''44,165 ಎಕ್ರೆಯ 18 ಕೈಗಾರಿಕಾ ವಸಾಹತುಗಳು ವಿಶೇಷ ಹೂಡಿಕೆ ಪ್ರದೇಶಗಳಾಗಿ ಘೋಷಣೆ'' Peenya Industry
ಬೆಂಗಳೂರು, ಜೂನ್ 14: ಕರ್ನಾಟಕದಲ್ಲಿ ರಾಜ್ಯದಲ್ಲಿ ಕಳೆದ 02 ವರ್ಷಗಳಲ್ಲಿ ಸಾಕಷ್ಟು ಹೂಡಿಕೆ ಆಗಿದೆ. ಕೈಗಾರಿಕಾ ಬೆಳವಣಿಗೆಗಾಗಿ ಎಸ್ಐಆರ್ ಮಾದರಿ ಜಾರಿಗೆ ತರಲಾಗುತ್ತಿದೆ. ಹೊಸ ವ್ಯವಸ್ಥೆಯಿಂದ ಈ ಪ್ರದೇಶಗಳಲ್ಲಿನ ಕೈಗಾರಿಕೆಗಳಿಂದ ಇನ್ನು ಮುಂದೆ ಕೆಐಎಡಿಬಿಯೇ ಆಸ್ತಿ ತೆರಿಗೆ ಸಂಗ್ರಹಿಸಲಿದೆ. ಅದರಲ್ಲಿ ಶೇ 70ರಷ್ಟು ಹಣ ಸ್ಥಳೀಯ ಕೈಗಾರಿಕಾ ಪ್ರದೇಶದ ಅಭಿವೃದ್ಧಿ ಗೆ ಮೀಸಲಿಡಲಿದೆ. ಉಳಿದ ಶೇ 30ರಷ್ಟು ಹಣವನ್ನು ಸ್ಥಳೀಯ ಪಾಲಿಕೆ/ ನಗರಸಭೆ ಸಂಸ್ಥೆಗಳಿಗೆ ನೀಡಲಾಗುವುದು ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.
ರಾಜ್ಯ ಸರ್ಕಾರಕ್ಕೆ ಎರಡು ವರ್ಷ ತುಂಬಿದ ಹಿನ್ನೆಲೆ ಸುದ್ದಿಗೋಷ್ಠಿಯಲ್ಲಿ ಕೈಗಾರಿಕೆ ಬೆಳವಣಿಗೆ, ಸಾಧನೆ, ಬಂಡವಾಳ ಹೂಡಿಕೆ ಸೇರಿ ಇತರ ಮಾಹಿತಿ ನೀಡಿದರು. ವ್ಯವಸ್ಥಿತ ಮತ್ತು ವ್ಯಾಪಕ ಕೈಗಾರಿಕಾ ಬೆಳವಣಿಗೆ ಸಾಧಿಸಲು 44,165 ಎಕರೆ ವಿಸ್ತೀರ್ಣದಲ್ಲಿ ಹಾಲಿ ಇರುವ ಪೀಣ್ಯ ಸೇರಿದಂತೆ ಒಟ್ಟು 18 ಕೈಗಾರಿಕಾ ವಸಹಾತುಗಳನ್ನು ವಿಶೇಷ ಬಂಡವಾಳ ಹೂಡಿಕೆ ಪ್ರದೇಶಗಳಾಗಿ (SIR- Special Investment Region) ಘೋಷಣೆ ಮಾಡಿದ್ದೇವೆ. ಅಲ್ಲಿನ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಈ ಸಂಬಂಧ ಈಗಾಗಲೇ 04 ಅಧಿಸೂಚನೆ ಹೊರಡಿಸಲಾಗಿದೆ ಎಂದರು.

