2ನೇ ಹಂತದ ಚುನಾವಣೆ, ಕಾಂಗ್ರೆಸ್ ಉಸ್ತುವಾರಿಗಳ ನೇಮಕ
ಬೆಂಗಳೂರು, ಏಪ್ರಿಲ್ 16 : ಕರ್ನಾಟಕ ಕಾಂಗ್ರೆಸ್ 2ನೇ ಹಂತದ ಲೋಕಸಭಾ ಚುನಾವಣೆಗೆ ಉಸ್ತುವಾರಿಗಳನ್ನು ನೇಮಕ ಮಾಡಿದೆ. 14 ಲೋಕಸಭಾ ಕ್ಷೇತ್ರಗಳಲ್ಲಿ ಏಪ್ರಿಲ್ 23ರಂದು ಚುನಾವಣೆ ನಡೆಯಲಿದೆ.
ಮಂಗಳವಾರ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಆದೇಶದಂತೆ 9 ಲೋಕಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್ ಉಸ್ತುವಾರಿಗಳನ್ನು ನೇಮಕ ಮಾಡಿದೆ. ಉಸ್ತುವಾರಿ ವಹಿಸಿದರು ಮೈತ್ರಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದು ಸೂಚನೆ ನೀಡಲಾಗಿದೆ.
ಏಪ್ರಿಲ್ 19 ರಿಂದ 21ರ ತನಕ ಉಸ್ತುವಾರಿ ವಹಿಸಿರುವ ಕ್ಷೇತ್ರದಲ್ಲಿ ವಾಸ್ತವ್ಯ ಹೂಡಬೇಕು. ಪ್ರಚಾರ ಕಾರ್ಯಗಳು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಮೈತ್ರಿ ಅಭ್ಯರ್ಥಿ ಗೆಲುವಿಗೆ ಕೆಲಸ ಮಾಡಬೇಕು ಎಂದು ತಿಳಿಸಲಾಗಿದೆ.

ಉಸ್ತುವಾರಿಗಳ ಪಟ್ಟಿ
* ಶಿವಮೊಗ್ಗ ಲೋಕಸಭಾ ಕ್ಷೇತ್ರ - ಡಿ.ಕೆ.ಸುರೇಶ್
* ಬಳ್ಳಾರಿ - ಆರ್.ಧ್ರುವನಾರಾಯಣ
* ಉತ್ತರ ಕನ್ನಡ - ಬಿ.ಕೆ.ಹರಿಪ್ರಸಾದ್
* ವಿಜಯಪುರ - ಎಚ್.ಸಿ.ಮಹದೇವಪ್ಪ
* ರಾಯಚೂರು - ಡಾ.ಎಂ.ವೀರಪ್ಪ ಮೊಯ್ಲಿ
* ಧಾರವಾಡ - ಕೃಷ್ಣ ಬೈರೇಗೌಡ
* ಬೆಳಗಾವಿ - ಯು.ಟಿ.ಖಾದರ್
* ಹಾವೇರಿ - ಜಮೀರ್ ಅಹಮದ್ ಖಾನ್
* ದಾವಣಗೆರೆ - ಕೆ.ಎಚ್.ಮುನಿಯಪ್ಪ












Click it and Unblock the Notifications