ಬೆಂಗಳೂರಿಗೆ ಬಂದ ಅಂಬರೀಶ್, ಮುಂದಿನ ನಡೆ ಏನು?
ಬೆಂಗಳೂರು, ಜುಲೈ 09 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಮುನಿಸಿಕೊಂಡಿರುವ ವಸತಿ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಶ್ ಅಧಿವೇಶನ ಮುಗಿಯುವ ಮೊದಲೇ ಬೆಂಗಳೂರಿನಗೆ ವಾಪಸ್ ಆಗಿದ್ದಾರೆ. ಸಚಿವ ಸ್ಥಾನಕ್ಕೆ ಅವರು ರಾಜೀನಾಮೆ ನೀಡಬಹುದು ಎಂಬ ಸುದ್ದಿ ಹಬ್ಬಿದೆ.
ಬುಧವಾರ
ಸಂಜೆ
ಬೆಳಗಾವಿಯಿಂದ
ಹೊರಟ
ಅಂಬರೀಶ್
ಅವರು
ರಾತ್ರಿ
12.30ಕ್ಕೆ
ಬೆಂಗಳೂರಿನ
ಜೆ.ಪಿ.ನಗರದಲ್ಲಿರುವ
ತಮ್ಮ
ನಿವಾಸಕ್ಕೆ
ಆಗಮಿಸಿದ್ದಾರೆ.
ಇಂದು
ಮಧ್ಯಾಹ್ನ
ಅವರು
ಆದಿಚುಂಚನಗಿರಿ
ಮಠದ
ಶ್ರೀ
ನಿರ್ಮಲಾನಂದನಾಥ
ಸ್ವಾಮೀಜಿ
ಅವರನ್ನು
ಭೇಟಿಯಾಗಲಿದ್ದಾರೆ.
[ಅಂಬರೀಶ್
ಮುಖ್ಯಮಂತ್ರಿಗಳಿಗೆ
ಬರೆದ
ಪತ್ರದಲ್ಲೇನಿದೆ]
ಸ್ವಾಮೀಜಿಗಳನ್ನು ಭೇಟಿಯಾದ ಬಳಿಕ ಅಂಬರೀಶ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಕುರಿತು ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ತಿಳಿದುಬಂದಿದೆ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಅಂಬರೀಶ್ ಅವರು ಈಗಾಗಲೇ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ, ಆದರೆ, ಅಂತಿಮ ತೀರ್ಮಾನ ಕೈಗೊಂಡಿಲ್ಲ. [ನಮಗೂ ಸ್ವಲ್ಪ ರಾಜಕೀಯ ಗೊತ್ತಿದೆ : ಅಂಬರೀಶ್]
ಮುಖ್ಯಮಂತ್ರಿಗಳಿಂದ ಕಡೆಗಣನೆ : ಮಂಡ್ಯ ಜಿಲ್ಲಾ ಕಾಂಗ್ರೆಸ್ ರಾಜಕೀಯ, ಪ್ರಮುಖ ನೇಮಕದ ವಿಚಾರಗಳಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಆಕ್ಷೇಪವ್ಯಕ್ತಪಡಿಸಿದ್ದ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಶ್ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಅಸಮಾಧಾನ ಹೊರಹಾಕಿದ್ದರು.
ಹಿಂದೆಯೂ ಅಸಮಾಧಾನ ಹೊರಹಾಕಿದ್ದರು : ನಿಗಮ-ಮಂಡಳಿ ನೇಮಕಾತಿ ಪಟ್ಟಿ ಬಿಡುಗಡೆ ಆಗುತ್ತಿದ್ದಂತೆ ಕಾಂಗ್ರೆಸ್ನಲ್ಲಿ ಅಸಮಾಧಾನ ಸ್ಫೋಟಗೊಂಡಿತ್ತು. ನಿಗಮ-ಮಂಡಳಿ ನೇಮಕಾತಿ ವಿಚಾರದಲ್ಲಿ ತಮಗೆ ಹಿನ್ನಡೆ ಉಂಟಾಗಿದೆ ಎಂದು ಸಚಿವ ಅಂಬರೀಶ್ ಅಸಮಾಧಾನ ವ್ಯಕ್ತಪಡಿಸಿದ್ದರು.
ತಮ್ಮ ಬೆಂಬಲಿಗರಿಗೆ ಸ್ಥಾನ ನೀಡದ ಬಗ್ಗೆ ಮಾತನಾಡಿದ್ದ ವಸತಿ ಸಚಿವ ಅಂಬರೀಶ್, 'ಮಂಡ್ಯದಲ್ಲಿ ರಾಜಕೀಯ ಹೇಗಿದೆ ಎಂಬುದು ನಮಗೆ ಗೊತ್ತಿದೆ. ಪ್ರಾಮಾಣಿಕರಿಗೆ ಅವಕಾಶ ನೀಡಿ' ಎಂದು ಮುಖ್ಯಮಂತ್ರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ನಂತರ ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಗೂ ಗೈರು ಹಾಜರಾಗಿದ್ದರು.