ವಿಶ್ವಸುಂದರಿ ಆಕಾಂಕ್ಷಿ ರೂಪದರ್ಶಿ ದುರಂತ ಸಾವು
ಸಂತ ಬಾರ್ಬರಾ(ಹೊಂಡುರಾಸ್), ನ.20: ದುಷ್ಕರ್ಮಿಯ ಗುಂಡಿನ ದಾಳಿ ತಪ್ಪಿಸಿಕೊಳ್ಳಲು ಯತ್ನಿಸುವ ಸಂದರ್ಭದಲ್ಲಿ ಗುಂಡು ತಗುಲಿ ಸಾವನ್ನಪ್ಪಿದ ಘಟನೆ ನಡೆದಿದೆ. ಮಿಸ್ ಹೊಂಡುರಾಸ್ ಮರಿಯಾ ಜೋಸ್ ಅಲ್ವರಾಡೊ ಮೃತಪಟ್ಟಿರುವ ದುರ್ದೈವಿ. ಮರಿಯಾ ಕೊಲೆ ಮಾಡಿದವನು ಆಕೆ ಸೋದರಿಯ ಮಾಜಿ ಪ್ರಿಯಕರ.
ಮಿಸ್ ಹೊಂಡುರಾಸ್ ಕಿರೀಟ ಧರಿಸಿದ 19ರ ಹರೆಯದ ಸುಂದರಿ ಮರಿಯಾ ಜೋಸ್ ಅಲ್ವರಾಡೊ ಲಂಡನ್ನಿನಲ್ಲಿ ನಡೆಯಲಿರುವ ವಿಶ್ವಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸಬೇಕಿತ್ತು. ಈ ನಡುವೆ ತನ್ನ ಸೋದರಿ ಸೋಫಿಯಾ ಟ್ರಿನಿಡಾಡ್(23) ಜೊತೆ ಸಂತ ಬಾರ್ಬರಾದಲ್ಲಿನ ಪಾರ್ಟಿಯೊಂದರಲ್ಲಿ ಭಾಗವಹಿಸಿದ್ದಳು. ಈ ಸಂದರ್ಭದಲ್ಲಿ ಅಲ್ಲಿಗೆ ಸೋಫಿಯಾಳ ಮಾಜಿ ಪ್ರಿಯಕರ ಲೂಟ್ರಾಕೋ ರಿಯೂಜ್ ಆಗಮನವಾಗುತ್ತದೆ.

ಪಾರ್ಟಿಯಲ್ಲಿ ಸೋಫಿಯಾ ಪರ ಪುರುಷನ ಜೊತೆ ಕುಣಿದಾಡುವುದನ್ನು ಕಂಡ ಲೂಟ್ರಾಕೋ ಸಿಟ್ಟಿಗೆದ್ದು ಗುಂಡು ಹಾರಿಸಿದ್ದಾನೆ. ಎರಡು ಸುತ್ತು ಗುಂಡು ಹಾರಿಸಿದಾಗ ತಪ್ಪಿಸಿಕೊಂಡ ಅಕ್ಕ ತಂಗಿಯರು ಪಾರ್ಟಿಯಿಂದ ಹೊರಬಿದ್ದಿದ್ದಾರೆ. ನಂತರ ಇಬ್ಬರ ಸುಳಿವು ಕೆಲವು ದಿನಗಳವರೆಗೂ ಸಿಕ್ಕಿರಲಿಲ್ಲ.
ಸ್ಥಳೀಯ ಡಿಟೆಕ್ಟಿವ್ ಲಿಯಾನಾಡ್ರೋ ಓಸೊರಿಯೋ ಅವರು ತನಿಖೆ ನಡೆಸಿದ ಮೇಲೆ ಅರಾಡಾ ಪಟ್ಟಣದ ಬಳಿಯ ಅಗುವಾಗುವಲ್ ನದಿ ದಡದಲ್ಲಿ ಸುಂದರಿ ಅಲ್ವಾರಾಡೊ ಮತ್ತು ಸೋದರಿ ಸೋಫಿಯಾ ಮೃತದೇಹಗಳು ಪತ್ತೆಯಾಗಿದೆ. ಇಬ್ಬರ ಕೊಲೆಯಾಗಿರುವುದನ್ನು ಹಿರಿಯ ಪೊಲೀಸ್ ಅಧಿಕಾರಿ, ಲಿಯಾಂಡ್ರಾ ಒಸೋರಿಯೋ ಸ್ಪಷ್ಟಪಡಿಸಿದ್ದಾರೆ.
ವಿಶ್ವಸುಂದರಿ ಸ್ಪರ್ಧಿಯನ್ನು ಕಳೆದುಕೊಂಡ ದುಃಖ ವಿಶ್ವಸುಂದರಿ ಸ್ಪರ್ಧೆ ಆಯೋಜಕರನ್ನು ತಟ್ಟಿದೆ. ಇಬ್ಬರು ಯುವತಿಯರ ದುರಂತ ಸಾವಿನ ಸೂತಕ ನಮ್ಮನ್ನು ಆವರಿಸಿದೆ, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಭಗವಂತ ಕಲ್ಪಿಸಲಿ ಎಂದು ಆಯೋಜಕಿ ಜೂಲಿಯಾ ಮೊರ್ಲೆ ಪ್ರತಿಕ್ರಿಯಿಸಿದ್ದಾರೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications