ಎಲ್ಲಾ ಕಡೆ ಕಾಂಗ್ರೆಸ್ ಅನ್ನು ಜನರು ತಿರಸ್ಕರಿಸಿದ್ದಾರೆ: ಬಿಎಸ್ ಯಡಿಯೂರಪ್ಪ
ದಾವಣಗೆರೆ, ನವೆಂಬರ್ 23: ಕಾಂಗ್ರೆಸ್ನ ಯಾರೋ ಒಬ್ಬರು ಸಿಎಂ ಆಗಬೇಕೆಂಬ ತಿರುಕನ ಕನಸು ಕಾಣುತ್ತಿದ್ದಾರೆ. ಆದರೆ ಆ ತಿರುಕನ ಕನಸು ನನಸಾಗುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಎಂದರು.
ಬುಧವಾರ ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ಆಯೋಜಿಸಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೂರ್ಯ ಚಂದ್ರರು ಇರುವುದು ಎಷ್ಟು ಸತ್ಯವೋ, ನಾವು ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ. ನಮ್ಮ ಪಕ್ಷ ಮುಂದಿನ ಚುನಾವಣೆಯಲ್ಲಿ 145ಕ್ಕೂ ಹೆಚ್ಚು ಸೀಟ್ ಗೆದ್ದು ನಾವು ಅಧಿಕಾರಕ್ಕೆ ಬರುತ್ತೇವೆ. ಆದರೆ ಕಾಂಗ್ರೆಸ್ನವರು ತಿರುಕನ ಕನಸನ್ನು ಕಾಣುತ್ತಿದ್ದಾರೆ. ಆದರೆ ಅವರು ಯಾವಾಗಲೂ ಅಧಿಕಾರಕ್ಕೆ ಬರುವುದಿಲ್ಲ ಎಂದು ಭವಿಷ್ಯ ನುಡಿದರು.
ಕಾಂಗ್ರೆಸ್ನವರು ಹಣ, ಹೆಂಡದ ಬಲದಿಂದ ಚುನಾವಣೆ ಮಾಡಲು ಹೊರಟಿದ್ದಾರೆ. ಜಾತಿ ಧರ್ಮಗಳ ನಡುವೆ ವಿಷಬೀಜ ಬಿತ್ತುತ್ತಿದ್ದಾರೆ. ರಾಜ್ಯದ ಎಲ್ಲಾ ಕಡೆ ಕಾಂಗ್ರೆಸ್ ಅನ್ನು ಜನರು ತಿರಸ್ಕರಿಸುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದರು.
50 ಸಾವಿರ ಮತಗಳ ಅಂತರದಲ್ಲಿ ರಾಮಚಂದ್ರಪ್ಪ ಅವರನ್ನು ಗೆಲ್ಲಿಸಿ
ಈ
ಕ್ಷೇತ್ರದ
ಅಭಿವೃದ್ದಿಗಾಗಿ
ಭಾಜಪಕ್ಕೆ
ರಾಮಚಂದ್ರಪ್ಪ
ಬಂದರು.
ಜಗಳೂರಿನ
ಹಳ್ಳಿ
ಹಳ್ಳಿಗೆ
ನಾನು
ಬಂದಿದ್ದೇನೆ.
ಈ
ಜನಕ್ಕೆ
ನೀರನ್ನು
ಕೊಡುವ
ಸಂಕಲ್ಪ
ಮಾಡಿದ್ದೆ.
ಈ
ಮಧ್ಯ
ಕರ್ನಾಟಕ
ಭಾಗ
ಅಭಿವೃದ್ಧಿ
ಮಾಡುವ
ಸೌಭಾಗ್ಯ
ದೊರೆತಿದೆ.
ರಾಮಚಂದ್ರಪ್ಪ
ಪ್ರೀತಿಯಿಂದ
ಕೆಲಸ
ಮಾಡಿಸಿಕೊಳ್ಳುತ್ತಾರೆ.
ತಾಲ್ಲೂಕಿನ
ಅಭಿವೃದ್ಧಿಗಾಗಿ
24
ಗಂಟೆಗಳ
ಕಾಲ
ಜನರಲ್ಲಿ
ಬೆರೆತು
ಕೆಲಸ
ಮಾಡುತ್ತಿದ್ದಾರೆ.
ಈ
ಬಾರಿ
50
ಸಾವಿರ
ಮತಗಳ
ಅಂತರದಲ್ಲಿ
ಗೆಲ್ಲಿಸಬೇಕು.
ಇಂದೇ
ರಾಮಚಂದ್ರಪ್ಪನವರ
ವಿಜಯೋತ್ಸವ.
ವಿಧಾನಸಭೆಯಲ್ಲಿ
ಮತ್ತೊಮ್ಮೆ
ಬಿಜೆಪಿ
ಬರಬೇಕು.
ಸುಭಿಕ್ಷ
ನಾಡು
ಕಟ್ಟುವ
ಕೆಲಸ
ಮಾಡುತ್ತೇವೆ.
