ರಾಜಸ್ಥಾನ: ಪಕ್ಷಾಂತರಿ ಶಾಸಕರಿಗೆ ಮತದಾನದ ಅವಕಾಶ ಬೇಡ- ಬಿಎಸ್‌ಪಿ ಮನವಿ

ಜೈಪುರ ಜೂನ್ 2: ಮುಂಬರುವ ರಾಜ್ಯಸಭಾ ಚುನಾವಣೆಯಲ್ಲಿ ಆರು ಕಾಂಗ್ರೆಸ್ ಶಾಸಕರಿಗೆ ಮತದಾನ ಮಾಡದಂತೆ ತಡೆಯಬೇಕು ಎಂದು ಬಹುಜನ ಸಮಾಜ ಪಕ್ಷವು ರಾಜ್ಯಪಾಲ ಕಲ್ರಾಜ್ ಮಿಶ್ರಾ ಮತ್ತು ವಿಧಾನಸಭೆ ಸ್ಪೀಕರ್ ಸಿಪಿ ಜೋಶಿ ಅವರಿಗೆ ಬುಧವಾರ ಪತ್ರ ಬರೆದಿದೆ. ಈ ಶಾಸಕರು 2019 ರಲ್ಲಿ ಆಡಳಿತ ಪಕ್ಷಕ್ಕೆ ಪಕ್ಷಾಂತರಗೊಂಡಿದ್ದಾರೆ. ರಾಜಸ್ಥಾನದಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಜೂನ್ 10 ರಂದು ಚುನಾವಣೆ ನಡೆಯಲಿದೆ. ಚುನಾವಣೆಗೆ ಕಾಂಗ್ರೆಸ್ ಮೂವರು ಮತ್ತು ಬಿಜೆಪಿ ಒಬ್ಬ ಅಭ್ಯರ್ಥಿ ಗೆಲ್ಲುವ ನಿರೀಕ್ಷೆ ಇದೆ.

'ಪಕ್ಷಾಂತರ ನಿಷೇಧ ಕಾನೂನಿನಡಿಯಲ್ಲಿ ಪ್ರಸ್ತುತ ಪಕ್ಷ ತೊರೆದ ಶಾಸಕರು ಸುಪ್ರೀಂ ಕೋರ್ಟ್ ಮೊಕದ್ದಮೆ ಎದುರಿಸುತ್ತಿದ್ದಾರೆ' ಎಂದು ರಾಜ್ಯ ಬಿಎಸ್ಪಿ ಅಧ್ಯಕ್ಷ ಭಗವಾನ್ ಸಿಂಗ್ ಬಾಬಾ ಪತ್ರದಲ್ಲಿ ಗಮನಸೆಳೆದಿದ್ದಾರೆ. 'ಇಂತಹ ಪರಿಸ್ಥಿತಿಯಲ್ಲಿ ರಾಜ್ಯಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷ ಅಥವಾ ಸ್ವತಂತ್ರ ಪಕ್ಷವನ್ನು ಬೆಂಬಲಿಸುವುದಿಲ್ಲ ಎಂದು ಬಿಎಸ್‌ಪಿ ನಿರ್ಧರಿಸಿರುವುದರಿಂದ ಈ ಆರು ಶಾಸಕರನ್ನು ರಾಜ್ಯಸಭಾ ಚುನಾವಣೆಯಲ್ಲಿ ಮತದಾನ ಮಾಡುವುದನ್ನು ನಿಲ್ಲಿಸಬೇಕು' ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸುಪ್ರೀಂ ಕೋರ್ಟ್ ಮೊಕದ್ದಮೆ

ಸುಪ್ರೀಂ ಕೋರ್ಟ್ ಮೊಕದ್ದಮೆ

ಇದೇ ವೇಳೆ ಕಾಂಗ್ರೆಸ್‌ನೊಂದಿಗೆ ವಿಲೀನಗೊಂಡಿರುವ ಆರು ಶಾಸಕರು ತಮ್ಮದೇ ಶಾಸಕರು ಎಂದು ಇನ್ನೊಂದು ಪಕ್ಷ ವಾದಿಸಿದೆ. ಆರು ಶಾಸಕರು- ರಾಜೇಂದ್ರ ಗುಧಾ, ಲಖನ್ ಮೀನಾ, ದೀಪಚಂದ್ ಖೇರಿಯಾ, ಸಂದೀಪ್ ಯಾದವ್, ಜೋಗಿಂದರ್ ಅವಾನಾ ಮತ್ತು ವಾಜಿಬ್ ಅಲಿ. ಆಡಳಿತ ಪಕ್ಷವು ಪ್ರಸ್ತುತ 108 ಶಾಸಕರನ್ನು ಹೊಂದಿದೆ.

