ವಿಧಾನಸೌಧದಲ್ಲಿ ಹಣದೊಂದಿಗೆ ಸಿಕ್ಕಿಬಿದ್ದಿದ್ದ ಎಂಜಿನಿಯರ್‌ಗೆ ಜಾಮೀನು

ಬೆಂಗಳೂರು, ಜನವರಿ 7: ಬುಧವಾರ ಸಂಜೆ ವಿಧಾನಸೌಧದ ಪಶ್ಚಿಮ ದ್ವಾರದಲ್ಲಿ 10.5 ಲಕ್ಷ ರೂಪಾಯಿ ನಗದು ಸಾಗಿಸುತ್ತಿದ್ದ ಆರೋಪದ ಮೇಲೆ ಬಂಧಿತರಾಗಿದ್ದ ಲೋಕೋಪಯೋಗಿ ಇಲಾಖೆಯ ಕಿರಿಯ ಎಂಜಿನಿಯರ್ ಜೆ.ಜಗದೀಶ ಅವರಿಗೆ ಜಾಮೀನು ಮಂಜೂರಾಗಿದೆ.

ವಿಧಾನಸೌಧ ಪೊಲೀಸರು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಮಂಡ್ಯದಲ್ಲಿ ತಮ್ಮ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದ ವ್ಯಕ್ತಿಯೊಬ್ಬರಿಗೆ ಕೊಡಲು ಹಣ ಹೊಂದಿಸಿದ್ದಾಗಿ ಜಗದೀಶ್ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಕೆಲವರಿಂದ ಸಾಲ ಪಡೆದಿರುವುದಾಗಿಯೂ ಹೇಳಿಕೊಂಡಿದ್ದಾರೆ. ನಾವು ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದೇವೆ ಮತ್ತು ಅವರು ಮಾಡಿದ ಹೇಳಿಕೆಗಳನ್ನು ನಾವು ಇನ್ನೂ ಪರಿಶೀಲಿಸಬೇಕಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಡಿಎಚ್‌ ವರದಿ ಮಾಡಿದೆ.

ಈ ಪ್ರಕರಣದಲ್ಲಿ ಜಗದೀಶ್ ಪರ ವಕಾಲತ್ತು ವಹಿಸುವುದಾಗಿ ಹೇಳಿಕೊಂಡಿರುವ ವಕೀಲ ನಾಗರಾಜ್ ಬಿ ಗಡೇಕರ್ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ತಮ್ಮ ಕಕ್ಷಿದಾರರ ಹೇಳಿಕೆ ಪ್ರಕಾರ ಮಂಡ್ಯದಲ್ಲಿ ಅವರ ವಿರುದ್ಧ ಚೆಕ್ ಬೌನ್ಸ್ ಪ್ರಕರಣವಿದೆ. ತನ್ನ ವಿರುದ್ಧ ಪ್ರಕರಣ ದಾಖಲಿಸಿದ ವ್ಯಕ್ತಿಗೆ ಹಣ ನೀಡಿ ಪ್ರಕರಣ ಇತ್ಯರ್ಥಪಡಿಸಲು ಮುಂದಾಗಿದ್ದರು ಎಂದಿದ್ದಾರೆ.

ಎಂಜಿನಿಯರ್‌ ಜಗದೀಶ್‌ ಹಣ ಹೊಂದಿಸಲು ಬೆಂಗಳೂರಿಗೆ ಬಂದಿದ್ದರು. ಅವರು ತನ್ನ ಕೆಲವು ಸಂಬಂಧಿಕರು ಮತ್ತು ಸ್ನೇಹಿತರಿಂದ ಹಣವನ್ನು ಸಾಲವಾಗಿ ಪಡೆದಿದ್ದನು. ಬಸ್ಸಿನಲ್ಲಿ ಬಂದಿದ್ದ ಅವರು ಮಂಡ್ಯಕ್ಕೆ ಹೋಗಬೇಕಿತ್ತು. ತಮ್ಮ ಕಚೇರಿಯ ಕಡತ ವಿಚಾರಿಸಲು ವಿಧಾನಸೌಧಕ್ಕೆ ಬಂದಿದ್ದರು. ಗೇಟ್‌ನಲ್ಲಿ ತಪಾಸಣೆ ನಡೆಸಿದಾಗ ನಗದು ಸಮೇತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಅವರನ್ನು ವಿಧಾನಸೌಧ ಠಾಣೆಗೆ ಕರೆದೊಯ್ದರು. ಅದೇ ದಿನ ಜಗದೀಶ್ ತನ್ನ ಚೆಕ್ ಬೌನ್ಸ್ ಪ್ರಕರಣವನ್ನು ತೆರವುಗೊಳಿಸಲು ಹಣವನ್ನು ಸಾಲವಾಗಿ ಪಡೆದಿದ್ದೇನೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ ಎಂದು ಗಡೇಕರ್ ಹೇಳಿದರು.

