ಆದಾಯ ಸೋರಿಕೆ ತಡೆಗಾಗಿ ಜನವರಿಯಲ್ಲಿ ಆಕ್ಷನ್ ಪ್ಲ್ಯಾನ್- ಕೃಷ್ಣ ಬೈರೇಗೌಡ
ಬೆಳಗಾವಿ ಡಿಸೆಂಬರ್ 13: ಜನ ಸಾಮಾನ್ಯರ ನೋಂದಣಿ (ರಿಜಿಸ್ಟ್ರೇಷನ್) ರಹಿತ ವ್ಯವಹಾರಗಳಿಗೂ ಕಾನೂನಿನ ರಕ್ಷಣೆ ನೀಡುವ ಸಲುವಾಗಿ ಕರ್ನಾಟಕ ಸ್ಟಾಂಪ್ (ತಿದ್ದುಪಡಿ) ವಿಧೇಯಕ-2023 ಮಂಡಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಮಂಗಳವಾರ ವಿಧಾನ ಪರಿಷತ್ ನಲ್ಲಿ ಕರ್ನಾಟಕ ಸ್ಟಾಂಪ್ (ತಿದ್ದುಪಡಿ) ವಿಧೇಯಕ-2023 ಮಂಡಿಸಿ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, "ರಾಜ್ಯದಲ್ಲಿ ಕಳೆದ ಮೂರು ದಶಕಗಳಿಂದಲೂ ಸ್ಟಾಂಪ್ ಡ್ಯೂಟಿ ಪರಿಷ್ಕರಣೆಯಾಗಿಲ್ಲ. ಆದರೆ, ಅದೊಂದೇ ಕಾರಣಕ್ಕೆ ನಮ್ಮ ಸರ್ಕಾರ ಸ್ಟಾಂಪ್ ಡ್ಯೂಟಿ ಪರಿಷ್ಕರಣೆಗೆ ಮುಂದಾಗಿಲ್ಲ. ಬದಲಾಗಿ ಜನಸಾಮಾನ್ಯರ ಎಲ್ಲಾ ವ್ಯವಹಾರಗಳಿಗೂ ಕಾನೂನಿನ ಭದ್ರತೆ ಮತ್ತು ರಕ್ಷಣೆ ನೀಡುವ ಸಲುವಾಗಿಯೇ ಕರ್ನಾಟಕ ಸ್ಟಾಂಪ್ (ತಿದ್ದುಪಡಿ) ವಿಧೇಯಕ-2023 ಮಂಡಿಸಲಾಗಿದೆ" ಎಂದರು.

ಈ ಬಗ್ಗೆ ಸುದೀರ್ಘ ವಿವರಣೆ ನೀಡಿದ ಸಚಿವರು, "ಆಸ್ತಿ ನೋಂದಣಿ (ರಿಜಿಸ್ಟ್ರೇಷನ್) ಪ್ರಕ್ರಿಯೆಯಲ್ಲಿ ಎಲ್ಲರೂ ಸರ್ಕಾರಕ್ಕೆ ಶುಲ್ಕ ಪಾವತಿಸುತ್ತಾರೆ. ಇಂತಹ ಎಲ್ಲಾ ವ್ಯವಹಾರಗಳಿಗೆ ಕಾನೂನಿನ ರಕ್ಷಣೆ ಇದೆ. ಆದರೆ, ನೋಂದಣಿ ಹೊರತಾಗಿಯೂ ಜನ ಸಮಾನ್ಯರ ಅನೇಕ ವ್ಯವಹಾರಗಳಿಗೆ ಸ್ಟಾಂಪ್ ಅಗತ್ಯವಿದೆ. ಸಾಂಸ್ಥಿಕ ಬ್ಯಾಂಕ್ ವ್ಯವಹಾರ, ಸರ್ವೀಸ್ ಕಾಂಟ್ರಾಕ್ಟ್, ದೊಡ್ಡ ಕಂಪೆನಿಗಳು ಹಾಗೂ ಬ್ಯಾಂಕ್ ಗಳು ಸರ್ಕಾರದ ಜೊತೆಗೆ ನಡೆಸುವ ವಹಿವಾಟು, ಚಾರಿಟಬಲ್ ಟ್ರಸ್ಟ್, ಸೇಲ್ ಅಗ್ರಿಮೆಂಟ್, ಅಫಿಡವಿಟ್, ಎನ್ರೋಲ್ ಮೆಂಟ್ ಸೇರಿದಂತೆ ಎಲ್ಲದಕ್ಕೂ ನಮ್ಮಲ್ಲಿ ಸ್ಟಾಂಪ್ ಡ್ಯೂಟಿ ಇದೆ. ಆದರೆ, ಜನ ಪಾವತಿ ಮಾಡುತ್ತಿಲ್ಲ. ಹೀಗಾಗಿ ನಾಳೆ ಅವರಿಗೆ ಏನೇ ಸಮಸ್ಯೆಯಾದರೂ ಕಾನೂನಿನ ನೆರವು ಲಭ್ಯವಾಗುವುದಿಲ್ಲ.
ಇಷ್ಟೇ ಏಕೆ ಟೋಲ್ ಗೇಟ್ ನವರೂ ಸರ್ಕಾರಕ್ಕೆ ಸ್ಟಾಂಪ್ ಡ್ಯೂಟಿ ಕಟ್ಟಬೇಕು. ಆದರೆ, ಅವರೂ ಸಹ ಕಟ್ತಾ ಇಲ್ಲ. ಇದರಿಂದ ಸರ್ಕಾರಕ್ಕೆ ಹಣ ಸೋರಿಕೆಯೂ ಆಗುತ್ತಿದೆ. ದೊಡ್ಡ ದೊಡ್ಡ ಸಾಂಸ್ಥಿಕ ಸಂಸ್ಥೆಗಳೂ ಸಹ ಸ್ಟಾಂಪ್ ಡ್ಯೂಟಿ ಕಟ್ಟದಿರುವುದು ಸೋರಿಕೆಗೆ ಕಾರಣವಾಗಿದೆ. ಹೀಗಾಗಿ ಜನರ ವ್ಯವಹಾರಗಳಿಗೆ ಕಾನೂನಿನ ರಕ್ಷಣೆ ನೀಡುವ ಮತ್ತು ಸೋರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ ಸ್ಟಾಂಪ್ (ತಿದ್ದುಪಡಿ) ವಿಧೇಯಕ-2023 ಜಾರಿಗೆ ತರಲು ಸರ್ಕಾರ ಚಿಂತಿಸಿದೆ" ಎಂದರು.
ಸ್ಟಾಂಪ್ ಡ್ಯೂಟಿ ಪರಿಷ್ಕರಣೆ ಮಾನದಂಡದ ಬಗ್ಗೆಯೂ ವಿವರಣೆ ನೀಡಿದ ಸಚಿವ ಕೃಷ್ಣ ಬೈರೇಗೌಡ ಅವರು, "ರಾಜ್ಯದಲ್ಲಿ ಕಳೆದ ಮೂರು ದಶಕಗಳಿಂದ ಸ್ಟಾಂಪ್ ಡ್ಯೂಟಿ ಪರಿಷ್ಕರಣೆ ಮಾಡಲಾಗಿಲ್ಲ. ಅಫಿಡವಿಟ್ ಗೆ 2000 ದಲ್ಲಿ 20 ರೂ ಇತ್ತು. ಅದಾದ ಮೇಲೆ ಈ ದರವನ್ನು ಪರಿಷ್ಕರಿಸಿಲ್ಲ. ಅದೇ ರೀತಿ ಸೇಲ್ ಅಗ್ರಿಮೆಂಟ್ ಗೆ 1995ರಲ್ಲಿ 1000 ರೂ ಇತ್ತು. ಎನ್ರೋಲ್ಮೆಂಟ್ ಸರ್ಟಿಫಿಕೇಟ್ ಗೆ 2003ರಲ್ಲಿ 500 ರೂ. ಕ್ಯಾನ್ಸಲೇಷನ್ ಆಪ್ ಇನ್ಸ್ಟ್ರುಮೆಂಟ್ ಗೆ 2006 ರಲ್ಲಿ 100 ರೂ. ಲೆಟರ್ ಆಪ್ ಅಲಾಟ್ಮೆಂಟ್ ಗೆ 2003 ರಲ್ಲಿ 1 ರೂ. ಪಾರ್ಟಿಷನ್ ಗೆ 1999ರಲ್ಲಿ 250 ರೂ. ನಿಗದಿ ಮಾಡಲಾಗಿತ್ತು. ಆದರೆ, ಈ ಯಾವ ದರಗಳನ್ನೂ ಈವರೆವಿಗೂ ಪರಿಷ್ಕರಿಸಲಾಗಿಲ್ಲ.
ಹೀಗಾಗಿ ನೆರೆಯ ರಾಜ್ಯಗಳಾದ ತಮಿಳುನಾಡು, ಕೇರಳ, ತೆಲಂಗಾಣ, ಆಂಧ್ರಪ್ರದೇಶ, ಗೋವಾ ಹಾಗೂ ಮಹಾರಾಷ್ಟ್ರಗಳಲ್ಲಿ ಈ ಎಲ್ಲಾ ಸೇವೆಗಳಿಗೆ ಎಷ್ಟರ ಮಟ್ಟಿಗೆ ಸ್ಟಾಂಪ್ ಡ್ಯೂಟಿ ವಿಧಿಸಲಾಗುತ್ತಿದೆ? ಎಂಬ ಬಗ್ಗೆ ಅಧಿಕಾರಿಗಳ ಜೊತೆಗೆ ಕೂಲಂಕುಷವಾಗಿ ಚರ್ಚಿಸಿ ದರಗಳನ್ನು ಪರಿಷ್ಕರಿಸಲಾಗಿದೆ. ಅಲ್ಲದೆ, 55 ಆರ್ಟಿಕಲ್ 181 ಸಬ್ ಆರ್ಟಿಕಲ್ ಇದ್ದು, ಈ ಪೈಕಿ ಕೇವಲ 30 ಆರ್ಟಿಕಲ್ ಗಳ ದರಗಳನ್ನು ಮಾತ್ರ ಪರಿಷ್ಕರಿಸಲಾಗಿದೆ. ಸ್ಟಾಂಪ್ ಡ್ಯೂಟಿಯಿಂದ ರಾಜ್ಯ ಸರ್ಕಾರಕ್ಕೆ ವಾರ್ಷಿಕ 1,000 ಕೋಟಿ ರೂ. ಆದಾಯ ಲಭ್ಯವಾಗುತ್ತಿದ್ದು, ಈ ತಿದ್ದುಪಡಿ ವಿಧೇಯಕದಿಂದ ಶೇ.10 ರಷ್ಟು ಆದಾಯ ಹೆಚ್ಚುವ ಸಾಧ್ಯತೆ ಇದೆ. ಆದರೆ, ಇದರಲ್ಲಿ ಆದಾಯ ಸೋರಿಕೆಯನ್ನು ತಡೆದು ದೊಡ್ಡ ದೊಡ್ಡ ಸಾಂಸ್ಥಿಕ ಸಂಸ್ಥೆಗಳನ್ನೂ ಸಹ ಸ್ಟಾಂಪ್ ಡ್ಯೂಟಿ ಅಡಿಗೆ ತರಲು ಮುಂದಿನ ಜನವರಿಯಲ್ಲಿ ಹೊಸ ಆಕ್ಷನ್ ಪ್ಲ್ಯಾನ್ ಸಿದ್ದಪಡಿಸಲಾಗವುದು" ಎಂದು ಅವರು ತಿಳಿಸಿದರು.
-
CRPF Recruitment 2026: 9,000ಕ್ಕೂ ಹೆಚ್ಚು ಕಾನ್ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ; ಕನ್ನಡಿಗರಿಗೂ ಇದೆ ಮೀಸಲಾತಿ -
ರಾಜ್ಯದ 5000ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕಲುಷಿತ ನೀರು: ಗ್ಯಾರಂಟಿ ಗುಂಗಿನಲ್ಲಿರುವ ಕಾಂಗ್ರೆಸ್ ವಿರುದ್ಧ ಆರ್. ಅಶೋಕ್ ಕಿಡಿ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ?












Click it and Unblock the Notifications