ನಿಮ್ಮ
ಸಂಕಲ್ಪವೇ
ನಮ್ಮ
ವಿಜಯಸಂಕಲ್ಪ.
ಚಿತ್ರದುರ್ಗ,
ದಾವಣಗೆರೆ
ಜಿಲ್ಲೆ
ಅತ್ಯಂತ
ಅಭಿವೃದ್ದಿಯಾಗಬೇಕು.
ನವ
ಕರ್ನಾಟಕದ
ಮೂಲಕ
ನವ
ಭಾರತ
ಕಟ್ಟುವುದು
ನಮ್ಮ
ಸಂಕಲ್ಪ.
ಜನರ
ಸಂಕಲ್ಪವೇ
ನಮ್ಮ
ಸಂಕಲ್ಪ
ಎಂದರು.
ಇನ್ನೂ
ಈ
ವೇಳೆ
ಮುಖ್ಯಮಂತ್ರಿ
ಬಸವರಾಜ
ಬೊಮ್ಮಾಯಿ
ಮಾತನಾಡಿ,
ಭದ್ರಾ
ಮೇಲ್ದಂಡೆ
ಯೋಜನೆಗೆ
3
ಸಾವಿರ
ಕೋಟಿ
ರೂ
ನೀಡಿದೆ.
ಇದರಿಂದ
ಮಧ್ಯ
ಕರ್ನಾಟಕ
ಹಸಿರಾಗುತ್ತದೆ.
ಭದ್ರಾ
ಮೇಲ್ದಂಡೆ
ಯೋಜನೆ
ಮಾಡಿರುವುದು
ಬಿಜೆಪಿ
ಸರ್ಕಾರ.
ಅದನ್ನು
ಪೂರ್ಣಗೊಳಿಸುವುದು
ಬಿಜೆಪಿ
ಸರ್ಕಾರ
ಎಂದು
ತಿಳಿಸಿದರು.
ಪ್ರಧಾನಿ
ಮೋದಿ
ಅವರ
ಕನಸಿನ
ಡಬಲ್
ಇಂಜಿನ್
ಸರಕಾರ
ಬರಬೇಕು
ಎನ್ನುವುದು
ಜನರ
ಸಂಕಲ್ಪವಾಗಿದೆ.
ಜಗಳೂರು ತಾಲೂಕಿಗೆ ನೀರಾವರಿ ಸಚಿವನಾಗಿದ್ದ ಸಂದರ್ಭದಲ್ಲಿ ನೀರು ಲಭಿಸುವಂತೆ ಮಾಡಿದ್ದೆ. ಈ ಭಾಗದ 57 ಕೆರೆಗಳಿಗೆ 660 ಕೋಟಿ ರೂ.ಗಳನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಮಂಜೂರು ಮಾಡಿದ್ದಾರೆ. ನಮ್ಮ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆ ಅಡಿ 45 ಸಾವಿರ ಎಕರೆಗೆ ಹನಿ ನೀರಾವರಿ ಒದಗಿಸಲು 1400 ಕೋಟಿ ರೂ. ಅನುದಾನ ನೀಡಿ, ಯೋಜನೆಯನ್ನು ಚಾಲನೆಗೊಳಿಸಲಾಗುತ್ತಿದೆ ಎಂದರು.
ಜಲಜೀವನ್ ಮಿಷನ್ ಯೋಜನೆಯಡಿ 9000 ಕೋಟಿರೂ. ಅನುದಾನದಲ್ಲಿ ರಾಜ್ಯದ 25 ಲಕ್ಷ ಮನೆಗಳಿಗೆ ಕುಡಿಯುವ ನೀರು ಒದಗಿಸುವ ಗುರಿ ಹೊಂದಿದ್ದು, ಈ ವರ್ಷ 14 ಕೋಟಿ ಮನೆಗಳಿಗೆ ಕುಡಿಯುವ ನೀರು ಒದಗಿಸಲಾಗಿದೆ. ಇದು ನಮ್ಮ ಸರ್ಕಾರದ ಬದ್ದತೆ. ಭಾಜಪದ ನಮ್ಮ ಸರ್ಕಾರದ 3 ವರ್ಷ ಅವಧಿಯಲ್ಲಿ ಒಟ್ಟು 30 ಲಕ್ಷ ಮನೆಗಳಿಗೆ ಕುಡಿಯು ನೀರು ಒದಗಿಸಿರುವುದು ಡಬಲ್ ಇಂಜಿನ್ ಸರ್ಕಾರದ ಶಕ್ತಿಯಾಗಿದೆ .154 ಗ್ರಾಮಗಳಿಗೆ 482 ಕೋಟಿ ರೂ. ಮನೆಮನೆಗೆ ನೀರು ಕೊಡುವ ಯೋಜನೆ ಮಾಡಲಾಗಿದೆ ಎಂದರು.