ಪುಸ್ತಕ ಪ್ರೇಮಿಗಳೇ, ಮಂಡ್ಯದಲ್ಲಿ ಒಂದುವಾರ ಸರ್ವಜ್ಞನ ಪುಸ್ತಕ ಮೇಳ
ಮಂಡ್ಯ,ಏಪ್ರಿಲ್,01: 'ರಸಿಕನಾಡಿದ ಮಾತು ಶಶಿಯುದಿಸಿ ಬಂದಂತೆ, ರಸಿಕನಲ್ಲದವನ ಬರಿಮಾತು ಕಿವಿಯೊಳ್ಕೂರ್ದಸಿಯು ಬಡಿದಂತೆ... ಮಾತು ಬಲ್ಲಾಂತಗೆ ಮಾತೊಂದು ಮಾಣಿಕವು, ಮಾತ ತಾನರಿಯದ ಅಧಮಗೆ ಮಾಣಿಕವು ತೂತು ಬಿದ್ದಂತೆ'...ಈ ಸಾಲುಗಳು ಯಾರದು ಎಂದು ನೆನಪಾಗಿರಬೇಕಲ್ವಾ? ನಿಜ ಇವು ಸರ್ವಜ್ಞನ ವಚನದ ಸಾಲು
ಪುಸ್ತಕ ಪ್ರೇಮಿ ಅಂಕೇಗೌಡ ಅವರು ತ್ರಿಪದಿಗಳ ಬ್ರಹ್ಮ ಸರ್ವಜ್ಞ ಅವರ ಜಯಂತಿ ಅಂಗವಾಗಿ ಮಂಡ್ಯದ ಪಾಂಡವಪುರದ ವಿಶ್ವೇಶ್ವರನಗರ ಬಡಾವಣೆಯಲ್ಲಿರುವ ತಮ್ಮ ಪುಸ್ತಕದ ಮನೆಯಲ್ಲಿ ಸರ್ವಜ್ಞರ ಕೃತಿಗಳ ಪ್ರದರ್ಶನ ಏರ್ಪಡಿಸಿದ್ದು, ಇಂದಿನಿಂದ ಒಂದು ವಾರ ಕಾಲ ಪುಸ್ತಕಗಳು ಲಭ್ಯವಾಗಲಿವೆ.[2014 ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ]

ಅಂಕೇಗೌಡರು ಪುಸ್ತಕದ ಮೇಲೆ ಅಪಾರ ಪ್ರೀತಿಯುಳ್ಳವರು. ಜನರಿಗೂ ಜ್ಞಾನ ಭಂಡಾರ ನೀಡಬೇಕೆಂಬ ಹಂಬಲದವರಾದ ಇವರು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಪುಸ್ತಕ ಪ್ರದರ್ಶನ ಏರ್ಪಡಿಸಿ ಶ್ಲಾಘನೆಗೆ ಒಳಗಾಗಿದ್ದಾರೆ.
ಯಾವ ಯಾವ ಪುಸ್ತಕಗಳು ಲಭ್ಯವಾಗಲಿವೆ?
ವಚನಕಾರ ಸರ್ವಜ್ಞನ ಜೀವನ ಚರಿತ್ರೆ, ಸರ್ವಜ್ಞ ಅವರ ವಚನಗಳು, ಸರ್ವಜ್ಞ ಸಂಪದ, ಸಮಾಜ ಸುಧಾರಣೆ ಸರ್ವಜ್ಞ, ಬಸವ ವಚನ ಸಂಗ್ರಹ, ಸರ್ವಜ್ಞ ಕವಿ, ಸರ್ವಜ್ಞನ ಸಮಾಜ ದರ್ಶನ ಹಾಗೂ ಸಾಹಿತ್ಯ ಸತ್ವ, ಸರ್ವಜ್ಞ ವಚನಾಮೃತ, ಸರ್ವರ ಸರ್ವಜ್ಞ, ಸರ್ವಜ್ಞ ವಚನಗಳನ್ನು ತಮಿಳಿಗೆ ಅನುವಾದ ಮಾಡಿರುವ ಪುಸ್ತಕಗಳು, ಸರ್ವಜ್ಞನ ದೃಷ್ಠಿಯಲ್ಲಿ ಹೆಣ್ಣು ಎಂಬ ಪುಸ್ತಕಗಳು ಸೇರಿದಂತೆ ವಿವಿಧ ಮಾದರಿಯಲ್ಲಿ ಅನೇಕ ಲೇಖಕರು ಬರೆದಿರುವ ನೂರಾರು ಪುಸ್ತಕಗಳು ಪ್ರದರ್ಶನದಲ್ಲಿವೆ.[ಭಗವದ್ಗೀತೆಯಲ್ಲಿನ ತಾರತಮ್ಯದ ರೋಗದ ಗಡ್ಡೆ ಬಿಸಾಕಬೇಕಿದೆ: ದೇವನೂರು]

ಸರ್ವಜ್ಞನ ವಚನದ ಬಗ್ಗೆ ತಿಳಿಯದವರೇ ವಿರಳ. ಆದರೆ ಸರ್ವಜ್ಞ ಯಾರು ಆತನ ಹುಟ್ಟೂರು, ಇನ್ನಿತರೆ ವಿಷಯದ ಬಗ್ಗೆ ಗೊಂದಲವಿದೆ. ಸರ್ವಜ್ಞರ ಕುರಿತಂತೆ ಅನೇಕ ಕೃತಿಗಳು ಹೊರಬಂದಿದ್ದು, ಆ ಬಗ್ಗೆ ಸುಮಾರು 150ಕ್ಕೂ ಹೆಚ್ಚಿನ ಪುಸ್ತಕಗಳು ಪ್ರದರ್ಶನದಲ್ಲಿಡಲಾಗಿದೆ.
-
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು












Click it and Unblock the Notifications