ಕರ್ನಾಟಕ ಶಾಸಕರ ವಿದೇಶಿ ಟ್ರಿಪ್ ಶೀಟ್ ವಿವರ ಇಲ್ಲಿದೆ
ಬೆಂಗಳೂರು, ಫೆ.28: ಕಳೆದ ಡಿಸೆಂಬರಿನಲ್ಲಿ 16 ದಿನಗಳ ಕಾಲ ದಕ್ಷಿಣ ಅಮೆರಿಕದ ಪ್ರವಾಸ ಮೋಜು ಅನುಭವಿಸಿದ್ದ ರಾಜ್ಯದ 30 ಶಾಸಕರು ಸರಕಾರಕ್ಕೆ ಸಲ್ಲಿಸಿರುವ 'ಸ್ಟಡಿ ರಿಪೋರ್ಟ್' ಬಹಿರಂಗವಾಗಿದೆ. ಸದರಿ ಶಾಸಕರು ವಿವಾದಿತ ವಿದೇಶಿ ಪ್ರವಾಸದಿಂದ ಜನವರಿಯಲ್ಲಿ ಮರಳಿದ್ದರು. ಈ ಮಧ್ಯೆ, ರಾಜ್ಯದ ನೂರಕ್ಕೂ ಹೆಚ್ಚು ತಾಲೂಕುಗಳು ಬರದ ಬೇಗೆಯಲ್ಲಿದ್ದವು ಎಂಬುದು ಗಮನಾರ್ಹ.
ಐದು
ವರ್ಷಕ್ಕೊಮ್ಮೆ
ಶಾಸಕರು
ವಿದೇಶ
ಪ್ರವಾಸಕ್ಕೆ
ಹೋದರೆ
ತಪ್ಪೇನೂ
ಇಲ್ಲ
ಎಂದು
ಸಿಎಂ
ಸಿದ್ದರಾಮಯ್ಯ
ಸಹ
ಹೇಳಿದ್ದರು.
ಅಷ್ಟಕ್ಕೂ
ಶಾಸಕರ
ವಿದೇಶ
ಪ್ರವಾಸಕ್ಕೆ
ಅನುಮತಿ
ನೀಡುವುದು
ಸರಕಾರ
ಅಲ್ಲ.
ಶಾಸಕಾಂಗ
ಸಮಿತಿ
ಅದನ್ನೆಲ್ಲಾ
ನೋಡಿಕೊಳ್ಳುತ್ತದೆ.
ಶಾಸಕರು
ಪ್ರತಿ
ವರ್ಷ
ವಿದೇಶಕ್ಕೆ
ಹೋಗ್ತಾರಪ್ಪಾ.
ಅದರಲ್ಲಿ
ತಪ್ಪೇನೂ
ಇಲ್ಲ.
ಸುಮ್ಮನೆ
ಮಾಧ್ಯಮದವರು
ವಿಷಯವನ್ನು
ದೊಡ್ಡದು
ಮಾಡ್ತಿದ್ದಾರೆ
ಅಷ್ಟೇ'
ಎಂದು
ಸಿದ್ದು
ಸಮರ್ಥಿಸಿಕೊಂಡಿದ್ದರು.
ನಾವೇನೂ ಅಲ್ಲಿ ಡ್ಯಾನ್ಸ್ ಮಾಡಲು ಹೋಗಿರಲಿಲ್ಲ. ಅಲ್ಲಿನ ವಿಶಾಲ ಕೃಷಿ ತೋಟಗಳು, ಪಶುಸಂಗೋಪನೆಯನ್ನು ನೋಡಿಕೊಂಡು ಬಂದೆವು' ಎಂದು ಪ್ರವಾಸ ಮುಗಿಸಿ ಬಂದಿದ್ದ ಬಿಆರ್ ಯಾವಗಲ್ ಪ್ರತಿಕ್ರಯಿಸಿದ್ದರು.
