ಕಲ್ಯಾಣ ಕರ್ನಾಟಕದಲ್ಲಿ ಅಮಿತ್ ಶಾ ಕಲರವ
ಬೀದರ್, ಸೆ.17: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡ ಮೇಲೆ ಪ್ರಥಮ ಬಾರಿಗೆ ಅಮಿತ್ ಶಾ ಅವರು ಕರ್ನಾಟಕ್ಕೆ ಬುಧವಾರ ಭೇಟಿ ನೀಡಿದ್ದಾರೆ. ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಗೋರಟಾ ಗ್ರಾಮದಲ್ಲಿ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಹೈದರಾಬಾದ್ ಕರ್ನಾಟಕ ವಿಮೋಚನೆಗೆ ಅಂದಿನ ಕೇಂದ್ರ ಗೃಹಸಚಿವ ಸರ್ದಾರ್ ವಲ್ಲಭಬಾಯಿ ಪಟೇಲರು ಕಾರಣರಾಗಿದ್ದರು. ಈ ಸ್ಮರಣಾರ್ಥ ಪಟೇಲರ ಪುತ್ಥಳಿಯನ್ನು ಗೋರಟಾ ಗ್ರಾಮದಲ್ಲಿ ಸ್ಥಾಪಿಸಲಾಗುತ್ತಿದೆ. ಬಿಜೆಪಿ ಯುವ ಮೋರ್ಚಾ ಕೈಗೊಂಡಿರುವ ಸರ್ದಾರ್ ವಲ್ಲಭಭಾಯ್ ಪಟೇಲ್ ಪ್ರತಿಮೆ ನಿರ್ಮಾಣಕ್ಕೆ ಅಮಿತ್ ಶಾ ಬುಧವಾರ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ಈ
ಕಾರ್ಯಕ್ರಮದಲ್ಲಿಭಾಗವಹಿಸುವ
ಸುಮಾರು
50
ಸಾವಿರಕ್ಕೂ
ಅಧಿಕ
ಕಾರ್ಯಕರ್ತರಿಗೆ
ಬಸವಕಲ್ಯಾಣ
ಮತ್ತು
ಗೋರಟಾ
ಗ್ರಾಮದ
ಹೊರವಲಯದಲ್ಲಿ
ಊಟ
ಮತ್ತು
ವಸತಿಯ
ವ್ಯವಸ್ಥೆ
ಮಾಡಲಾಗಿದೆ.
ಅಮಿತ್
ಶಾ
ಆಗಮನದ
ಹಿನ್ನೆಲೆಯಲ್ಲಿ
ಬಿಗಿ
ಬಂದೋಬಸ್ತ್
ಮಾಡಲಾಗಿದೆ.
ವರ್ಷ ಕಳೆಯುವುದರೊಳಗೆ ಸರ್ದಾರ್ ಸರ್ದಾರ್ ವಲ್ಲಭಬಾಯಿ ಪಟೇಲರ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಬಿಜೆಪಿ ಮುಖಂಡ ಬಿ.ಎಲ್ ಸಂತೋಷ್ ಆಶಯ ವ್ಯಕ್ತಪಡಿಸಿದ್ದಾರೆ.
1948, ಮೇ5ರಂದು ಹೈದರಾಬಾದಿನ ನಿಜಾಮರ ಅನುಯಾಯಿಗಳಾದ ರಜಕಾರರು ಈ ಭಾಗದ ಜನರ ಮಾರಣಹೋಮ ಮಾಡಿದ್ದರು. ಅಂದು ಮೃತರಾದವರ ಸ್ಮರಣಾರ್ಥ ಸ್ಮಾರಕ ನಿರ್ಮಾಣಕ್ಕೆ ಕಲ್ಯಾಣ ಕರ್ನಾಟಕ ಭಾಗದ ಜನರು ಮುಂದಾಗಿದ್ದಾರೆ.