ಸೂರ್ಯ ಘರ್ ಉಚಿತ ವಿದ್ಯುತ್ ಮೇಲ್ಛಾವಣಿ ಯೋಜನೆ: ಬೆಂಗಳೂರಿನಲ್ಲಿ ಹೆಚ್ಚಾಯ್ತು ಬೇಡಿಕೆ
ಬೆಂಗಳೂರು, ಮಾರ್ಚ್ 06: ಕೇಂದ್ರ ಸರ್ಕಾರ ಸೂರ್ಯ ಘರ್ ಮುಫ್ಟ್ ಬಿಜ್ಲಿ ಯೋಜನೆ ಘೋಷಣೆಯ ಹೆಚ್ಚಿನ ಸಬ್ಸಿಡಿ ನಂತರ, ಸೌರ ಮೇಲ್ಛಾವಣಿ ಫಲಕಗಳಿಗೆ ಸಿಲಿಕಾನ್ ಸಿಟಿಯಲ್ಲಿ ಬೇಡಿಕೆ ಹೆಚ್ಚಿದೆ. ಫೆಬ್ರವರಿ 13 ರಿಂದ ಈ ಯೋಜನೆ ಅಡಿಯಲ್ಲಿ 1,500 ಅರ್ಜಿಗಳು ಬಂದಿವೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ಅಧಿಕಾರಿಗಳು ಹೇಳಿದ್ದಾರೆ.
ಕೇಂದ್ರ ಸರ್ಕಾರವು ಜನವರಿ 2 ರಂದು ಹೊಸ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ (Surya Ghar Muft Bijli Yojana) ಯನ್ನು ಘೋಷಿಸಿದೆ. ಫೆಬ್ರವರಿ 13 ರಿಂದ ಈ ಯೋಜನೆ ಅಡಿಯಲ್ಲಿ ಸರ್ಕಾರಿ ಪೋರ್ಟಲ್ನಲ್ಲಿ ಅರ್ಜಿಗಳನ್ನು ಹಾಕಬಹುದು. ಉತ್ತರ ಕರ್ನಾಟಕ ಭಾಗದಲ್ಲಿ ಅಂಚೆ ಇಲಾಖೆ ಸಿಬ್ಬಂದಿ ಮನೆ ಮನೆಗೆ ತೆರಳಿ ಯೋಜನೆಗೆ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ.

"ಹೆಚ್ಚು ಸಬ್ಸಿಡಿಗಳು ಲಭ್ಯವಿರುವುದರಿಂದ, ಹೆಚ್ಚಿನ ಜನರು ತಮ್ಮ ಮನೆಯ ಮೇಲೆ ಸೌರ ಮೇಲ್ಛಾವಣಿ ಪ್ಯಾನೆಲ್ಗಳನ್ನು ಹಾಕಿಕೊಳ್ಳಲು ಬಯಸಿದ್ದಾರೆ. ಸೋಲಾರ್ ಎನರ್ಜಿ ಬಳಸುವುದರಿಂದ ವಿದ್ಯುತ್ ಉಳಿತಾಯವಾಗಲಿದೆ. ಫೆಬ್ರವರಿ 13 ರಂದು ಪೋರ್ಟಲ್ಗಳನ್ನು ತೆರೆದಾಗಿನಿಂದ, ನಾವು ಸೋಲಾರ್ ರೂಫ್ ಟಾಪ್ ಫೋಟೊವೋಲ್ಟಾಯಿಕ್ (SRTPV) ಗಾಗಿ ಅಪ್ಲಿಕೇಶನ್ಗಳಲ್ಲಿ ಹೆಚ್ಚಳ ಕಾಣುತ್ತಿದ್ದೇವೆ" ಎಂದು ಬೆಸ್ಕಾಂ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ಬೆಂಗಳೂರು ಮಿರರ್ ಉಲ್ಲೇಖಿಸಿದೆ.
ಈ ಯೋಜನೆಯಡಿಯಲ್ಲಿ, 1-2 ಕಿಲೋವ್ಯಾಟ್ಗೆ, ಕೇಂದ್ರ ಸರ್ಕಾರವು ವಸತಿ ಕುಟುಂಬಗಳಿಗೆ 30,000 ರಿಂದ 60,000 ರೂ.ಗಳ ಸಬ್ಸಿಡಿ ನೀಡುತ್ತದೆ. 2-3 ಕಿಲೋವ್ಯಾಟ್ಗೆ ಅರ್ಜಿದಾರರು ರೂ 60,000 ರಿಂದ ರೂ 78,000 ವರೆಗೆ ಸಬ್ಸಿಡಿ ಪಡೆಯುತ್ತಾರೆ ಮತ್ತು 3 ಕಿಲೋವ್ಯಾಟ್ಗಿಂತ ಹೆಚ್ಚಿನವರಿಗೆ 78,000ಕ್ಕಿಂತ ಮೇಲೆ ಸಬ್ಸಿಡಿ ಇರುತ್ತದೆ.

ಬೆಸ್ಕಾಂ ಅಂದಾಜಿನ ಪ್ರಕಾರ, ಬಳಕೆದಾರರಿಗೆ ಸರಾಸರಿ ಮಾಸಿಕ 0-150 ಯೂನಿಟ್ಗಳ ವಿದ್ಯುತ್ ಬಳಕೆಯನ್ನು ಹೊಂದಿರುವ ಮನೆಗಳಿಗೆ 1-2 ಕಿಲೋವ್ಯಾಟ್ಗೆ ಸೌರ ಸಾಮರ್ಥ್ಯ, 150-300 ಯೂನಿಟ್ಗಳಿಗೆ 2- 3 ಕಿಲೋವ್ಯಾಟ್ಗೆ ಸಾಮರ್ಥ್ಯ ಮತ್ತು 300 ಯೂನಿಟ್ಗಳಿಗಿಂತ ಹೆಚ್ಚಿನ 3 ಕಿಲೋವ್ಯಾಟ್ಗೆ ಸಾಮರ್ಥ್ಯದ ಅಗತ್ಯವಿದೆ.
ಇನ್ನು, ಈ ಸೋಲಾರ್ ಪ್ಯಾನೆಲ್ಗಳನ್ನು ಹಾಕಿಸಿಕೊಂಡು ಹೆಚ್ಚು ಶಕ್ತಿ ಉತ್ಪಾದನೆ ಆದರೆ, ಬೆಸ್ಕಾಂ ಸಹ ವಿದ್ಯುತ್ ಖರೀದಿ ಒಪ್ಪಂದದ ಅಡಿಯಲ್ಲಿ ಖರೀದಿಸುತ್ತದೆ. ಬೆಸ್ಕಾಂ ಅಧಿಕಾರಿಗಳ ಪ್ರಕಾರ, 1 KW ಸೋಲಾರ್ ಎನರ್ಜಿ ಪ್ಯಾನೆಲ್ ಹೊಂದಿಸಲು, ಬಳಕೆದಾರರಿಗೆ ಕನಿಷ್ಠ 10 ಚದರ ಮೀಟರ್ ಟೆರಸ್ ಬೇಕಾಗುತ್ತದೆ ಮತ್ತು ಇದು ದಿನಕ್ಕೆ 4 ಘಟಕಗಳನ್ನು ಉತ್ಪಾದಿಸುತ್ತದೆ.
ಹಿಂದಿನ ಯೋಜನೆಯಡಿಯಲ್ಲಿ, ಗ್ರಾಹಕರು 1 KW ನಿಂದ 3 KW ಗೆ ಪ್ರತಿ ಕಿಲೋವ್ಯಾಟ್ಗೆ ರೂ 1,80,000 ಮತ್ತು 3 ಕಿಲೋವ್ಯಾಟ್ಗೆ ಗಿಂತ ಹೆಚ್ಚಿನ ಕಿಲೋವ್ಯಾಟ್ಗೆ ಗೆ 10 ಕಿಲೋವ್ಯಾಟ್ಗೆ ವರೆಗೆ ಹೆಚ್ಚುವರಿ ರೂ 9,000 ಗೆ ಸಬ್ಸಿಡಿ ಪಡೆಯುತ್ತಿದ್ದರು. ನಿವಾಸಿಗಳ ಕಲ್ಯಾಣ ಸಂಘಗಳು (RWA) ಪ್ರತಿ ಕಿಲೋವ್ಯಾಟ್ಗೆ ರೂ 9,000 ದರದಲ್ಲಿ 500 ಕಿಲೋವ್ಯಾಟ್ಗೆ ವರೆಗೆ ಸಹಾಯಧನವನ್ನು ಪಡೆಯಬಹುದು.
ಎಸ್ಆರ್ಟಿಪಿವಿಗಳ ಅಳವಡಿಕೆಯನ್ನು ಸುಧಾರಿಸಲು ರಾಜ್ಯ ಸರ್ಕಾರವು ಇದನ್ನು ಗೃಹ ಜ್ಯೋತಿಯ ವ್ಯಾಪ್ತಿಯಡಿಯಲ್ಲಿ ತರಲು ಪರಿಗಣಿಸಬೇಕು ಎಂದು ಎಸ್ಆರ್ಟಿಪಿವಿಯ ಬಳಕೆದಾರರು ಆಗ್ರಹಿಸಿದ್ದಾರೆ. ಇದರಿಂದ ವಿದ್ಯುತ್ ಬಳಕೆ ಕಡಿಮೆಯಾಗಿ ಸೋಲಾರ್ ವಿದ್ಯುತ್ ಬಳಕೆ ಹೆಚ್ಚಾಗಲಿದೆ.
-
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ?












Click it and Unblock the Notifications