Get Updates
Get notified of breaking news, exclusive insights, and must-see stories!

BJPvsBJP: ಹಾವೇರಿಯಲ್ಲಿ ಆಕ್ಟೀವ್‌ ಆದ ಈಶ್ವರಪ್ಪ ಪುತ್ರ- ಸಿಡಿದೆದ್ದ ಬಿಸಿ ಪಾಟೀಲ್‌; ಬಿಜೆಪಿಗೆ ಮತ್ತೊಂದು ಸಂಕಷ್ಟ

ಹಾವೇರಿ, ಆಗಸ್ಟ್‌ 23: ಮಾಜಿ ಡಿಸಿಎಂ ಈಶ್ವರಪ್ಪ ಪುತ್ರ ಕಾಂತೇಶ್‌ ಅವರು ಹಾವೇರಿ ಜಿಲ್ಲೆಯಲ್ಲಿ ಆಕ್ಟೀವ್‌ ಆಗಿದ್ದಾರೆ. ಹಾವೇರಿ ಲೋಕಸಭೆಯ ಈಗಿನ ಸಂಸದ ಶಿವಕುಮಾರ್ ಉದಾಸಿ ಅವರು ಚುನಾವಣೆಗೆ ಸ್ಪರ್ಧಿಸುವುದಿಲ್ಲವೆಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ, ಹಾವೇರಿ ಲೋಕಸಭೆ ಟಿಕೆಟ್‌ ಮೇಲೆ ಕಣ್ಣಿಟ್ಟಿರುವ ಕಾಂತೇಶ್‌ ಅವರು ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಇದರ ವಿರುದ್ಧ ಮಾಜಿ ಸಚಿವ ಬಿಸಿ ಪಾಟೀಲ್‌ ಸಿಡಿದೆದ್ದಿದ್ದಾರೆ.

ಆಪರೇಷನ್‌ ಹಸ್ತದ ಮೂಲಕ ಕೆಲ ಬಿಜೆಪಿ ನಾಯಕರು ಕಾಂಗ್ರೆಸ್‌ ಸೇರ್ಪಡೆಗೊಳ್ಳುವ ವದಂತಿಗಳು ದಟ್ಟವಾಗಿವೆ. ಈ ಬೆಳವಣಿಗೆಯ ನಡುವೆಯೇ ಈಶ್ವರಪ್ಪ ವಿರುದ್ಧ ಬಿಸಿ ಪಾಟೀಲ್‌ ಹರಿಹಾಯ್ದಿರುವುದು ಬಿಜೆಪಿಗೆ ಮತ್ತೊಂದು ಸಂಕಷ್ಟ ತಂದೊಡ್ಡಿದೆ.

BC Patil Objects to Eshwarappa’s Son’s Active Role in Haveri Lok Sabha Constituency

ಶಿವಮೊಗ್ಗದಲ್ಲಿ ಕೈತಪ್ಪಿದ ಟಿಕೆಟ್‌

ಶಿವಮೊಗ್ಗ ವಿಧಾನಸಭೆ ಕ್ಷೇತ್ರದಿಂದ ತಮಗೆ ಅಥವಾ ತಮ್ಮ ಪುತ್ರನಿಗೆ ಬಿಜೆಪಿ ಟಿಕೆಟ್‌ ಕೊಡಿಸಬೇಕೆಂದು ಮಾಜಿ ಡಿಸಿಎಂ ಕೆಎಸ್‌ ಈಶ್ವರಪ್ಪ ಶತಾಯಗತಾಯ ಯತ್ನಿಸಿದ್ದರು. ಆದರೆ, ಈಶ್ವರಪ್ಪ ಅವರಿಗಾಗಲಿ, ಅವರ ಪುತ್ರ ಕಾಂತೇಶ್‌ ಅವರಿಗಾಗಲೀ ಬಿಜೆಪಿ ಟಿಕೆಟ್‌ ನೀಡಲಿಲ್ಲ. ಇದು ಈಶ್ವರಪ್ಪ ಅವರ ಅಸಮಾಧಾನಕ್ಕೆ ಕಾರಣವಾಗಿದ್ದರೂ, ಬಹಿರಂಗವಾಗಿ ಹೇಳಿಕೊಂಡಿಲ್ಲ. ಆದರೆ, ಹಾವೇರಿ ಲೋಕಸಭೆ ಕ್ಷೇತ್ರದಿಂದ ಕಾಂತೇಶ್‌ ಅವರಿಗೆ ಟಿಕೆಟ್‌ ಕೊಡಿಸಬೇಕೆಂಬ ಆಶಯವನ್ನು ಈಶ್ವರಪ್ಪ ಹೊಂದಿದ್ದಾರೆ.