ರಾಜ್ಯದಲ್ಲಿ ಕೈಗಾರಿಕಾ ಬೆಳವಣಿಗೆಯು ಮತ್ತಷ್ಟು ತ್ವರಿತ ಮತ್ತು ವಿಸ್ತೃತವಾಗಿ ನಡೆಯಬೇಕು ಎನ್ನುವುದು ಸರ್ಕಾರ ಉದ್ದೇಶವಾಗಿದೆ. ಬೆಂಗಳೂರಿನ ಪೀಣ್ಯ 1ರಿಂದ 4ನೇ ಹಂತದವರೆಗಿನ ಕೈಗಾರಿಕಾ ಪ್ರದೇಶದ 1461.46 ಎಕರೆಯನ್ನು ಎಸ್ಐಆರ್ ಎಂದು ಘೋಷಿಸಲಾಗಿದೆ.
ಯಾವೆಲ್ಲ ಕೈಗಾರಿಕೆಗಳು ಎಸ್ಐಆರ್ ಆಗಿವೆ?
ಬೆಂಗಳೂರಿನಲ್ಲಿರುವ ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್ ಹಂತ-1ರಲ್ಲಿ 3013.53 ಎಕರೆ, ಡಾಬಸಪೇಟೆ ಕೈಗಾರಿಕಾ ಪ್ರದೇಶದ 1, 2, 4 ಮತ್ತು 5ನೇ ಹಂತಗಳಲ್ಲಿರುವ 3657.24 ಎಕರೆ, ಬಿಡದಿ 1 ಮತ್ತು 2ನೇ ಹಂತಗಳಲ್ಲಿರುವ 1542.92 ಎಕರೆ, ಮೈಸೂರಿನ ಕಡಕೋಳ ಮತ್ತು ಅಡಕನಹಳ್ಳಿ ಸಬ್-ಲೇಔಟ್, ಕೋಚನಹಳ್ಳಿ, ಇಮ್ಮಾವು, ತಾಂಡ್ಯಾ 2ನೇ ಹಂತ, ಮಹಿಳಾ ಉದ್ಯಮಿಗಳ ಪಾರ್ಕ್ 1 ಮತ್ತು 2ನೇ ಹಂತ, ಎಸ್.ಯು.ಸಿ, ಫಿಲಂ ಸಿಟ ವ್ಯಾಪ್ತಿಯಲ್ಲಿ 3198.50 ಎಕರೆ, ಮೈಸೂರಿನ ಹೆಬ್ಬಾಳ, ಹೂಟಗಳ್ಳಿ, ಬೆಳವಾಡಿ, ಬೆಳಗೊಳ, ಕೂರಗಳ್ಳಿ, ಹೆಬ್ಬಾಳ 2ನೇ ಹಂತ ಮತ್ತು ಎಸ್.ಯು.ಸಿ. ವ್ಯಾಪ್ತಿಯಲ್ಲಿ 3,799.19 ಎಕರೆ ಪ್ರದೇಶಗಳು.
ತುಮಕೂರಿನ ವಸಂತ ನರಸಾಪುರ 1, 2 ಮತ್ತು 3ನೇ ಹಂತ ಮತ್ತು ಸಬ್-ಲೇಔಟುಗಳು, ಜಪಾನ್ ಕೈಗಾರಿಕಾ ವಸಾಹತುವಿನ ವ್ಯಾಪ್ತಿಯಲ್ಲಿ 3878.20 ಎಕರೆ, ಗೌರಿಬಿದನೂರು ಕೈಗಾರಿಕಾ ಪ್ರದೇಶದ 1, 2 ಮತ್ತು 3ನೇ ಹಂತಗಳಲ್ಲಿ 1470.73 ಎಕರೆ, ಹಾರೋಹಳ್ಳಿ ಕೈಗಾರಿಕಾ ಪ್ರದೇಶದ 1, 2 ಮತ್ತು 3ನೇ ಹಂತಗಳಲ್ಲಿನ 2416.73 ಎಕರೆ, ಹಾಸನದಲ್ಲಿರುವ ಗ್ರೋತ್ ಸೆಂಟರ್ ವ್ಯಾಪ್ತಿಯಲ್ಲಿ 2260.96 ಎಕರೆ, ಚಾಮರಾಜನಗರದ ಬದನಗುಪ್ಪೆ-ಕೆಲ್ಲಂಬಳ್ಳಿಯಲ್ಲಿ 2367.53 ಎಕರೆ, ಯಾದಗಿರಿ ಜಿಲ್ಲೆಯ ಕಡೇಚೂರಿನಲ್ಲಿ 3284.27 ಎಕರೆ ಮತ್ತು ರಾಯಚೂರು ಗ್ರೋತ್ ಸೆಂಟರಿನಲ್ಲಿ 1744.75 ಎಕರೆ ಪ್ರದೇಶವನ್ನು ವಿಶೇಷ ಹೂಡಿಕೆ ಪ್ರದೇಶಗಳಾಗಿವೆ ಎಂದು ಅವರು ವಿವರಿಸಿದರು.

