ಆದಾಯ ಸೋರಿಕೆ ತಡೆಗಾಗಿ ಜನವರಿಯಲ್ಲಿ ಆಕ್ಷನ್ ಪ್ಲ್ಯಾನ್- ಕೃಷ್ಣ ಬೈರೇಗೌಡ
ಬೆಳಗಾವಿ ಡಿಸೆಂಬರ್ 13: ಜನ ಸಾಮಾನ್ಯರ ನೋಂದಣಿ (ರಿಜಿಸ್ಟ್ರೇಷನ್) ರಹಿತ ವ್ಯವಹಾರಗಳಿಗೂ ಕಾನೂನಿನ ರಕ್ಷಣೆ ನೀಡುವ ಸಲುವಾಗಿ ಕರ್ನಾಟಕ ಸ್ಟಾಂಪ್ (ತಿದ್ದುಪಡಿ) ವಿಧೇಯಕ-2023 ಮಂಡಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಮಂಗಳವಾರ ವಿಧಾನ ಪರಿಷತ್ ನಲ್ಲಿ ಕರ್ನಾಟಕ ಸ್ಟಾಂಪ್ (ತಿದ್ದುಪಡಿ) ವಿಧೇಯಕ-2023 ಮಂಡಿಸಿ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, "ರಾಜ್ಯದಲ್ಲಿ ಕಳೆದ ಮೂರು ದಶಕಗಳಿಂದಲೂ ಸ್ಟಾಂಪ್ ಡ್ಯೂಟಿ ಪರಿಷ್ಕರಣೆಯಾಗಿಲ್ಲ. ಆದರೆ, ಅದೊಂದೇ ಕಾರಣಕ್ಕೆ ನಮ್ಮ ಸರ್ಕಾರ ಸ್ಟಾಂಪ್ ಡ್ಯೂಟಿ ಪರಿಷ್ಕರಣೆಗೆ ಮುಂದಾಗಿಲ್ಲ. ಬದಲಾಗಿ ಜನಸಾಮಾನ್ಯರ ಎಲ್ಲಾ ವ್ಯವಹಾರಗಳಿಗೂ ಕಾನೂನಿನ ಭದ್ರತೆ ಮತ್ತು ರಕ್ಷಣೆ ನೀಡುವ ಸಲುವಾಗಿಯೇ ಕರ್ನಾಟಕ ಸ್ಟಾಂಪ್ (ತಿದ್ದುಪಡಿ) ವಿಧೇಯಕ-2023 ಮಂಡಿಸಲಾಗಿದೆ" ಎಂದರು.

ಈ ಬಗ್ಗೆ ಸುದೀರ್ಘ ವಿವರಣೆ ನೀಡಿದ ಸಚಿವರು, "ಆಸ್ತಿ ನೋಂದಣಿ (ರಿಜಿಸ್ಟ್ರೇಷನ್) ಪ್ರಕ್ರಿಯೆಯಲ್ಲಿ ಎಲ್ಲರೂ ಸರ್ಕಾರಕ್ಕೆ ಶುಲ್ಕ ಪಾವತಿಸುತ್ತಾರೆ. ಇಂತಹ ಎಲ್ಲಾ ವ್ಯವಹಾರಗಳಿಗೆ ಕಾನೂನಿನ ರಕ್ಷಣೆ ಇದೆ. ಆದರೆ, ನೋಂದಣಿ ಹೊರತಾಗಿಯೂ ಜನ ಸಮಾನ್ಯರ ಅನೇಕ ವ್ಯವಹಾರಗಳಿಗೆ ಸ್ಟಾಂಪ್ ಅಗತ್ಯವಿದೆ. ಸಾಂಸ್ಥಿಕ ಬ್ಯಾಂಕ್ ವ್ಯವಹಾರ, ಸರ್ವೀಸ್ ಕಾಂಟ್ರಾಕ್ಟ್, ದೊಡ್ಡ ಕಂಪೆನಿಗಳು ಹಾಗೂ ಬ್ಯಾಂಕ್ ಗಳು ಸರ್ಕಾರದ ಜೊತೆಗೆ ನಡೆಸುವ ವಹಿವಾಟು, ಚಾರಿಟಬಲ್ ಟ್ರಸ್ಟ್, ಸೇಲ್ ಅಗ್ರಿಮೆಂಟ್, ಅಫಿಡವಿಟ್, ಎನ್ರೋಲ್ ಮೆಂಟ್ ಸೇರಿದಂತೆ ಎಲ್ಲದಕ್ಕೂ ನಮ್ಮಲ್ಲಿ ಸ್ಟಾಂಪ್ ಡ್ಯೂಟಿ ಇದೆ. ಆದರೆ, ಜನ ಪಾವತಿ ಮಾಡುತ್ತಿಲ್ಲ. ಹೀಗಾಗಿ ನಾಳೆ ಅವರಿಗೆ ಏನೇ ಸಮಸ್ಯೆಯಾದರೂ ಕಾನೂನಿನ ನೆರವು ಲಭ್ಯವಾಗುವುದಿಲ್ಲ.