ಕಾಂಗ್ರೆಸ್‌ಗೆ ಆಪರೇಷನ್ ಕಮಲದ ಭೀತಿ

ಕಾಂಗ್ರೆಸ್‌ಗೆ ಆಪರೇಷನ್ ಕಮಲದ ಭೀತಿ

ರಾಜಸ್ಥಾನದಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಜೂನ್ 10 ರಂದು ಚುನಾವಣೆ ನಡೆಯಲಿದ್ದು ಕಾಂಗ್ರೆಸ್‌ಗೆ ಆಪರೇಷನ್ ಕಮಲದ ಭೀತಿ ಶುರುವಾಗಿದೆ. ಹೀಗಾಗಿ ಚುನಾವಣೆಗೆ ಮುನ್ನ ಕಾಂಗ್ರೆಸ್ ತನ್ನ ರಾಜಸ್ಥಾನದ ಶಾಸಕರನ್ನು ಉದಯಪುರದ ಹೋಟೆಲ್‌ಗೆ ಸ್ಥಳಾಂತರಿಸಲು ನಿರ್ಧರಿಸಿದೆ. ಬಿಜೆಪಿಯು ಅವರನ್ನು ಮಾತುಕತೆಗೆ ಪ್ರಯತ್ನಿಸುತ್ತದೆ ಎಂದು ಪಕ್ಷದ ಮೂಲಗಳು ಅಭಿಪ್ರಾಯಪಟ್ಟಿವೆ. ಈ ವೇಳೆ ಮಾಧ್ಯಮ ಉದ್ಯಮಿ ಸುಭಾಷ್ ಚಂದ್ರ ಅವರು ರಾಜ್ಯಸಭಾ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಬಳಿಕ ಕಾಂಗ್ರೆಸ್ ಸುಭಾಷ್ ಅವರು ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರೆ, ಚಂದ್ರು ಬಿಜೆಪಿಯಿಂದ ಬೆಂಬಲಿತರಾಗಿದ್ದಾರೆ ಎಂದು ನಿರ್ಧರಿಸಿದೆ. ಈ ಕ್ರಮ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಬಿಜೆಪಿ ಕುದುರೆ ವ್ಯಾಪಾರದಲ್ಲಿ ತೊಡಗಿಸಿಕೊಳ್ಳಲು ಬಯಸಿದೆ ಎಂದು ಆರೋಪಿಸಲು ಪ್ರೇರೇಪಿಸಿದೆ.

ಯಾರಿಗೆ ಎಷ್ಟು ಮತ ಅಗತ್ಯ

ಯಾರಿಗೆ ಎಷ್ಟು ಮತ ಅಗತ್ಯ

200 ಶಾಸಕರು ಇರುವ ರಾಜಸ್ಥಾನ ವಿಧಾನಸಭೆಯಲ್ಲಿ, ಪ್ರತಿ ರಾಜ್ಯಸಭೆ ಅಭ್ಯರ್ಥಿಯ ಗೆಲುವಿಗೆ 41 ಮತಗಳು ಬೇಕಾಗಿದೆ. ಕಾಂಗ್ರೆಸ್ 108 ಶಾಸಕರನ್ನು ಹೊಂದಿದೆ ಮತ್ತು ಬಿಜೆಪಿ ಬಳಿ 71 ಮತಗಳಿವೆ. ಕಾಂಗ್ರೆಸ್‌ನವರ ಬಳಿ ಹೆಚ್ಚವರಿಯಾಗಿ 30 ಮತಗಳು ಇದ್ದರೂ ಎರಡನೇ ಸ್ಥಾನದ ಗೆಲುವಿಗೆ 11 ಮತಗಳು ಬೇಕಾಗಿವೆ. ಮೂರನೇ ಸ್ಥಾನದ ಗೆಲುವಿಗೆ ಕಾಂಗ್ರೆಸ್‌ಗೆ ಹೆಚ್ಚವರಿ 15 ಮತಗಳು ಬೇಕಾಗಿವೆ. ಚಿಕ್ಕ ಪಕ್ಷಗಳು ಮತ್ತು ಪಕ್ಷೇತರ ಶಾಸಕರು ಅಭ್ಯರ್ಥಿಯ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ರಾಜಸ್ಥಾನ ವಿಧಾನಸಭೆಯಲ್ಲಿ ಒಟ್ಟು 13 ಮಂದಿ ಪಕ್ಷೇತರ ಶಾಸಕರಿದ್ದಾರೆ. ರಾಷ್ಟ್ರೀಯ ಲೋಕತಾಂತ್ರಿಕ್ ಪಕ್ಷದಿಂದ ಇಬ್ಬರು, ಭಾರತೀಯ ಟ್ರೈಬಲ್ ಪಾರ್ಟಿಯಿಂದ ಇಬ್ಬರು ಮತ್ತು ಇಬ್ಬರು ಸಿಪಿಎಂ ಶಾಸಕರಿದ್ದಾರೆ. ಇವರು ಅಭ್ಯರ್ಥಿಗಳ ಗೆಲುವಿನಲ್ಲಿ ನಿರ್ಣಾಯಕರಾಗಿದ್ದಾರೆ. ಬಿಜೆಪಿಗೆ ಪಕ್ಷೇತರ ಶಾಸಕರ ಬೆಂಬಲವಿದೆ. ಇನ್ನೊಂದೆಡೆ ಚಿಕ್ಕ ಪಕ್ಷಗಳ ಬೆಂಬಲ ಪಡೆಯಲು ಕಾಂಗ್ರೆಸ್ ಹೋರಾಡುತ್ತಿದೆ.

ತೀವ್ರ ನಿಗಾ ಇಟ್ಟ ಬಿಜೆಪಿ

ತೀವ್ರ ನಿಗಾ ಇಟ್ಟ ಬಿಜೆಪಿ

ರಾಜ್ಯದ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಭುಗಿಲೆದ್ದಿರುವ ಅಸಮಾಧಾನದ ಮೇಲೆ ತೀವ್ರ ನಿಗಾ ಇಟ್ಟಿರುವ ಬಿಜೆಪಿ ಲೆಕ್ಕಾಚಾರದ ಹೆಜ್ಜೆ ಇಟ್ಟಿದೆ. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ನಡುವೆ ಶೀಥಲ ಸಮರ ಮುಂದುವರಿದಿದ್ದು, ಯಾವಾಗ ಬೇಕಾದರೂ ಅಸಮಾಧಾನ ಸ್ಫೋಟಗೊಳ್ಳುವ ಸಾಧ್ಯತೆಯಿದೆ. ಇದರ ಲಾಭ ಪಡೆಯಲು ಬಿಜೆಪಿ ಕಾಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+