ಅದೇ ರೀತಿ ನರಸಾಪುರ-ಜಕ್ಕಸಂದ್ರದ 1 ಮತ್ತು 2ನೇ ಹಂತಗಳಲ್ಲಿ 2019.97 ಎಕರೆ, ದೊಡ್ಡಬಳ್ಳಾಪುರ ತಾಲೂಕಿನಲ್ಲಿರುವ ಒಬಡೇನಹಳ್ಳಿ ಮತ್ತು ಆದಿನಾರಾಯಣ ಹೊಸಹಳ್ಳಿ ವ್ಯಾಪ್ತಿಯಲ್ಲಿ 1696.09 ಎಕರೆ, ಬೀದರಿನ ನೌಬಾದ್ ಮತ್ತು ಕೊಲ್ಹಾರ ಕೈಗಾರಿಕಾ ಪ್ರದೇಶದಲ್ಲಿ 1705.34 ಎಕರೆ, ಬೆಂಗಳೂರಿನ ಬೊಮ್ಮನಹಳ್ಳಿ ಕೈಗಾರಿಕಾ ಪ್ರದೇಶದ ಹಂತ 1, 2, 3 ಮತ್ತು 4ನೇ ಹಂತ, ಬೊಮ್ಮನಹಳ್ಳಿ-ಜಿಗಣಿ ಲಿಂಕ್ ರಸ್ತೆ, ಜಿಗಣಿಯ 1 ಮತ್ತು 2ನೇ ಹಂತಗಳಲ್ಲಿನ 1830.07 ಎಕರೆಯನ್ನೂ ಎಸ್ಐಆರ್ ಸೇರಿಸಲಾಗಿದೆ.
ಧಾರವಾಡ ಜಿಲ್ಲೆ ಕೈಗಾರಿಕೆ ಪ್ರದೇಶ
ಧಾರವಾಡ ಜಿಲ್ಲೆಯ ಮುಮ್ಮಿಗಟ್ಟಿ ಮತ್ತು ನರೇಂದ್ರ ಹಾಗೂ ಗುಗ್ಗಲಗಟ್ಟಿಗಳಲ್ಲಿ 2818.23 ಎಕರೆ ಜಾಗವನ್ನು ಗುರುತಿಸಲಾಗಿದ್ದು, ಮಾರ್ಚ್ 19 ರಂದು ಅಧಿಸೂಚನೆ ಹೊರಬಿದ್ದಿದೆ. ಹೀಗೆ ಒಟ್ಟು 44165.71 ಎಕರೆ ಭೂಮಿಯನ್ನು ವಿಶೇಷ ಹೂಡಿಕೆ ಪ್ರದೇಶದಡಿ ತರಲಾಗುತ್ತಿದೆ. ಇದರಿಂದ ಹೂಡಿಕೆ ಆಕರ್ಷಣೆ, ಮೂಲಸೌಕರ್ಯ ಅಭಿವೃದ್ಧಿ, ಸಮರ್ಪಕ ಸಂಪರ್ಕ ಸಾಧ್ಯವಾಗಲಿದ್ದು, ಕೈಗಾರಿಕಾ ಬೆಳವಣಿಗೆಯು ಅಪೇಕ್ಷಿತ ವೇಗದಲ್ಲಿ ಸಂಭವಿಸಲಿದೆ ಎಂದು ತಿಳಿಸಿದರು.
-
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications