9 ದಿನಗಳ ಕಾಲ ಅಶ್ವಿನ್ ರಾವ್ ಎಸ್ಐಟಿ ವಶಕ್ಕೆ
ಬೆಂಗಳೂರು, ಜುಲೈ 28 : ಕರ್ನಾಟಕ ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಲೋಕಾಯುಕ್ತ ನ್ಯಾ.ಭಾಸ್ಕರರಾವ್ ಪುತ್ರ ಅಶ್ವಿನ್ ರಾವ್ ಅವರನ್ನು ಕೋರ್ಟ್ಗೆ ಹಾಜರುಪಡಿಸಲಾಗಿದೆ. ಲೋಕಾಯುಕ್ತ ವಿಶೇಷ ಕೋರ್ಟ್ ಅಶ್ವಿನ್ ರಾವ್ ಅವರನ್ನು 9 ದಿನಗಳ ಕಾಲ ಎಸ್ಐಟಿ ವಶಕ್ಕೆ ಒಪ್ಪಿಸಿದೆ.
ಭ್ರಷ್ಟಾಚಾರ
ಪ್ರಕರಣದಲ್ಲಿ
ಅಶ್ವಿನ್
ರಾವ್
ಅವರು
ಮೊದಲ
ಆರೋಪಿಯಾಗಿದ್ದಾರೆ.
ಸೋಮವಾರ
ಬೆಳಗ್ಗೆ
ತೆಲಂಗಾಣದ
ರಂಗಾರೆಡ್ಡಿ
ಜಿಲ್ಲೆಯಲ್ಲಿರುವ
ನಿವಾಸದಲ್ಲಿ
ಅಶ್ವಿನ್
ರಾವ್
ಅವರನ್ನು
ಎಸ್ಐಟಿ
ತಂಡ
ಬಂಧಿಸಿತ್ತು.
ರಾತ್ರಿ
10.45ರ
ಸುಮಾರಿಗೆ
ಅವರನ್ನು
ಬೆಂಗಳೂರಿಗೆ
ಕರೆತರಲಾಯಿತು.
[ತೆಲಂಗಾಣದಲ್ಲಿ
ಅಶ್ವಿನ್
ರಾವ್
ಬಂಧನ]
'ಸೋಮವಾರ
ಬೆಳಗ್ಗೆ
8
ಗಂಟೆಗೆ
ಪೊಲೀಸರು
ಮನಗೆ
ಬಂದು
ನನ್ನನ್ನು
ವಶಕ್ಕೆ
ಪಡೆದರು.
ನಂತರ
ಮಧ್ಯಾಹ್ನ
1.30ಕ್ಕೆ
ನೋಟಿಸ್
ನೀಡಿ
ವಿಚಾರಣೆಗಾಗಿ
ಬೆಂಗಳೂರಿಗೆ
ಕರೆತಂದರು.
ಇನ್ನೋವಾ
ಕಾರಿನಲ್ಲಿ
ರಾತ್ರಿ
ಬೆಂಗಳೂರಿಗೆ
ಆಗಮಿಸಿದೆವು'
ಎಂದು
ಅಶ್ವಿನ್
ರಾವ್
ಕೋರ್ಟ್ನಲ್ಲಿ
ಹೇಳಿಕೆ
ನೀಡಿದ್ದಾರೆ.
ಲೋಕಾಯುಕ್ತ ನ್ಯಾಯಾಲಯಕ್ಕೆ ನ್ಯಾ.ಭಾಸ್ಕರ್ ರಾವ್ ಪುತ್ರ ಅಶ್ವಿನ್ ರಾವ್ ಹಾಜರು http://publictv.in/?p=46400 #lokayukta #AshwinRao #Bengaluru
Posted by Public TV onTuesday, July 28, 2015
ಜನಾರ್ದನ್ ಎಸ್ಪಿಸಿ : ಲೋಕಾಯುಕ್ತ ಹಗರಣದ ಪ್ರಕರಣದಲ್ಲಿ ಎಸ್ಐಟಿ ಪರವಾಗಿ ವಾದ ಮಾಡಲು ಜನಾರ್ದನ್ ಅವರನ್ನು ವಿಶೇಷ ಸರ್ಕಾರಿ ಅಭಿಯೋಜಕರಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ನೇಮಕದ ಆದೇಶದ ಪ್ರತಿಯನ್ನು ಲೋಕಾಯುಕ್ತ ಕೋರ್ಟ್ಗೆ ಸಲ್ಲಿಕೆ ಮಾಡಲಾಗಿದೆ.
ಅಶ್ವಿನ್ ರಾವ್ ಅವರನ್ನು ಹೆಚ್ಚಿನ ವಿಚಾರಣೆಗಾಗಿ 14 ದಿನಗಳ ಕಾಲ ಎಸ್ಐಟಿ ವಶಕ್ಕೆ ನೀಡಬೇಕು ಎಂದು ಪೊಲೀಸರು ಮನವಿ ಮಾಡಿದರು. ಆದರೆ, ಕೋರ್ಟ್ ಆಗಸ್ಟ್ 6ರವರೆಗೆ (9 ದಿನ)ಗಳ ಕಾಲ ಎಸ್ಐಟಿ ವಶಕ್ಕೆ ನೀಡಿತು.