ಜಗದೀಶನನ್ನು ಬಂಧಿಸಲು ಒತ್ತಡ

ಜಗದೀಶನನ್ನು ಬಂಧಿಸಲು ಒತ್ತಡ

ನ್ಯಾಯಾಲಯದ ಅನುಮತಿಯಿಲ್ಲದೆ ಎಫ್‌ಐಆರ್ ದಾಖಲಿಸಲು ಸಾಧ್ಯವಿಲ್ಲದ ಕರ್ನಾಟಕ ಪೊಲೀಸ್ ಕಾಯಿದೆಯಡಿಯಲ್ಲಿ ಜಗದೀಶನನ್ನು ಬಂಧಿಸಲಾಗಿರಲಿಲ್ಲ ಎಂದು ಗಡೇಕರ್ ಪ್ರತಿಪಾದಿಸಿದರು. ಜಗದೀಶನನ್ನು ಬಂಧಿಸಲು ಒತ್ತಡವಿದೆ ಎಂದು ಇನ್ಸ್‌ಪೆಕ್ಟರ್ ಹೇಳಿದ್ದರು ಎಂದು ಅವರು ಹೇಳಿದರು. ಬಿಜೆಪಿ ಆಡಳಿತವಿರುವ ಕರ್ನಾಟಕದಲ್ಲಿ ಲಂಚಾವತಾರ ತಾಂಡವಾಡುತ್ತಿದೆ ಎಂದು ಕಾಂಗ್ರೆಸ್‌ ಸರಣಿ ಟ್ವೀಟ್‌ ಮೂಲಕ ಆರೋಪಿಸಿದೆ.

ಬಿಜೆಪಿ ದಲ್ಲಾಳಿಗಳ ಜನತಾ ಪಕ್ಷ

ಬಿಜೆಪಿ ದಲ್ಲಾಳಿಗಳ ಜನತಾ ಪಕ್ಷ

ಈ ಮಧ್ಯೆ ರಾಜ್ಯ ಸರ್ಕಾರ ವಿಧಾನಸೌಧವನ್ನು ವಿಶ್ವದ ಅತಿದೊಡ್ಡ ಶಾಪಿಂಗ್ ಮಾಲ್ ಆಗಿ ಪರಿವರ್ತಿಸಿದೆ ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. ಶುಕ್ರವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ದಲ್ಲಾಳಿಗಳ ಜನತಾ ಪಕ್ಷವಾಗಿ ಮಾರ್ಪಟ್ಟಿದೆ. ಸಚಿವರು, ಉನ್ನತ ಅಧಿಕಾರಿಗಳು ಮತ್ತು ಬಿಜೆಪಿ ಶಾಸಕರನ್ನು ಉತ್ತಮ ಮಾರಾಟಗಾರರು ಎಂದು ಅವರು ಕರೆದಿದ್ದಾರೆ.

ವಿಧಾನಸೌಧದ ಪಾವಿತ್ರ್ಯತೆ ಹಾಳು

ವಿಧಾನಸೌಧದ ಪಾವಿತ್ರ್ಯತೆ ಹಾಳು

ಶಾಪಿಂಗ್ ಮಾಲ್‌ (ವಿಧಾನಸೌಧದಲ್ಲಿ)ನಲ್ಲಿ ಪೋಸ್ಟಿಂಗ್, ವರ್ಗಾವಣೆ, ಉದ್ಯೋಗ ಮತ್ತು ಯೋಜನೆಗಳನ್ನು ಖರೀದಿಸಲಾಗುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭ್ರಷ್ಟಾಚಾರದಲ್ಲಿ ಹಿಂದಿನ ಬಿಎಸ್ ಯಡಿಯೂರಪ್ಪ ಅವರನ್ನು ಹಿಂದಿಕ್ಕಿ ವಿಧಾನಸೌಧದ ಪಾವಿತ್ರ್ಯತೆಯನ್ನು ಹಾಳು ಮಾಡಿದ್ದಾರೆ ಎಂದು ಆರೋಪಿಸಿದರು.

ಕರ್ನಾಟಕಕ್ಕೆ ದುಷ್ಕೃತ್ಯವೆಸಗುವ ಹೆಸರು

ಕರ್ನಾಟಕಕ್ಕೆ ದುಷ್ಕೃತ್ಯವೆಸಗುವ ಹೆಸರು

ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ವರ್ಗಾವಣೆಯನ್ನು ನಿಲ್ಲಿಸುವಂತೆ ಸರ್ಕಾರವನ್ನು ಒತ್ತಾಯಿಸಿದ ಅವರು, ಈ ಚಟುವಟಿಕೆಗಳಲ್ಲಿ ಮಂಜುನಾಥ್ ಕೆ ಎಸ್ ಅಲಿಯಾಸ್ ಸ್ಯಾಂಟ್ರೋ ರವಿ ಅವರ ಪಾತ್ರವನ್ನು ಇದೆ ಎಂದು ಆರೋಪಿಸಿದರು. 'ಕರ್ನಾಟಕವನ್ನು ಪ್ರಗತಿಪರ ರಾಜ್ಯ ಎಂದು ಕರೆಯಲಾಗುತ್ತಿತ್ತು. ಈಗ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಭ್ರಷ್ಟಾಚಾರದ ಮೂಲಕ ದುಷ್ಕೃತ್ಯವೆಸಗುವ ಹೆಸರು ಗಳಿಸಿದೆ. ರಾಜ್ಯ ಸರ್ಕಾರ ರೌಡಿಗಳಿಂದಲೇ ನಡೆಯುತ್ತಿದೆ ಎಂದು ಆರೋಪಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+