ಈ ಕುರಿತು ಮಾತನಾಡಿರುವ ಅವರು ಹಾವೇರಿ ಲೋಕಸಭೆ ಕ್ಷೇತ್ರದಿಂದ ಶಿವಕುಮಾರ್‌ ಉದಾಸಿ ಅವರು ಸ್ಪರ್ಧೆ ಮಾಡುವುದಿಲ್ಲವೆಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಹಾವೇರಿಯಿಂದ ಪುತ್ರ ಕಾಂತೇಶ್‌ ಅವರಿಗೆ ಟಿಕೆಟ್‌ ಕೇಳುತ್ತೇನೆ. ಹಾವೇರಿಯಲ್ಲಿ ಕಾಂತೇಶ್‌ ಅವರು ಸಕ್ರಿಯರಾಗಿ ಇರಲಿದ್ದಾರೆ ಎಂದು ಹೇಳಿದ್ದಾರೆ.

BC Patil Objects to Eshwarappa’s Son’s Active Role in Haveri Lok Sabha Constituency

ಕಾಂತೇಶ್‌ ಓಡಾಟ: ಬಿಸಿ ಪಾಟೀಲ್‌ ಆಕ್ರೋಶ

ಹಾವೇರಿಯಲ್ಲಿ ಕಾಂತೇಶ್‌ ಅವರು ಸಕ್ರಿಯರಾಗಿರುವುದು ಬಿಸಿ ಪಾಟೀಲ್‌ ಅವರಿಗೆ ಆಕ್ರೋಶ ತರಿಸಿದೆ. ವಿಧಾನಸಭೆ ಚುನಾವಣೆಯಲ್ಲಿ ಹಿರೇಕೆರೂರ್‌ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿರುವ ಬಿಸಿ ಪಾಟೀಲ್‌ ಅವರು ಹಾವೇರಿ ಲೋಕಸಭೆ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ.

ಈ ಕುರಿತು ಮಾತನಾಡಿರುವ ಬಿಸಿ ಪಾಟೀಲ್‌, ಕೆಎಸ್‌ ಈಶ್ವರಪ್ಪ ಅವರು ತಮ್ಮ ಪುತ್ರ ಕಾಂತೇಶ್‌ ಅವರನ್ನು ಹಾವೇರಿ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಎಂದು ಬಿಂಬಿಸುತ್ತಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ಕಾಂತೇಶ್‌ ಅವರಿಗೆ ಬಿಜೆಪಿ ಪಕ್ಷವು ಯಾವುದೇ ಸೂಚನೆ ನೀಡಿಲ್ಲ. ಹೀಗಿದ್ದರೂ ಕ್ಷೇತ್ರದಲ್ಲಿ ಓಡಾಡಿಕೊಂಡಿರುವ ಕಾಂತೇಶ್ ಅವರು ಜಿಲ್ಲೆಯ ವಾತಾವರಣವನ್ನು ಹಾಳು ಮಾಡುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ.

BC Patil Objects to Eshwarappa’s Son’s Active Role in Haveri Lok Sabha Constituency

ನಾನೂ ಸಹ ಲೋಕಸಭೆ ಟಿಕೆಟ್‌ ಆಕಾಂಕ್ಷಿ

ಹಾವೇರಿ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿಯಲು ಪಕ್ಷದಲ್ಲಿ ಬಹಳಷ್ಟು ಆಕಾಂಕ್ಷಿಗಳಿದ್ದಾರೆ. ಈ ಆಕಾಂಕ್ಷಿಗಳಲ್ಲಿ ನಾನೂ ಒಬ್ಬನಾಗಿದ್ದಾನೆ. ಚುನಾವಣೆಗೆ ಸ್ಪರ್ಧಿಸಿ ಗೆಲ್ಲುವ ಸಾಮಾರ್ಥ್ಯವನ್ನು ಬಹಳಷ್ಟು ಜನರು ಹೊಂದಿದ್ದಾರೆ. ಪಕ್ಷ ಒಪ್ಪಿದರೆ ನಾನು ಸಹ ಸ್ಪರ್ಧಿಸಲು ತಯಾರಿದ್ದೇನೆ ಎಂದು ಅವರು ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+