರು ಗ್ರಾಮೀಣ ಸೊಗಡಿನ ತಿಂಡಿಗಳಾದ ರಾಗಿ ರೊಟ್ಟಿ, ಅಕ್ಕಿ ರೊಟ್ಟಿ, ಕೋಸಂಬರಿ, ಸಕ್ಕರೆ ಮಿಠಾಯಿ, ನಿಪ್ಪಟ್ಟು, ಕಡ್ಲೆಕಾಳು ಗುಗ್ಗರಿ, ಸಿಹಿಪೂರಿ, ಹುರುಳಿಕಾಳು ಪಲ್ಯ ಮಾಡುತ್ತಿದ್ದರೆ, ಅದರ ಘಮ ಬಾಯಲ್ಲಿ ನೀರೂರಿಸುತ್ತಿದ್ದರೆ, ಮತ್ತೊಂದೆಡೆ ಕುಣಿತ, ಆಟ, ಮದುವೆ ದರ್ಬಾರು. [ನಿಮ್ಮ ಮನೆಯಲ್ಲೂ ಸಿಹಿಕಹಿ ಚಂದ್ರು "ಬೊಂಬಾಟ್ ಭೋಜನ"!]

ಒಟ್ಟಾರೆ ಇಡೀ ಕಾಲೇಜಿನಲ್ಲಿ ಜಾನಪದ ಸಂಭ್ರಮ ಮನೆ ಮಾಡಿತ್ತು. ಇನ್ನು ಡೊಳ್ಳು ಕುಣಿತ, ಪೂಜಾ ಕುಣಿತ, ಗೊರವನ ಕುಣಿತ, ಯಕ್ಷಗಾನ, ಗತಕಾಲದ ಹಳ್ಳಿಯ ವೈಭವವನ್ನು ಕಣ್ಮುಂದೆ ತಂದಿರಿಸಿದ್ದವು. ಬೇಸಿಗೆಯ ಬೇಗೆ ನೀಗಿಸಿಕೊಳ್ಳುವುದಕ್ಕಾಗಿ ರುಚಿಯಾದ ಮಜ್ಜಿಗೆ, ಸಿಹಿ ಪಾನಕವೂ ಸಿದ್ಧವಾಗಿತ್ತು. [ಎರಡೇ ಎರಡು ಬಕೆಟ್ ನೀರುಳಿಸಲು ಸಾಧ್ಯವೆ? ಪ್ರಯತ್ನಿಸಿ]
ಇಷ್ಟೆಲ್ಲ ಆದ ಮೇಲೆ ಮದುವೆ ಸಡಗರ ಇಲ್ಲ ಅಂದ್ರೆ ಹೇಗೆ? ಹಾಗಾಗಿ ವಿದ್ಯಾರ್ಥಿನಿಯರೆಲ್ಲರೂ ಸೇರಿಕೊಂಡು ಹಾಡು-ಹಸೆಗೆ ಹೆಜ್ಜೆ ಹಾಕುತ್ತಾ ಮದುವೆ ಸಂಭ್ರಮದಲ್ಲಿದ್ದರು, ಕೆಲವರು ವಧುವನ್ನು ಸಿಂಗರಿಸುತ್ತಿದ್ದರೆ, ಮತ್ತೊಂದೆಡೆ ಮದುಮಗ ತಯಾರಾಗಿ ಕುಳಿತಿದ್ದ. ಮದುವೆ ಮನೆ ಎಂದ ಮೇಲೆ ತಮಾಷೆ, ಕಚಗುಳಿ, ಹರಟೆ ಹೀಗೆ ಎಲ್ಲವೂ ಅಲ್ಲಿತ್ತು.
ಇದೆಲ್ಲದರ ನಡುವೆ ಬಣ್ಣದ ಓಕುಳಿ, ಕಣ್ಣಿಗೆ ಬಟ್ಟೆ ಕಟ್ಟಿ ಮಡಿಕೆ ಒಡೆಯುವ ಆಟ. ಒಟ್ಟಾರೆ ಎಲ್ಲದರಲ್ಲೂ ಪಾಲ್ಗೊಂಡು ಸಂಭ್ರಮಪಟ್ಟ ವಿದ್ಯಾರ್ಥಿಯರು ಮೂಲೆಗುಂಪಾಗುತ್ತಿರುವ ಜನಪದ ಕಲೆಗಳನ್ನು ಮತ್ತೆ ನೆನಪಿಸುವ ಪ್ರಯತ್ನ ಮಾಡಿದರು. [ಸೀರೆ ಕಡ್ಡಾಯವಲ್ಲ, ಸಭ್ಯವಾದ ಡ್ರೆಸ್ ಇರಲಿ]
ಮಂಡ್ಯದಲ್ಲಿ ಜನಪದ ಜಾತ್ರೆ
ಝಕ್ಕಣಕ್ಕ ಝಕ್ಕ, ಝಕ್ಕಣಕ್ಕ ಝಕ್ಕ
ಏನು ಬೇಕೋ ಹೇಳಿ ಎಲ್ಲಾ ರೆಡಿ!
ಬಾರೇ ಸೆಲ್ಫಿ ತಕ್ಕೊಳ್ಳೋಣ
ಮಂಡ್ಯ ಜನಪದ ಜಾತ್ರೆಗೆ ಜೀವ ತುಂಬಿದ ಸೀರೆ ಸುಂದರಿಯರು
-
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್












Click it and Unblock the Notifications