ಮದುವೆಯಾದ ಗಂಡ ಗಂಡನಲ್ಲ ಎಂದು ಗೊತ್ತಾದಾಗ!
ಸಾಲ್ವೆಡಾರ್ (ಬ್ರಜಿಲ್), ಆ. 9 : ಅವರಿಬ್ಬರದು ಸುಮಧುರ ಏಳು ವರ್ಷಗಳ ದಾಂಪತ್ಯ. ಅವರಿಬ್ಬರ ಪ್ರೇಮದ ಕುರುಹಾಗಿ ಅವರಿಗೆ ಆರು ವರ್ಷದ ಮುದ್ದಿನ ಮಗಳು. ಸ್ವರ್ಗಕ್ಕೇ ಕಿಚ್ಚುಹಚ್ಚುವಂತೆ ಸಾಗಿತ್ತು ಅವರ ಜೀವನ. ಆದರೆ, ಅವರಿಗೆ ಒಂದೇ ಕೊರಗು ಕಾಡುತ್ತಿತ್ತು. ಅದೇನೆಂದರೆ, ಬಾಲ್ಯದಿಂದಲೇ ಅಮ್ಮನ ವಾತ್ಸಲ್ಯ ಸಿಗಲಿಲ್ಲವೆಂದು ಕೊರಗುತ್ತಿದ್ದರು.
ತಮಗೆ ಜೀವ ಕೊಟ್ಟ ಅಮ್ಮ ಎಲ್ಲೋ ಇದ್ದಿರಬಹುದು ಎಂದು ಆಡ್ರಿಯಾನಾ ಮತ್ತು ಲಿಯಾಂಡ್ರೋ ಬಲವಾಗಿ ನಂಬಿದ್ದರು. ಅಚ್ಚರಿಯೆಂಬಂತೆ ಅವರಿಬ್ಬರ ಅಮ್ಮಂದಿರ ಹೆಸರು ಕೂಡ ಒಂದೇ ಆಗಿತ್ತು. ಅವಳು ಮಾರಿಯಾ. ಇಬ್ಬರ ಅಮ್ಮನ ಹೆಸರು ಒಂದೇ ಆಗಿರುವುದು ಕಾಕತಾಳೀಯ ಎಂದು ಅಂದುಕೊಂಡಿದ್ದರು. ಮಾರಿಯಾ ಎಂಬ ಹೆಸರಿನ ತಾಯಂದಿರು ಎಷ್ಟುಜನರಿರಲಿಕ್ಕಿಲ್ಲ?
ಅದೇನಾಗಿತ್ತೋ ಏನೋ, ಗಂಡ ಹೆಂಡಂದಿರಿಬ್ಬರೂ ಬಾಲ್ಯದಲ್ಲಿಯೇ ಅಮ್ಮನ ವಾತ್ಸಲ್ಯದಿಂದ ವಂಚಿತರಾಗಿದ್ದರು. ಏನೇ ಆಗ್ಲಿ, ತಮ್ಮ ತಾಯಂದಿರನ್ನು ಹುಡುಕೇ ತೀರಬೇಕು ಎಂದು ಇಬ್ಬರೂ ಪಣ ತೊಟ್ಟಿದ್ದರು. ಭೂಮಿ ಯಾವತ್ತಿದ್ದರೂ ಗುಂಡಗೇ ಇರುತ್ತದೆ. [ಅಮ್ಮಾ ನಿನ್ನನ್ನು ಒಂದೇ ಸಾರಿ ತಬ್ಬಿಕೊಳ್ಳಲಾ?]

ಇಂಥ ಬಂಧುಗಳಿಂದ ದೂರವಾಗಿರುವವರಿಗೆ ಅವರ ಆತ್ಮೀಯರನ್ನು ಹುಡುಕಿಕೊಡುವ ಕಾಯಕ ಇಟ್ಟುಕೊಂಡಿದ್ದ 'ಏಂಜೆಲ್ ಆಫ್ ಮೀಟಿಂಗ್ಸ್' ಎಂಬ ರೇಡಿಯೋ ಸಹಾಯದಿಂದ ಆಡ್ರಿಯಾನಾ ತನ್ನ ತಾಯಿಯ ಹುಡುಕಾಟವನ್ನು ತ್ವರಿತಗೊಳಿಸಿದಳು. ಆಕೆಯ ಅದೃಷ್ಟ, ಹಲವಾರು ವರುಷಗಳಿಂದ ಹುಡುಕುತ್ತಿದ್ದ ಅಮ್ಮನ ಪ್ರೀತಿ ಆಕೆಗೆ ಸಿಕ್ಕೇಬಿಟ್ಟಿತು. [ಗಂಡು ಗಂಡನಲ್ಲ, ಹೆಂಡತಿ ಹೆಂಡತಿಯಲ್ಲ]
ಆದರೆ, ತಾಯಿ ತಮ್ಮನ್ನೇಕೆ ತ್ಯಜಿಸಿದ್ದೆಂದು, ಆಕೆಯ ಹಳೆಯ ಕಥೆ ಕೇಳುತ್ತಿದ್ದಂತೆ ಆಡ್ರಿಯಾನಾ ಮತ್ತು ಲಿಯಾಂಡ್ರೋ ಇಬ್ಬರ ಮುಖ ಸಂತಸದಿಂದ ಅರಳುವ ಬದಲು ವಿವರ್ಣವಾಗತೊಡಗಿತು. ಇಬ್ಬರೂ ಕುಂತಕುಂತಲ್ಲೇ ಬೆವರಿದರು, ಚಟಪಡಿಸಿದರು, ಗಳಗಳನೆ ಅಳಲು ಪ್ರಾರಂಭಿಸಿದರು. ಅಯ್ಯೋ ದುರ್ವಿಧಿಯೇ ಎಂದು ಹಳಹಳಿಸಿದರು. ಏಕೆಂದರೆ, ಇಬ್ಬರ ಅಮ್ಮ ಒಬ್ಬಳೇ! ಅರ್ಥಾತ್, ಅವರಿಬ್ಬರೂ ಅಣ್ಣತಂಗಿ.
ಮದುವೆಯಾಗಿಯಾಗಿದೆ. ಕಾಣಿಕೆಯಾಗಿ ಆರು ವರ್ಷದ ಮಗಳು ಕೂಡ ಇದ್ದಾಳೆ. ಇಂಥ ಸಂದರ್ಭದಲ್ಲಿ ಮದುವೆಯಾಗಿರುವ ತಾವಿಬ್ಬರೂ ಅಣ್ಣತಂಗಿ ಎಂದು ಗೊತ್ತಾದಾಗ ಅವರ ಪರಿಸ್ಥಿತಿ ಹೇಗಿರಬೇಡ? ಆದರೆ, ಆದದ್ದು ಆಗಿಹೋಗಿದೆ, ಮುಂದಿನ ಭವಿಷ್ಯದೆಡೆ ಚಿತ್ತ ಹರಿಸೋಣ ಎಂದು ನಿರ್ಧರಿಸಿರುವ ಇಬ್ಬರೂ ಗಂಡ ಹೆಂಡತಿಯಂತೆಯೇ ಬಾಳು ಸಾಗಿಸಲು ನಿರ್ಧರಿಸಿದ್ದಾರೆ. ಅವರಿಬ್ಬರ ಬಾಳು ಸುಂದರವಾಗಿರಲಿ.
-
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್












Click it and Unblock the Notifications