Get Updates
Get notified of breaking news, exclusive insights, and must-see stories!

ಕನ್ನಡ ಭಾಷಾಭಿಮಾನಕ್ಕೆ ಧಕ್ಕೆ: ರಾಜಕೀಯ ಹುನ್ನಾರ!

ನಟ ಕಮಲ್ ಹಾಸನ್ ಅವರ ಹೇಳಿಕೆ ಕರ್ನಾಟಕದಲ್ಲಿ ಭಾಷಾಭಿಮಾನಕ್ಕೆ ಸಂಬಂಧಿಸಿದಂತೆ ಹೊಸ ಚರ್ಚೆಯನ್ನೇ ಹುಟ್ಟುಹಾಕಿದೆ. ಬೆಂಗಳೂರಿನಲ್ಲಿ ಹಿಂದಿ ಭಾಷಿಕರು - ಕನ್ನಡಿಗರೊಂದಿಗೆ ಮಾಡುತ್ತಿರುವ ಜಗಳ ಪ್ರತಿ ದಿನವೂ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದರ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಸಬೀನಾ ಎ, ಮೈಸೂರು ಅವರ ಬರಹ ಆಕರ್ಷಣೀಯವಾಗಿದೆ. ಭಾಷಾಭಿಮಾನಕ್ಕೆ ಧಕ್ಕೆ: ರಾಜಕೀಯ ಹುನ್ನಾರ ಎನ್ನುವ ಬರಹವು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಭಾಷಾಭಿಮಾನಕ್ಕೆ ಧಕ್ಕೆ: ರಾಜಕೀಯ ಹುನ್ನಾರ ಎನ್ನುವ ಸಾಲಿನಲ್ಲಿ ಸಬೀನಾ ಅವರು ಸುದೀರ್ಘವಾಗಿ ಕನ್ನಡದ ಇಂದಿನ ಸ್ಥಿತಿಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕನ್ನಡಿಗರು ಮಾತ್ರವಲ್ಲ ದಕ್ಷಿಣ ರಾಜ್ಯಗಳ ಎಲ್ಲಾ ಜನಸಾಮಾನ್ಯರು ತಮ್ಮ ಭಾಷೆಗಳ ಬಗ್ಗೆ ಕೇವಲ ಭಾವುಕರಾಗದೆ, ಈ ಅವಹೇಳಿಕೆಗಳ ಹಿಂದಿನ ರಾಜಕಾರಣವನ್ನೂ ಕಣ್ತೆರೆದು ನೋಡಬೇಕಿದೆ ಎಂದು ಅವರು ಹೇಳಿದ್ದಾರೆ.

Attack on Kannada language pride Political intrigue

ಕನ್ನಡಿಗರನ್ನು ಕೆಣಕುವ ಉಳ್ಳವರ ಪ್ರಯತ್ನಗಳ ಹಿಂದಿನ ಕುತಂತ್ರ ಅರ್ಥೈಸಿಕೊಳ್ಳಬೇಕು ಎನ್ನಿಸುತ್ತದೆ. ದಕ್ಷಿಣ ಭಾರತದ ಮೇಲೆ ಸತತ ಹಿಂದಿ ಹೇರಿಕೆ ಮಾಡಿ, ಉತ್ತರದ ಜನಪ್ರತಿನಿಧಿಗಳು ಕೈ ಸುಟ್ಟುಕೊಂಡಿದ್ದಾರೆ ಮತ್ತು ಅವರ ಕಾನೂನುಗಳನ್ನು ವಿಮರ್ಶಿಸಿ ಪ್ರಜ್ಞಾವಂತರಾಗಿ ಒಗ್ಗಟ್ಟಿನಿಂದ ಎದುರಿಸುತ್ತಿರುವ ಪರಿಣಾಮ ದಕ್ಷಿಣದ ರಾಜ್ಯಗಳು ಅವರಿಗೆ ತಲೆನೋವಾಗಿ ಪರಿಣಮಿಸಿದೆ. ಇತ್ತ ಶ್ರೀಮಂತಶಾಹಿಗಳ ಕಂಪನಿಗಳು, ಕನ್ನಡ ನೆಲದಲ್ಲೇ ನೆಲೆಕಂಡು ಕನ್ನಡವನ್ನೇ ಅಸ್ಪೃಶ್ಯದಂತೆ, ಕನ್ನಡಿಗರನ್ನು ಅಶಿಕ್ಷಿತರಂತೆ ಕಾಣುವ ಹಲವು ಉತ್ತರದ ಉದ್ಯೋಗಿಗಳು ತಮ್ಮ ನಾಡಿಗೆ ವಿಮುಖರಾಗುವುದನ್ನು ತಡೆದು ಕಂಪನಿ ಉಳಿಸುವ ಸಾಹಸ ಮಾಡುತ್ತಿವೆ ಎಂದಿದ್ದಾರೆ.

