Get Updates
Get notified of breaking news, exclusive insights, and must-see stories!

Arecanut: ಕರ್ನಾಟಕದಲ್ಲಿ ಅಡಿಕೆ ನಿಷೇಧ ಮಾಡಿ ಅಡಿಕೆ ಬೆಳೆಗಾರರಿಗೆ ದಿಢೀರ್....

ಅಡಿಕೆ ಕರ್ನಾಟಕದ ರೈತರ ಪಾಲಿಗೆ ಚಿನ್ನದ ಬೆಳೆಯಾಗಿದೆ. ಮಲೆನಾಡು ಪ್ರದೇಶದಲ್ಲಿ ಈ ಬೆಳೆ ಮೊದಲಿಗೆ ಹರಡಿತ್ತು, ಆ ನಂತರ ಅಡಿಕೆ ಬೆಳೆ ಬಯಲು ಸೀಮೆ ಭಾಗದಲ್ಲೂ ಉತ್ತಮ ಬೆಳೆಯಾಗಿ ರೈತರ ಕೈಹಿಡಿದು ನಡೆಸುತ್ತಿದೆ. ಲಕ್ಷಾಂತರ ಕೋಟಿ ರೂಪಾಯಿ ವ್ಯವಹಾರವನ್ನ ನಡೆಸುವ ಅಡಿಕೆ ಬೆಳೆಯನ್ನ ನಂಬಿ ಕೋಟ್ಯಂತರ ಜನರು ಜೀವನ ನಡೆಸುತ್ತಿದ್ದಾರೆ. ಇಂತಹ ಸಮಯದಲ್ಲೇ, ಕರ್ನಾಟಕದಲ್ಲಿ ಅಡಿಕೆ ನಿಷೇಧ ಮಾಡಿ ಅಡಿಕೆ ಬೆಳೆಗಾರರಿಗೆ ದಿಢೀರ್....

ಅಡಿಕೆ ಬೆಳೆ ಮಲೆನಾಡು ಭಾಗದಲ್ಲಿ ರೈತ ಸಮುದಾಯವನ್ನು ಮಾತ್ರವಲ್ಲ ಬಯಲು ಸೀಮೆ ಭಾಗದ ರೈತರನ್ನು ಕೂಡ ಶ್ರೀಮಂತ ರೈತರನ್ನಾಗಿ ಮಾಡಿದೆ. ಯಾಕಂದ್ರೆ ಅಡಿಕೆ ಬೆಳೆ ಭಾರಿ ಲಾಭ ನೀಡುತ್ತದೆ. ಭತ್ತ, ರಾಗಿ, ತೆಂಗು ಸೇರಿದಂತೆ ಇನ್ನಿತರ ಬೆಳೆಗೆ ಹೋಲಿಕೆ ಮಾಡಿದರೆ ಅಡಿಕೆ ಬೆಳೆಯಲ್ಲಿ ಲಾಭ ಅತಿಹೆಚ್ಚಾಗಿದೆ & ನಿರ್ವಹಣೆ ಕೂಡ ಕಡಿಮೆ. ಇದೇ ಕಾರಣ ಈಗ ರೈತರು ಕೂಡ ತಮ್ಮ ಗದ್ದೆಗಳನ್ನು ಹದ ಮಾಡಿ ಅಡಿಕೆ ತೋಟ ಮಾಡುತ್ತಿದ್ದಾರೆ. ಪರಿಸ್ಥಿತಿ ಹೀಗೆ ಇದ್ದ ಸಮಯದಲ್ಲೇ, ಕರ್ನಾಟಕದಲ್ಲಿ ಈಗ ಅಡಿಕೆ ನಿಷೇಧ ಮಾಡಿ ಅಡಿಕೆ ಬೆಳೆಗಾರರಿಗೆ ದಿಢೀರ್....

Arecanut Crop And Lab Reports Are Saying This Now

ಕರ್ನಾಟಕದಲ್ಲಿ ಅಡಿಕೆ ನಿಷೇಧ ಮಾಡಲು...

ಅಡಿಕೆ ಬೆಳೆ ನಂಬಿ ಕೂತಿರುವ ರೈತರು ತಮ್ಮ ಜಮೀನು ಪೂರ್ತಿ ಅಡಿಕೆ ಸಸಿಗಳನ್ನೇ ನಾಟಿ ಮಾಡಿದ್ದಾರೆ. ಅಲ್ಲದೆ ಅಡಿಕೆ ಮರಗಳನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ ರೈತರು. ಆದರೆ ಈಗ ನೋಡಿದರೆ ಅಡಿಕೆ ನಿಷೇಧ ಆಗುವ ಮಾತು ಕೇಳಿ ಬರುತ್ತಿದೆ. ಈ ವಿಚಾರ ಸಂಚಲನ ಸೃಷ್ಟಿ ಮಾಡುತ್ತಿದೆ. ಯಾಕಂದ್ರೆ, ಅಡಿಕೆ ನಿಷೇಧ ಮಾಡಿದರೆ ಪರಿಸ್ಥಿತಿ ಮುಂದೆ ಭಾರಿ ಘೋರ ಎನ್ನುವಂತೆ ಆಗಲಿದೆ. ಹೀಗಾಗಿ ರೈತರಿಗೆ ಚಿಂತೆ ಶುರುವಾಗಿದೆ. ಹಾಗಾದರೆ, ದಿಢೀರ್ ಅಡಿಕೆ ನಿಷೇಧ ಮಾಡಲು ಕಾರಣ ಏನು?

ಕ್ಯಾನ್ಸರ್ ಕಾರಣಕ್ಕೆ ಅಡಿಕೆ ನಿಷೇಧ?