ಇಷ್ಟೇ ಏಕೆ ಟೋಲ್ ಗೇಟ್ ನವರೂ ಸರ್ಕಾರಕ್ಕೆ ಸ್ಟಾಂಪ್ ಡ್ಯೂಟಿ ಕಟ್ಟಬೇಕು. ಆದರೆ, ಅವರೂ ಸಹ ಕಟ್ತಾ ಇಲ್ಲ. ಇದರಿಂದ ಸರ್ಕಾರಕ್ಕೆ ಹಣ ಸೋರಿಕೆಯೂ ಆಗುತ್ತಿದೆ. ದೊಡ್ಡ ದೊಡ್ಡ ಸಾಂಸ್ಥಿಕ ಸಂಸ್ಥೆಗಳೂ ಸಹ ಸ್ಟಾಂಪ್ ಡ್ಯೂಟಿ ಕಟ್ಟದಿರುವುದು ಸೋರಿಕೆಗೆ ಕಾರಣವಾಗಿದೆ. ಹೀಗಾಗಿ ಜನರ ವ್ಯವಹಾರಗಳಿಗೆ ಕಾನೂನಿನ ರಕ್ಷಣೆ ನೀಡುವ ಮತ್ತು ಸೋರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ ಸ್ಟಾಂಪ್ (ತಿದ್ದುಪಡಿ) ವಿಧೇಯಕ-2023 ಜಾರಿಗೆ ತರಲು ಸರ್ಕಾರ ಚಿಂತಿಸಿದೆ" ಎಂದರು.
ಸ್ಟಾಂಪ್ ಡ್ಯೂಟಿ ಪರಿಷ್ಕರಣೆ ಮಾನದಂಡದ ಬಗ್ಗೆಯೂ ವಿವರಣೆ ನೀಡಿದ ಸಚಿವ ಕೃಷ್ಣ ಬೈರೇಗೌಡ ಅವರು, "ರಾಜ್ಯದಲ್ಲಿ ಕಳೆದ ಮೂರು ದಶಕಗಳಿಂದ ಸ್ಟಾಂಪ್ ಡ್ಯೂಟಿ ಪರಿಷ್ಕರಣೆ ಮಾಡಲಾಗಿಲ್ಲ. ಅಫಿಡವಿಟ್ ಗೆ 2000 ದಲ್ಲಿ 20 ರೂ ಇತ್ತು. ಅದಾದ ಮೇಲೆ ಈ ದರವನ್ನು ಪರಿಷ್ಕರಿಸಿಲ್ಲ. ಅದೇ ರೀತಿ ಸೇಲ್ ಅಗ್ರಿಮೆಂಟ್ ಗೆ 1995ರಲ್ಲಿ 1000 ರೂ ಇತ್ತು. ಎನ್ರೋಲ್ಮೆಂಟ್ ಸರ್ಟಿಫಿಕೇಟ್ ಗೆ 2003ರಲ್ಲಿ 500 ರೂ. ಕ್ಯಾನ್ಸಲೇಷನ್ ಆಪ್ ಇನ್ಸ್ಟ್ರುಮೆಂಟ್ ಗೆ 2006 ರಲ್ಲಿ 100 ರೂ. ಲೆಟರ್ ಆಪ್ ಅಲಾಟ್ಮೆಂಟ್ ಗೆ 2003 ರಲ್ಲಿ 1 ರೂ. ಪಾರ್ಟಿಷನ್ ಗೆ 1999ರಲ್ಲಿ 250 ರೂ. ನಿಗದಿ ಮಾಡಲಾಗಿತ್ತು. ಆದರೆ, ಈ ಯಾವ ದರಗಳನ್ನೂ ಈವರೆವಿಗೂ ಪರಿಷ್ಕರಿಸಲಾಗಿಲ್ಲ.
