ಆರೋಗ್ಯ ತೀವ್ರ ಹದಗೆಟ್ಟಿದ್ದರೂ ಸದನಕ್ಕೆ ಹಾಜರಾಗಿದ್ದ ಅನಂತ್ಕುಮಾರ್
ನವದೆಹಲಿ, ನವೆಂಬರ್ 12: ಅನಂತ್ ಕುಮಾರ್ ಅವರ ಆರೋಗ್ಯ ಹದಗೆಟ್ಟಿರುವುದು ಕೆಲವು ತಿಂಗಳ ಹಿಂದೆಯೇ ಅವರಿಗೆ ಗೊತ್ತಾಗಿತ್ತು. ಆದರೆ ಅವರು ಪಕ್ಷದ ಕೆಲವು ಕೆಲಸಗಳನ್ನು ಮುಗಿಸಿಯೇ ಚಿಕಿತ್ಸೆಗೆ ತೆರಳುವುದಾಗಿ ಹಠ ಹಿಡಿದಿದ್ದರು.
ಟಿಡಿಪಿ ಪಕ್ಷವು ಆಡಳಿತಾರೋಢ ಬಿಜೆಪಿ ಪಕ್ಷದ ಮೇಲೆ ಅವಿಶ್ವಾಸ ಗೊತ್ತುವಳಿ ಮಂಡಿಸಿತ್ತು. ಆ ಸಮಯಕ್ಕಾಗಲೆ ಅನಂತ್ ಕುಮಾರ್ ಅವರಿಗೆ ಕ್ಯಾನ್ಸರ್ ಇರುವುದು ಗೊತ್ತಾಗಿತ್ತು, ಮತ್ತು ಅವರು ಲಂಡನ್ಗೆ ತೆರಳಬೇಕಾಗಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ.
ಸಂಸದೀಯ ವ್ಯವಹಾರಗಳ ಸಚಿವರೂ ಆಗಿದ್ದ ಅನಂತ್ಕುಮಾರ್ ಅವರು, ಅವಿಶ್ವಾಸ ನಿರ್ಣಯದಂತಹಾ ಪ್ರಮುಖ ಚರ್ಚೆ ಸಂಸತ್ನಲ್ಲಿ ಆಗಬೇಕಾದರೆ ಎರಡೂ ಸದನದ ವ್ಯವಹಾರವನ್ನು ಗಮನಿಸಬೇಕಾದ, ಸದನ ದಾರಿ ತಪ್ಪದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಇರುವ ತಾನು ಸಂಸತ್ತು ಬಿಟ್ಟು ಹೋಗಬಾರದೆಂದು ಲಂಡನ್ ಭೇಟಿಯನ್ನು ಮುಂದೂಡಿದ್ದರು.

ಮೋದಿ ಸಹ ಚಿಕಿತ್ಸೆ ಪಡೆಯಲು ಹೇಳಿದ್ದರು
ಆ ಹೊತ್ತಿಗಾಗಲೇ ನರೇಂದ್ರ ಮೊದಿ, ರಾಜನಾಥ ಸಿಂಗ್, ಅಮಿತ್ ಶಾ ಸೇರಿ ಹಲವು ಮುಖಂಡರಿಗೆ ಅನಂತ್ಕುಮಾರ್ ಅವರ ಆರೋಗ್ಯ ಸ್ಥಿತಿಯ ಬಗ್ಗೆ ತಿಳಿದಿತ್ತು ಅವರೂ ಸಹ ಅನಂತ್ ಅವರಿಗೆ ಲಂಡನ್ಗೆ ತೆರಳುವಂತೆ ಸಲಹೆ ನೀಡಿದ್ದರು ಆದರೆ ಅನಂತ್ ಹೋಗಿರಲಿಲ್ಲ.

ಅನಾರೋಗ್ಯದ ಮಧ್ಯೆ ಸರ್ಕಾರ ಪರ ಮಾತನಾಡಿದ್ದರು
ಅವಿಶ್ವಾಸ ಗೊತ್ತುವಳಿಯನ್ನು ಮೋದಿ ಅವರ ಸರ್ಕಾರ ಗೆದ್ದಿತು. ಅಂದು ಹಲವು ಬಾರಿ ಅನಂತ್ಕುಮಾರ್ ಅವರು ಸದಸನಕ್ಕೆ ಸರಿ-ತಪ್ಪುಗಳ ಪಾಠ ಮಾಡಿದರು. ಅವರೂ ಸಹ ಅವಿಶ್ವಾಸ ನಿರ್ಣಯದ ವಿರೋಧವಾಗಿ ಮಾತನಾಡಿದರು. ಅದರ ನಂತರವೇ ಅವರು ಲಂಡನ್ಗೆ ತೆರಳಿ ಆಸ್ಪತ್ರೆಗೆ ದಾಖಲಾದರು.

ಲಂಡನ್ನಲ್ಲಿ ಕೆಲ ಕಾಲ ಚಿಕಿತ್ಸೆ ಪಡೆದರು
ಲಂಡನ್ನಲ್ಲಿ ಚಿಕಿತ್ಸೆ ಪಡೆದು ಬೆಂಗಳೂರಿಗೆ ಅನಂತ್ಕುಮಾರ್ ವಾಪಸ್ಸಾದರು, ಆದರೆ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣಲಿಲ್ಲ, ಕೊನೆಗೆ ಇಂದೆ ಬೆಳಗಿನ ಜಾವ 3 ಗಂಟೆಗೆ ಅನಂತ್ಕುಮಾರ್ ಅವರು ಇಹಲೋಕ ತ್ಯಜಿಸಿದರು.

ಅನಾರೋಗ್ಯದ ಬಗ್ಗೆ ಹೇಳಿರಲಿಲ್ಲ
ಅವರಿಗೆ ಅನಾರೋಗ್ಯ ಇದ್ದ ವಿಚಾರವನ್ನು ಬಹು ಸಮಯ ಅವರು ಆಪ್ತವಲಯದವರಿಗೆ ಹೇಳಿರಲಿಲ್ಲವಂತೆ ಅನಂತ್, ಅನಾರೋಗ್ಯದ ವಿಷಯ ಗೊತ್ತಾದರೆ ತನ್ನ ಬಗ್ಗೆ ಪ್ರೀತಿ ಇರಿಸಿಕೊಂಡವರಿಗೆ ಬೇಸರವಾಗುತ್ತದೆ ಎಂಬ ಕಾರಣದಿಂದ ಅನಾರೋಗ್ಯದ ವಿಷಯವನ್ನು ಅವರು ಮುಚ್ಚಿಟ್ಟಿದ್ದರು ಎಂಬ ಮಾತುಗಳು ಕೇಳಿಬರುತ್ತಿವೆ.
-
LPG ಕೊರತೆ ಎಫೆಕ್ಟ್: ಬೆಂಗಳೂರಿನ ಪಿಜಿಗಳಲ್ಲಿ ಇನ್ಮುಂದೆ ಸಿಗಲ್ಲ ದೋಸೆ, ಚಪಾತಿ -
Bengaluru: SSLC ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಬಿಎಂಟಿಸಿಯಿಂದ ಉಚಿತ ಪ್ರಯಾಣ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ?












Click it and Unblock the Notifications