ಹೌದು, ಇದೀಗ ಅಡಿಕೆ ಬಳಕೆ ಕಾರಣಕ್ಕೆ ಕ್ಯಾನ್ಸರ್ ಹೆಚ್ಚಾಗುತ್ತಿದೆ ಎಂಬ ಆರೋಪ ಹಲವು ಅಂತಾರಾಷ್ಟ್ರೀಯ ಲ್ಯಾಬ್‌ಗಳ ಮೂಲಕ ಗೊತ್ತಾಗಿದೆ. ಹೀಗಾಗಿ ಅಡಿಕೆ ಬೆಳೆ ನಿಷೇಧ ಮಾಡಿ ಕ್ಯಾನ್ಸರ್ ತಡೆಗಟ್ಟಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂಬ ವದಂತಿ ಹಬ್ಬಿದೆ. ಆದರೆ ಈ ಸುದ್ದಿ ಸುಳ್ಳು, ಯಾಕಂದ್ರೆ ಅಡಿಕೆ ಮೂಲಕ ಕ್ಯಾನ್ಸರ್ ಬರಬಹುದು ಎಂಬ ವಿಚಾರ ಹಲವಾರು ವರ್ಷಗಳಿಂದಲೂ ಚರ್ಚೆಯಲ್ಲಿದೆ. ಆದರೆ ಈವರೆಗೂ ಅಡಿಕೆ ಬ್ಯಾನ್ ಆಗಿಲ್ಲ. ಈಗ ಇದರ ಬಗ್ಗೆ ಸೋಷಿಯಲ್ ಮೀಡಿಯಾ ಸೇರಿದಂತೆ ಇತರ ಕಡೆಗಳಲ್ಲಿ ಸುಳ್ಳು ಸುದ್ದಿ ಹಬ್ಬುತ್ತಿದೆ.

ಅಡಿಕೆ ತಿಂದರೆ ಕ್ಯಾನ್ಸರ್ ಬರುತ್ತಾ?

ಕರ್ನಾಟಕದ ಬಹುತೇಕ ರೈತರ ಬೆಳೆಯಾಗಿರುವ ಅಡಿಕೆ ಬಗ್ಗೆ ಮೊದಲಿನಿಂದ ಕೂಡ ಭಾರಿ ಗೊಂದಲ ಇದ್ದೇ ಇದೆ. ಅಡಿಕೆ ತಿಂದರೆ ಕ್ಯಾನ್ಸರ್ ಬರುತ್ತೆ ಎಂಬ ವಾದದ ನಡುವೆ, ಇಲ್ಲ ಇಲ್ಲ ಅಡಿಕೆ ತಿಂದರೆ ಕ್ಯಾನ್ಸರ್ ಬರೋದಿಲ್ಲ ಆದರೆ ಗುಟ್ಕಾ & ಪಾನ್ ರೂಪದಲ್ಲಿ ಅಡಿಕೆ ಬಳಸಿದರೆ ಕ್ಯಾನ್ಸರ್ ಬರುತ್ತೆ ಎಂಬ ವಾದ ಇದೆ. ಹೀಗಿದ್ದರೂ ಅಡಿಕೆ ಬ್ಯಾನ್ ಮಾಡುವ ಬಗ್ಗೆ ಕರ್ನಾಟಕ ಸರ್ಕಾರವೇ ಆಗಲಿ, ಭಾರತ ಸರ್ಕಾರವೇ ಆಗಲಿ ಯಾವುದೇ ರೀತಿಯಲ್ಲಿ ಕ್ರಮಕ್ಕೆ ಮುಂದಾಗಿಲ್ಲ. ಹೀಗಾಗಿ ಇಂತಹ ಗಾಳಿ ಸುದ್ದಿಗಳಿಗೆ ರೈತರು ಬೆಲೆ ಕೊಡಬಾರದು ಅಂತಿದ್ದಾರೆ ಜನ.

ಅಡಿಕೆ ಬೆಲೆ 50 ಸಾವಿರ ರೂಪಾಯಿ...

ಇದೀಗ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆ ಉತ್ತಮ ಸ್ಥಿತಿಯಲ್ಲಿದೆ. ಅದ್ರಲ್ಲೂ ರಾಶಿ ಅಡಿಕೆ 50 ಸಾವಿರ ರೂಪಾಯಿ ಗಡಿ ದಾಟಿ ಮಾರಾಟ ಆಗುತ್ತಿದೆ. ಈ ಮೂಲಕ ಅಡಿಕೆ ಬೆಲೆಯಲ್ಲಿ ಚೇತರಿಕೆ ಆಗಿದ್ದರಿಂದ ಬೆಳೆಗಾರರು ಖುಷಿಯಾಗಿದ್ದಾರೆ. ಡಿಮ್ಯಾಂಡ್ ಹೆಚ್ಚಾಗಿರುವ ಹಿನ್ನೆಲೆ ಅಡಿಕೆ ಧಾರಣೆ ಮತ್ತಷ್ಟು ಏರಿಕೆ ಆಗುವ ಸಾಧ್ಯತೆಯು ಇದೆ ಎಂದು ಹೇಳಲಾಗುತ್ತಿದೆ. ಈ ನಡುವೆ ಅಡಿಕೆ ನಿಷೇಧದ ಮಾತುಗಳು ಕೇಳಿ ಬರುತ್ತಿರುವುದು ಅಡಿಕೆ ಬೆಳೆಗಾರರನ್ನು ಚಿಂತೆ ಮಾಡುವಂತೆ ಮಾಡಿದೆ. ಹೀಗಾಗಿ ಸರ್ಕಾರ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂಬ ಒತ್ತಾಯ ಇದೀಗ ಕೇಳಿ ಬರುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+