ಅಂಕೋಲಾದ ವಾಟ್ಸಾಪ್ ಹುಡುಗರು ಕಾಲಹರಣ ಮಾಡ್ತಿಲ್ಲ!
ಕಾರವಾರ, ಜುಲೈ 07 : ಎಲ್ಲರಿಗೂ ಈಗಿನ ಜಮಾನಾದಲ್ಲಿ ವಾಟ್ಸಪ್, ಫೇಸ್ಬುಕ್ನದೇ ಚಿಂತೆ. ದಿನಬೆಳಗಾದರೆ ಸಾಕು ಕೈಯಲ್ಲಿ ಮೊಬೈಲ್ ಹಿಡಿದು ಚಾಟಿಂಗ್ ಮಾಡೋಕೆ ಶುರು ಮಾಡಿದರೆ ಅದು ಯಾವಾಗ ಮುಗಿಯತ್ತೋ ಆ ಭಗವಂತನಿಗೂ ಗೊತ್ತಿರುವುದಿಲ್ಲ.
ವಾಟ್ಸಾಪ್ ಅನ್ನುವುದೇ ವ್ಯರ್ಥ ಕಾಲಹರಣಕ್ಕೆ ಹೇಳಿ ಮಾಡಿಸಿದ ತಾಣವಾಗಿರುವಾಗ, ವಾಟ್ಸಾಪ್ ಗ್ರೂಪ್ ಕಟ್ಟಿಕೊಂಡು ಸಮಾಜ ಸೇವೆಗೆ ಮುಂದಾಗಿರುವ ಈ ಯುವಕರ ಉತ್ಸಾಹ ನೋಡಿದರೆ ನಿಜಕ್ಕೂ ನೀವು ಬೆರಗಾಗ್ತೀರಾ.

ಸಾಮಾಜಿಕ ಜಾಲತಾಣಗಳಲ್ಲಿ ಸಿಲುಕಿಕೊಂಡು ಸಮಯ ವ್ಯರ್ಥ ಮಾಡುತ್ತಿರುವವರ ನಡುವೆ, ಅದೇ ಸಾಮಾಜಿಕ ಜಾಲ ತಾಣವನ್ನು ಉಪಯೋಗಿಸಿಕೊಂಡು ಸಮಾಜದ ಪರಿವರ್ತನೆಯತ್ತ ಹೆಜ್ಜೆ ಹಾಕುತ್ತಿದೆ ಅಂಕೋಲಾ ತಾಲ್ಲೂಕಿನ ಕೇಣಿಯ 'ಜೇನುಗೂಡು' ವಾಟ್ಸಾಪ್ ಗ್ರೂಪ್.

ಭಾನುವಾರ ಬಂತೆಂದರೆ ಸಾಕು ಈ ಗ್ರೂಪಿನ ಯುವಕರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ, ಕೈಯಲ್ಲಿ ಪೊರಕೆ ಹಿಡಿದು, ಹಳ್ಳಿಹಳ್ಳಿಯನ್ನು ಅಲೆದು ಸ್ವಚ್ಛತೆ ಮಾಡುತ್ತಿದ್ದಾರೆ. ಆ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ 'ಸ್ವಚ್ಛ ಭಾರತ್ ಮಿಷನ್'ಗೆ ಪ್ರತ್ಯಕ್ಷವಾಗಿಯೂ, ಪರೋಕ್ಷವಾಗಿಯೂ ತಮ್ಮ ಕೊಡುಗೆ ನೀಡುತ್ತಿದ್ದಾರೆ.

ಜೂನ್ 25ಕ್ಕೆ ಇವರ ಸ್ವಚ್ಛತಾ ಕಾರ್ಯ 106ನೇ ವಾರ ಪೂರ್ಣಗೊಳಿಸಿದೆ. ಸ್ವಚ್ಛತೆಯ ಜತೆಜತೆಗೆ ಅಲ್ಲಿನ ಸ್ಥಳೀಯರಿಗೆ ಕರಪತ್ರ ಸೇರಿದಂತೆ ಭಾಷಣದ ಮೂಲಕ ಸ್ವಚ್ಛತೆಯ ಅರಿವು ಮೂಡಿಸುತ್ತಿದ್ದಾರೆ. 'ಹಸಿರೇ ಉಸಿರು' ಎಂಬ ಕಾರ್ಯಕ್ರಮದ ಮೂಲಕ ಗಿಡ ನೆಡುವ ಕಾರ್ಯ ಮಾಡುತ್ತಿದ್ದಾರೆ.
ಇವರ ಈ ಕಾರ್ಯವೈಖರಿ ನೋಡಿರುವ ಅದೆಷ್ಟೋ ಯುವಕರು ಇವರ ಗುಂಪಿಗೆ ಸೇರ್ಪಡೆಯಾಗುತ್ತಿದ್ದಾರೆ. ನಾಲ್ಕೈದು ಮಂದಿಯಿಂದ ಆರಂಭವಾದ ಗುಂಪು ಈಗ ನೂರಾರು ಜನರ ಬಳಗವಾಗಿ ನಿರ್ಮಾಣವಾಗಿದೆ. ಜತೆಗೆ ಅಂಕೋಲಾ ತಾಲೂಕಿಗಷ್ಟೇ ಸೀಮಿತವಾಗದೇ ಯಲ್ಲಾಪುರ, ಭಟ್ಕಳ ಸೇರಿದಂತೆ ಹೊರ ರಾಜ್ಯದ ಕೆಲವೆಡೆಯೂ ಕೂಡ ಇವರ ಗುಂಪಿನ ಹೆಸರಿನಲ್ಲಿ ಯುವಕರು ಸ್ವಚ್ಛತಾ ಕಾರ್ಯ ನಡೆಸುತ್ತಿದ್ದಾರೆ.

'ಸಮಾಜಕ್ಕಾಗಿ ಏನಾದರು ಮಾಡಬೇಕೆನ್ನುವ ತುಡಿತವಿದೆ. 100 ವಾರಗಳನ್ನು ಅಂಕೋಲೆಯ ಸಹೃದಯಿ ಮನಸ್ಸುಗಳೊಂದಿಗೆ ಜೊತೆಗೂಡಿ ಪೂರೈಸಿದ್ದು, ಇಡೀ ಜಿಲ್ಲೆಯನ್ನು ಸ್ವಚ್ಛ ಜಿಲ್ಲೆಯನ್ನಾಗಿ ಮರುನಿರ್ಮಾಣ ಮಾಡುವ ಕನಸು ಹೊತ್ತಿದ್ದೇವೆ' ಅನ್ನುತ್ತಾರೆ ಜೇನುಗೂಡು ವಾಟ್ಸಪ್ ಗ್ರೂಪಿನ ಸಂಸ್ಥಾಪನಾ ಅಧ್ಯಕ್ಷ ವಿಶಾಲ ಬಂಟ.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications