ಪೊಲೀಸರ ಸಮಸ್ಯೆಗೆ ಕಿವಿಗೊಡಿ, ಸರ್ಕಾರಕ್ಕೆ ಆಪ್ ಸಲಹೆ
ಬೆಂಗಳೂರು, ಮೇ 31 : ವಾರಕ್ಕೊಂದು ರಜೆ, ಕೆಲಸಕ್ಕೆ ತಕ್ಕ ವೇತನ ಮುಂತಾದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಕರ್ನಾಟಕ ಪೊಲೀಸ್ ಮಹಾ ಸಂಘ ಜೂನ್ 4ರಂದು ರಾಜ್ಯಾದ್ಯಂತ ಪ್ರತಿಭಟನೆ ಮಾಡಲು ನಿರ್ಧರಿಸಿದೆ. ಈ ಸನ್ನಿವೇಶವನ್ನು ಎಚ್ಚರಿಕೆಯಿಂದ ನಿರ್ವಹಣೆ ಮಾಡುವಂತೆ ಆಮ್ ಆದ್ಮಿ ಪಕ್ಷ ಸರ್ಕಾರಕ್ಕೆ ಸಲಹೆ ನೀಡಿದೆ.
ಪಕ್ಷದ ರಾಜ್ಯ ಸಂಚಾಲಕರು ಮತ್ತು ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯರಾದ ಪೃಥ್ವಿ ರೆಡ್ಡಿ ಅವರು ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಸರಿಯಾಗಿ ವೇತನ ಸಿಗದ, ಬಳಲಿದ, ಅತೃಪ್ತ, ಪೋಲಿಸ್ ತಂಡ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಗೆ ಮಾರಕವಾಗಿದೆ ಎಂದು ಹೇಳಿದ್ದಾರೆ. [ಸಾಮೂಹಿಕ ರಜೆಗೆ 50 ಸಾವಿರ ಪೊಲೀಸರ ನಿರ್ಧಾರ]

ಇದುವರೆಗೆ ಆಡಳಿತಕ್ಕೆ ಬಂದ ಎಲ್ಲಾ ಸರ್ಕಾರಗಳು ಪೋಲಿಸರ ವ್ಯವಹಾರದಲ್ಲಿ ರಾಜಕೀಯ ಹಸ್ತಕ್ಷೇಪ ನಡೆಸಿ ಪೋಲಿಸರನ್ನು ಆತಂಕಕ್ಕೆ ಸಿಲುಕಿಸಿವೆ. ಇದರಿಂದ ಅವರು ನಿರ್ಭಯವಾಗಿ, ನಿಷ್ಪಕ್ಷತೆಯಿಂದ ತಮ್ಮ ತನಿಖೆ ನಡೆಸುವಲ್ಲಿ ವಿಫಲರಾಗಿದ್ದಾರೆ. ಇದಲ್ಲದೆ ಪೋಲಿಸ್ ಪಡೆಯನ್ನು ರಾಜಕೀಯ ಶಕ್ತಿಗಳು ತಮ್ಮ ಖಾಸಗಿ ಸೈನ್ಯದಂತೆಯೂ, ಪೇದೆಗಳನ್ನು ತಮ್ಮ ವೈಯುಕ್ತಿಕ ಜವಾನರಂತೆಯೂ ನಡೆಸಿಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. [ಪೊಲೀಸರ ಲಂಚಾವತಾರ ಬಿಚ್ಚಿಟ್ಟ ಶಾಕಿಂಗ್ ವರದಿ]
ಸಾಧಾರಣ ಪೋಲಿಸ್ ಸಿಬ್ಬಂದಿ ಸಮಾಜದ ಬಡ ಮತ್ತು ಗ್ರಾಮೀಣ ವರ್ಗದಿಂದ, ಕಷ್ಟಪಟ್ಟು ಅಲ್ಪ-ಸ್ವಲ್ಪ ವಿದ್ಯಾಭ್ಯಾಸ ಪಡೆದು ಬಂದಿರುತ್ತಾರೆ. ಆದರೆ, ಅವರಿಗೆ ಸಿಗುತ್ತಿರುವುದು ಕಡಿಮೆ ಸಂಬಳ, ಅನಿಯಮಿತ ದೀರ್ಘ ಕೆಲಸದ ಸಮಯ ಮತ್ತು ಮರ್ಯಾದೆ/ಸಭ್ಯತೆ ಇಲ್ಲದ ಕೆಲಸದ ವಾತಾವರಣವಾಗಿದೆ. [ಪುಟ್ಟ ಬಾಲಕನಿಗೆ ಪೊಲೀಸ್ ಅಧಿಕಾರಿಗಳ ಸೆಲ್ಯೂಟ್]
ಅಸಭ್ಯ ವಾತಾವರಣದ ಜೊತೆಗೆ ಪೋಲಿಸ್ ಸಿಬ್ಬಂದಿ ದಿನನಿತ್ಯ ತಮ್ಮ ಹಿರಿಯ ಅಧಿಕಾರಿಗಳ ದುರ್ನಡತೆ, ಹೀಯಾಳಿಕೆ ಮತ್ತು ಬೈಗುಳಗಳ ದಾಳಿಯನ್ನೂ ಅನುಭವಿಸಬೇಕಾಗುತ್ತದೆ. ಇವರಿಗೆ ತಮ್ಮ ಅಳಲನ್ನು ತೋಡಿಕೊಳ್ಳುವ, ಸಮಸ್ಯೆಯನ್ನು ಪರಿಹರಿಸಿಕೊಳ್ಳುವ ಯಾವುದೇ ಮಾರ್ಗಗಳು ಇರುವುದಿಲ್ಲ. ಪೋಲಿಸ್ ಸಿಬ್ಬಂದಿ ಬಹಳ ದಿನಗಳಿಂದ ಪ್ರತ್ಯೇಕ ವೇತನ ಆಯೋಗಕ್ಕೆ ಬೇಡಿಕೆ ನೀಡಿದ್ದರೂ ಯಾರೂ ಇದರ ಬಗ್ಗೆ ಗಮನ ಹರಿಸಿಲ್ಲ.
ಆಮ್ ಆದ್ಮಿ ಪಕ್ಷ ಪೋಲಿಸರ ನ್ಯಾಯಯುತ ಬೇಡಿಕೆಯನ್ನು ಬೆಂಬಲಿಸುತ್ತದೆ ಮತ್ತು ಸರ್ಕಾರ ಕೂಡಲೇ ಅವರ ತೊಂದರೆಗಳನ್ನು ವಿಚಾರಿಸಿಕೊಂಡು, ಅವರು ಮುಷ್ಕರ ಮಾಡುವುದನ್ನು ತಡೆಯಬೇಕೆಂದು ಮತ್ತು ಬಡ ಸಿಬ್ಬಂದಿಯ ತೊಂದರೆಗಳನ್ನು ಶೀಘ್ರವಾಗಿ ಪರಿಹರಿಸಲು ಬೇಕಾದ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸುತ್ತಿದೆ.
ಕೇಂದ್ರ 7ನೇ ವೇತನ ಆಯೋಗ ದೇಶದ ಯಾವುದೇ ಭಾಗದ ಸರ್ಕಾರಿ ನೌಕರನ ಕನಿಷ್ಟ ವೇತನ 18 ಸಾವಿರ ಇರಬೇಕೆಂದು ಶಿಫಾರಸು ಮಾಡಿರುವಾಗ ಕರ್ನಾಟಕದ ಪೋಲಿಸ್ ಪೇದೆಗೆ ಯಾಕೆ ಈ ಬೇಧ ಭಾವ? ಎಂದು ಪಕ್ಷ ಪ್ರಶ್ನಿಸಿದೆ.
ಪಕ್ಷದ ಆಗ್ರಹಗಳು
* ಬೇರೆ ರಾಜ್ಯದಲ್ಲಿ ಪೋಲಿಸರಿಗೆ ಸಿಗುತ್ತಿರುವ ವೇತನ ನಮ್ಮ ರಾಜ್ಯದಲ್ಲೂ ಸಿಗುವಂತಿರಬೇಕು
* ಸಾಕಷ್ಟು ಪೊಲೀಸ್ ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಳ್ಳಬೇಕು
* ಪೊಲೀಸರಿಗೆ ರಜೆ ಕಾರ್ಮಿಕ ನಿಯಮದಂತೆ ಸಿಗುವಂತಾಗಬೇಕು
* ರಾಜಕಾರಣಿ ಮತ್ತು ವಿಶೇಷ ವ್ಯಕ್ತಿಗಳ ರಕ್ಷಣೆಯಿಂದ ಸಿಬ್ಬಂದಿ ಕಡಿಮೆಗೊಳಿಸಬೇಕು
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications