ರಾಜ್ಯದಲ್ಲಿ ಮದ್ಯ ಮಾರಾಟ ; ಲೀಟರುಗಳ ಲೆಕ್ಕದಲ್ಲಿ
ಬೆಂಗಳೂರು, ಜೂ. 26 : ಕಳೆದ ಆರ್ಥಿಕ ವರ್ಷದಲ್ಲಿ (13-14) ಕರ್ನಾಟಕ ಪಾನೀಯ ನಿಗಮವು 6,699 ಲಕ್ಷ ಲೀಟರ್ ಸ್ವದೇಶಿ ಮದ್ಯ ಮತ್ತು 9 ಲಕ್ಷ ಲೀಟರ್ ವಿದೇಶಿ ಮದ್ಯವನ್ನು ಮಾರಾಟ ಮಾಡಿದೆ ಎಂದು ಯಮಕನಮರಡಿ ಶಾಸಕ, ಅಬಕಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.
ಬಸವಕಲ್ಯಾಣದ ಜೆಡಿಎಸ್ ಶಾಸಕ ಮಲ್ಲಿಕಾರ್ಜುನ ಖೂಬಾ ಅವರ ಪ್ರಶ್ನೆಗೆ ನಿನ್ನೆ ಅಂದರೆ ಬುಧವಾರ ಲಿಖಿತ ಉತ್ತರ ನೀಡಿದ ಸಚಿವರು, 'ಕಳೆದ ವರ್ಷ ಪಾನೀಯ ನಿಗಮಕ್ಕೆ 6,777 ಲಕ್ಷ ಲೀ. ಸ್ವದೇಶಿ ಮದ್ಯ ಮತ್ತು 9 ಲಕ್ಷ ವಿದೇಶಿ ಮದ್ಯ ಸರಬರಾಜು ಆಗಿತ್ತು ಎಂದರು.
ಈ ಪೈಕಿ 6,699 ಲಕ್ಷ ಲೀಟರ್ ಸ್ವದೇಶಿ ಮದ್ಯ ಮತ್ತು 9 ಲಕ್ಷ ಲೀಟರ್ ವಿದೇಶಿ ಮಾರಾಟವಾಗಿದ್ದು ಸರಕಾರಕ್ಕೆ ಒಟ್ಟು 12,072.01 ಕೋಟಿ ರೂಪಾಯಿ ವರಮಾನ ಬಂದಿದೆ' ಎಂದು ಸಚಿವರು ಅಂಕಿ ಅಂಶ ನೀಡಿದರು.

ಇದೇ ಅವಧಿಯಲ್ಲಿ ಕಲಬೆರಕೆ ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ 11 ಪ್ರಕರಣಗಳು ದಾಖಲಾಗಿದ್ದವು. ಇಲಾಖಾ ಮಟ್ಟದಲ್ಲಿ ದಂಡ ವಿಧಿಸಿ ಆರು ಪ್ರಕರಣ ಇತ್ಯರ್ಥಪಡಿಸಲಾಗಿದೆ. ಐದು ಪ್ರಕರಣಗಳು ನ್ಯಾಯಾಲಯಗಳಲ್ಲಿ ವಿಚಾರಣೆ ಹಂತದಲ್ಲಿವೆ ಎಂದು ಸತೀಶ್ ಜಾರಕಿಹೊಳಿ ಸದನಕ್ಕೆ ಮಾಹಿತಿ ನೀಡಿದರು.
ಮದ್ಯ ಸರಬರಾಜು ಮಾಡುವ ಹೊಣೆಯನ್ನು ಸರಕಾರವೇ ಹೊತ್ತುಕೊಂಡಿದೆ. ಅದಕ್ಕಾಗಿ ಪಾನೀಯ ನಿಗಮವನ್ನೂ ಸ್ಥಾಪಿಸಿದೆ. ರಾಜ್ಯದ ನಾನಾ ಭಾಗಗಳಲ್ಲಿರುವ ಡಿಪೊಗಳ ಮೂಲಕ ಮದ್ಯ ಪೂರೈಕೆ ವ್ಯವಸ್ಥಿತವಾಗಿ ಆಗುತ್ತದೆ.
ಕೊನೆ ಗುಟುಕು : ರಾಜ್ಯದಲ್ಲಿ ನಿಧನಿಧಾನವಾಗಿ ಬರಗಾಲ ಆವರಿಸಿಕೊಳ್ಳುತ್ತಿದೆ. ಯಾರನ್ನೂ ನಂಬುವ ಕಾಲ ಇದಲ್ಲ, ಈಚೀಚೆಗಂತೂ ಮುಂಗಾರು ಮಳೆಯನ್ನೂ ನಂಬುವ ಹಾಗಿಲ್ಲ. ಕುಡಿಯುವ ನೀರಿಗೂ ತತ್ವಾರ. ಆದರೆ, ಬೀರು, ಬ್ರಾಂಡಿ, ವಿಸ್ಕಿ, ರಮ್ಮು, ವೋಡ್ಕ, ವೈನು ಮುಂತಾದುವಕ್ಕೆ ಬರಗಾಲ ಇಲ್ಲ. ಏನೋ ಅಂತೂ ದ್ರವ ಪೂರೈಕೆಗೆ ಹಾಗೂಹೀಗೂ ಕೊರತೆಯಿಲ್ಲ ಎನ್ನಬಹುದು.
-
ಮಾರ್ಚ್ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ನಟಿ ನೋರಾ ಫತೇಹಿ ವೃತ್ತಿಜೀವನಕ್ಕೆ ಕುತ್ತು ತಂದ 'ಸೆರಗ ಸರ್ಸೆ' ವಿವಾದ: ಗಡಿಪಾರು ಮಾಡುವಂತೆ ಗೃಹ ಸಚಿವಾಲಯಕ್ಕೆ ದೂರು -
Bengaluru: ಬಿಡಿಎಗೆ 50ರ ಸಂಭ್ರಮ; ಹೊಸ ಲೋಗೋ, ಟ್ಯಾಗ್ಲೈನ್ ವಿನ್ಯಾಸ ಮಾಡಿ 1 ಲಕ್ಷ ರೂ. ಬಹುಮಾನ ಗೆಲ್ಲಿ -
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು










Click it and Unblock the Notifications