ಕರ್ನಾಟಕ ಬಂದ್ಗೆ 1,200 ಸಂಘಟನೆಗಳ ಬೆಂಬಲ
ಬೆಂಗಳೂರು, ಸೆಪ್ಟೆಂಬರ್ 07 : ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಕನ್ನಡ ಒಕ್ಕೂಟ ಸೆಪ್ಟೆಂಬರ್ 9ರಂದು ಕರ್ನಾಟಕ ಬಂದ್ಗೆ ಕರೆ ನೀಡಿದೆ. 1,200 ಕನ್ನಡ ಪರ ಸಂಘಟನೆಗಳು ಬಂದ್ಗೆ ಬೆಂಬಲ ನೀಡಿವೆ.
ಮಂಗಳವಾರ
ಕನ್ನಡ
ಚಳವಳಿ
ವಾಟಾಳ್
ಪಕ್ಷದ
ಅಧ್ಯಕ್ಷ
ವಾಟಾಳ್
ನಾಗರಾಜ್
ಕರ್ನಾಟಕ
ಬಂದ್
ಬಗ್ಗೆ
ಮಾಹಿತಿ
ನೀಡಿದರು.
'ತಮಿಳುನಾಡಿಗೆ
ನೀರು
ಬಿಡುವಂತೆ
ಸುಪ್ರೀಂಕೋರ್ಟ್
ಆದೇಶ
ನೀಡಿರುವುದಕ್ಕೆ
ನಮ್ಮ
ಸಂಪೂರ್ಣ
ವಿರೋಧವಿದೆ.
ಈ
ತೀರ್ಪು
ಖಂಡಿಸಿ
ಬಂದ್
ಕರೆ
ನೀಡಲಾಗಿದೆ'
ಎಂದರು.[ಸೆಪ್ಟೆಂಬರ್
9ರಂದು
ಕರ್ನಾಟಕ
ಬಂದ್]
'ಕರ್ನಾಟಕ ಬಂದ್ಗೆ ರಾಜ್ಯದಲ್ಲಿನ 1,200 ಕನ್ನಡಪರ ಸಂಘಟನೆಗಳು ಬೆಂಬಲ ನೀಡುತ್ತಿವೆ. ಲಾರಿ ಮಾಲೀಕರ ಸಂಘ, ಸಿನಿಮಾ ಕಲಾವಿದರ ಸಂಘ ಬೆಂಬಲ ಕೊಡುವುದಾಗಿ ಹೇಳಿವೆ. ಬಂದ್ ದಿನ ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ ಸಂಚಾರ ನಡೆಸುವುದಿಲ್ಲ, ಲಾರಿ, ಆಟೋ, ಟ್ಯಾಕ್ಸಿಗಳು ಸಂಚರಿಸುವುದಿಲ್ಲ. ಹೋಟೆಲ್, ಚಿತ್ರಮಂದಿರ ಬಾಗಿಲು ತೆರೆಯುವುದಿಲ್ಲ' ಎಂದರು.[ಮಂಡ್ಯದಲ್ಲಿ ಕಾವೇರಿ ಹೋರಾಟ : ಚಿತ್ರಗಳು]
'ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸಿ ಜೈಲಿಗೆ ಹೋಗಲು ನಾವು ಸಿದ್ಧರಿದ್ದೇವೆ. ಆದರೆ, ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಬೇಕು. ಕರ್ನಾಟಕ ಬಂದ್ಗೆ ರಾಜ್ಯದ ಎಲ್ಲಾ ಜನರು ಬೆಂಬಲ ನೀಡಬೇಕು' ಎಂದು ವಾಟಾಳ್ ನಾಗರಾಜ್ ಮನವಿ ಮಾಡಿದ್ದಾರೆ.[ಕಾವೇರಿ ವಿವಾದ : ಸಿದ್ದರಾಮಯ್ಯ ಪತ್ರಿಕಾಗೋಷ್ಠಿ ವಿವರಗಳು]