ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಡ್ಯದ ಗಾಯ ಮಾಯುವ ಮುನ್ನವೇ ಮತ್ತೆರಡು ಬಸ್ ದುರಂತ

|
Google Oneindia Kannada News

ಬೆಂಗಳೂರು, ನವೆಂಬರ್ 26: ಮಂಡ್ಯದಲ್ಲಿ ಡಕೋಟಾ ಬಸ್ ನಾಲೆಗೆ ಬಿದ್ದು ಮೂವತ್ತು ಮಂದಿ ಜಲಸಮಾಧಿಯಾಗಿದ್ದರು. ಈ ನೋವು ಮಾಸುವ ಮುನ್ನವೇ ರಾಜ್ಯದಲ್ಲಿ ಇನ್ನೆರಡು ಬಸ್ ದುರಂತ ಸಂಭವಿಸಿದೆ.

ಒಂದು ಕೊಡಗಿನ ಕುಶಾಲನಗರದ ಹಾರಂಗಿ ಬಳಿಯ ಹೇರೂರಿನಿಂದ ಅರಕಲಗೂಡು ಸಮೀಪದಲ್ಲಿ ಸಂಭವಿಸಿದ್ದು ಬಸ್ ಗದ್ದೆಗೆ ಉರುಳಿದೆ, ಬೀಗರ ಔತಣಕೂಟಕ್ಕೆ ಹೋಗುತ್ತಿದ್ದ ಬಸ್ ಇದಾಗಿದ್ದು, ಬಸ್‌ನಲ್ಲಿದ್ದ 50 ಜನರ ಪೈಕಿ ಒಬ್ಬರು ಮೃತಪಟ್ಟಿದ್ದಾರೆ. ಉಳಿದವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.

After Mandya tragedy, two more bus overturned in the state

ಮಂಡ್ಯ ಭೀಕರ ದುರಂತ: ದುರಂತದಲ್ಲಿ ಮೃತಪಟ್ಟ 25 ಜನರ ಹೆಸರುಗಳು ಮಂಡ್ಯ ಭೀಕರ ದುರಂತ: ದುರಂತದಲ್ಲಿ ಮೃತಪಟ್ಟ 25 ಜನರ ಹೆಸರುಗಳು

ಮತ್ತೊಂದೆಡೆ ಯಲ್ಲಾಪುರ-ಶಿರಸಿ ಮಾರ್ಗದಲ್ಲಿ ನದಿಗೆ ಬಸ್ ಬಿದ್ದು 8 ಮಂದಿಗೆ ಗಂಭೀರ ಗಾಯಗಳಾಗಿದ್ದು, 10 ಜನರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ. ಮಂಡ್ಯ ದುರಂತ ಸಂಭವಿಸಿ ಇನ್ನು ಎರಡು ದಿನವೂ ಕಳೆದಿಲ್ಲ ಅಷ್ಟರೊಳಗೆ ಎರಡು ಬಸ್ ದುರಂತಗಳು ಸಂಭವಿಸಿದ್ದು ಜನರನ್ನು ಆತಂಕಕ್ಕೀಡುಮಾಡಿದೆ. ಈಗಾಗಲೇ ಮಂಡ್ಯದಲ್ಲಿ ಮೃತಪಟ್ಟಿರುವ ಕುಟುಂಬಕ್ಕೆ ರಾಜ್ಯ ಸರ್ಕಾರ 1.5 ಕೋಟಿ ರೂ ಪರಿಹಾರ ಘೋಷಿಸಿದೆ.

English summary
Even before come out from the nightmare of Mandya bus tragedy, two more buses overturned near Kushal nagar of Kodagu and Yellapur of North Canara district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X