ನರಗುಂದ ಶಾಸಕ ಯಾವಗಲ್ ಸಲ್ಲಿಸಿರುವ ವರದಿ ಪ್ರಕಾರ ಶಾಸಕರು ವಿದೇಶಿ ನೆಲದಲ್ಲಿ ಚೆರ್ರಿ ಜ್ಯೂಸ್ ಮಾಡುವುದನ್ನು ಮತ್ತು ಒಣಹಣ್ಣುಗಳ ಮಾರುಕಟ್ಟೆ ವ್ಯವಸ್ಥೆಯನ್ನು ನೋಡಿಕೊಂಡು ಬಂದರಂತೆ. ಹಣ್ಣು ಪ್ಯಾಕೇಜಿಂಗ್ ಅನ್ನು ಸಹ ನೋಡಿದರಂತೆ.
3900 ಅಡಿ ಮೇಲಿದ್ದ ಹಿಮಚ್ಛಾದಿತ ಪ್ರದೇಶವನ್ನು ಹೆಲಿಕಾಪ್ಟರಿನಲ್ಲಿ ಹೋಗಿ ನೋಡಿಕೊಂಡು ಬಂದೆವು. ಅಷ್ಟೇ ಅಲ್ಲ. ಟ್ರೈನಿನಲ್ಲೂ ಹೋಗಿದ್ದೆವು. ಸುವಿಶಾಲ ಕೃಷಿ ಪ್ರದೇಶಗಳಲ್ಲಿ ಅಸಂಖ್ಯಾತ ಕುರಿಗಳು ಮತ್ತು ಹಸುಗಳು ಮೇಯುತ್ತಿರುವುದನ್ನು ಕಣ್ಣಾರೆ ಕಂಡೆವು. ಜನಾಶಯಗಳನ್ನು ಕಂಡೆವು. ಓಹ್! ಬಿಡಿ ಆ ಅನುಭವ ಅದ್ಭುತವಾಗಿತ್ತು ಎಂದು ವರ್ಣಿಸಿದ್ದಾರೆ.
ನ್ಯೂಜಿಲ್ಯಾಂಡಿನಲ್ಲಿ ನಾವು ಮಳೆಗಾಡುಗಳನ್ನು ನೋಡಿಕೊಂಡು ಬಂದೆವು. ಮರ ಕಡಿಯವುದು ನಿಸರ್ಗದ ಮೇಲೆ ಬೀರುವ ಅಡ್ಡಪರಿಣಾಮದ ಬಗ್ಗೆ ತಿಳಿದುಕೊಂಡೆವು. ಪರ್ವತಗಳ ಸಾಲಿನಲ್ಲಿ ರೋಪ್ ವೇನಲ್ಲಿ ನಲಿದಾಡಿದೆವು. ಕರ್ನಾಟಕದ ಬೆಟ್ಟ ಪ್ರದೇಶಗಳಲ್ಲೂ ಈ ವ್ಯವಸ್ಥೆಯನ್ನು ಅಳವಡಿಸಬೇಕು.
ಮುಖ್ಯವಾಗಿ ಇಲ್ಲಿ ಜಾತಿ ವ್ಯವಸ್ಥೆಯೇ ಇಲ್ಲಾ ಕಣ್ರೀ. ಜನ ಸಿಕ್ಕಾಪಟ್ಟೆ ಶಿಸ್ತೋ ಶಿಸ್ತು. ಇಲ್ಲೆಲ್ಲಾ ಪೇ ಟಂಡ್ ಯೂಸ್ ಟಾಯ್ಲೆಟ್ಟುಗಳೇ ಇರೋದು. ಕರ್ನಾಟಕದಲ್ಲೂ ಹೆಲಿಕಾಪ್ಟರ್ ಟೂರಿಸಂ ಶುರು ಮಾಡಬೇಕು. ಕೃಷಿಯನ್ನು ವೈಜ್ಞಾನಿಕ ಪದ್ಧತಿಯಲ್ಲಿ ಕೈಗೊಳ್ಳುತ್ತಿದ್ದಾರೆ.