ಹೀಗಾಗಿ ನೆರೆಯ ರಾಜ್ಯಗಳಾದ ತಮಿಳುನಾಡು, ಕೇರಳ, ತೆಲಂಗಾಣ, ಆಂಧ್ರಪ್ರದೇಶ, ಗೋವಾ ಹಾಗೂ ಮಹಾರಾಷ್ಟ್ರಗಳಲ್ಲಿ ಈ ಎಲ್ಲಾ ಸೇವೆಗಳಿಗೆ ಎಷ್ಟರ ಮಟ್ಟಿಗೆ ಸ್ಟಾಂಪ್ ಡ್ಯೂಟಿ ವಿಧಿಸಲಾಗುತ್ತಿದೆ? ಎಂಬ ಬಗ್ಗೆ ಅಧಿಕಾರಿಗಳ ಜೊತೆಗೆ ಕೂಲಂಕುಷವಾಗಿ ಚರ್ಚಿಸಿ ದರಗಳನ್ನು ಪರಿಷ್ಕರಿಸಲಾಗಿದೆ. ಅಲ್ಲದೆ, 55 ಆರ್ಟಿಕಲ್ 181 ಸಬ್ ಆರ್ಟಿಕಲ್ ಇದ್ದು, ಈ ಪೈಕಿ ಕೇವಲ 30 ಆರ್ಟಿಕಲ್ ಗಳ ದರಗಳನ್ನು ಮಾತ್ರ ಪರಿಷ್ಕರಿಸಲಾಗಿದೆ. ಸ್ಟಾಂಪ್ ಡ್ಯೂಟಿಯಿಂದ ರಾಜ್ಯ ಸರ್ಕಾರಕ್ಕೆ ವಾರ್ಷಿಕ 1,000 ಕೋಟಿ ರೂ. ಆದಾಯ ಲಭ್ಯವಾಗುತ್ತಿದ್ದು, ಈ ತಿದ್ದುಪಡಿ ವಿಧೇಯಕದಿಂದ ಶೇ.10 ರಷ್ಟು ಆದಾಯ ಹೆಚ್ಚುವ ಸಾಧ್ಯತೆ ಇದೆ. ಆದರೆ, ಇದರಲ್ಲಿ ಆದಾಯ ಸೋರಿಕೆಯನ್ನು ತಡೆದು ದೊಡ್ಡ ದೊಡ್ಡ ಸಾಂಸ್ಥಿಕ ಸಂಸ್ಥೆಗಳನ್ನೂ ಸಹ ಸ್ಟಾಂಪ್ ಡ್ಯೂಟಿ ಅಡಿಗೆ ತರಲು ಮುಂದಿನ ಜನವರಿಯಲ್ಲಿ ಹೊಸ ಆಕ್ಷನ್ ಪ್ಲ್ಯಾನ್ ಸಿದ್ದಪಡಿಸಲಾಗವುದು" ಎಂದು ಅವರು ತಿಳಿಸಿದರು.
-
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ












Click it and Unblock the Notifications