ಮುಂದುವರಿದು ಈ ಸವಾಲಿಗೆ ವಿರಾಮ ಹಾಕಲು ಸರ್ಕಾರ ಮತ್ತು ಶ್ರೀಮಂತಶಾಹಿಗಳು ಬಳಸುತ್ತಿರುವ ಏಕೈಕ ಅಸ್ತ್ರ ಒಡೆದು ಆಳುವ ತಂತ್ರ. ದಕ್ಷಿಣ ಭಾರತದ ಒಗ್ಗಟ್ಟನ್ನು ಮುರಿಯುವುದೇ ಏಕೈಕ ಪರಿಹಾರ ಎಂಬುದು ಅವರಿಗೆ ಗೊತ್ತಿದೆ. ಈ ಒಗ್ಗಟ್ಟನ್ನು ಮುರಿಯಲು ನೇರವಾಗಿ ಉತ್ತರದವರ ಹಸ್ತಕ್ಷೇಪದಿಂದ ಸಾಧ್ಯ ಇಲ್ಲ ಎಂಬುದನ್ನು ಚೆನ್ನಾಗಿ ಅರಿತಿರುವ ಅವರು ನಮ್ಮನ್ನೇ ನಮ್ಮ ವಿರುದ್ಧ ಎತ್ತಿಕಟ್ಟುವ ಕುತಂತ್ರ ಹೂಡಿವೆ. ಅದಕ್ಕೆ ಪಬ್ಲಿಕ್ ಫಿಗರ್ ಎನಿಸಿಕೊಂಡವರಿಂದ ಈ ರೀತಿಯ ಹೇಳಿಕೆ ನೀಡಿ ದಕ್ಷಿಣದ ರಾಜ್ಯಗಳು ಭಾಷೆ ವಿಷಯಕ್ಕೆ ಪರಸ್ಪರ ದ್ವೇಷ, ಅಸಹಕಾರ, ವೈಷಮ್ಯ ಬೆಳೆಸಿಕೊಳ್ಳುವಂತೆ ಮಾಡುತ್ತಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇಲ್ಲಿ ಯಾರೋ ಒಬ್ಬ ಈ ರೀತಿಯ ಹೇಳಿಕೆ ನೀಡಿದರೆ ಅದು ಇಡೀ ರಾಜ್ಯದವರ ವಿರುದ್ಧ ವೈಷಮ್ಯ ಹುಟ್ಟಿಸುತ್ತದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಯ ಜನ ಸಾಮಾನ್ಯರ ಬಗ್ಗೆಯೂ ದ್ವೇಷ ಹುಟ್ಟಿಸುತ್ತವೆ. ಹಾಗಾಗಿ ಜನರ ಭಾವನೆಗಳನ್ನು ಬಳಸಿಕೊಂಡು ಒಗ್ಗಟ್ಟು ಮುರಿಯುವ ವಿಷಜಂತುಗಳಿಗೆ ಸರಿಯಾದ ಪಾಠ ಕಲಿಸಿ ನಮ್ಮ ಒಗ್ಗಟ್ಟನ್ನು ಮತ್ತಷ್ಟು ಬಲಿಷ್ಠ ಗೊಳಿಸಬೇಕಿದೆ. ಹಾಗಂತ ಉತ್ತರ ಭಾರತದ ಎಲ್ಲಾ ಹಿಂದಿ ಭಾಷಿಕರನ್ನೂ ಅದೇ ತಕ್ಕಡಿಯಲ್ಲಿಟ್ಟು ತೂಗುವುದೂ ನ್ಯಾಯ ಅಲ್ಲ. ತಮ್ಮ ರಾಜಕೀಯ, ಲಾಭದ ಬೇಳೆ ಬೇಯಿಸಿಕೊಳ್ಳಲು ಬರುವವರ ವಿರುದ್ಧ ನಾವು ಸದಾ ಎಚ್ಚರಿಕೆ ವಹಿಸಬೇಕಾಗಿದೆ. ನಾವು ಕನ್ನಡಿಗರು, ದಕ್ಷಿಣದವರು ಜತೆ ಜತೆಗೆ ಭಾರತೀಯರು, ವಿಶ್ವಮಾನವರು ಎಂದಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+