ನ್ಯೂಜಿಲೆಂಡ್: ಕೊರೊನಾದಿಂದ ಇದುವರೆಗೆ ಒಂದೇ ಒಂದು ಸಾವು ಹೇಗೆ?
ವಿಲ್ಲಿಂಗ್ಟನ್, ಏಪ್ರಿಲ್ 9: ಇಡೀ ವಿಶ್ವವನ್ನೇ ನಡುಗಿಸಿರುವ ಮಾರಣಾಂತಿಕ ಕೊರೊನಾ ವೈರಸ್ ಸೋಂಕಿತ ಪ್ರಕರಣವನ್ನು ಸತತ ನಾಲ್ಕನೇ ದಿನವು ಕಡಿಮೆ ಮಾಡುವಲ್ಲಿ ನ್ಯೂಜಿಲೆಂಡ್ ಜಯ ಸಾಧಿಸಿದೆ.
Recommended Video
ಈಗ 29 ಹೊಸ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು 1239 ಮಂದಿ ಕೊರೊನಾ ಸೋಂಕಿತರಿದ್ದಾರೆ. ಓರ್ವ ಮೃತಪಟ್ಟಿದ್ದಾರೆ, 14 ಮಂದಿ ಮಾತ್ರ ಆಸ್ಪತ್ರೆಯಲ್ಲಿದ್ದಾರೆ, 317 ಮಂದಿ ಗುಣಮುಖರಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ನ್ಯೂಜಿಲೆಂಡ್ನಲ್ಲಿ ಕೇವಲ 5 ಮಿಲಿಯನ್ ಅಂದರೆ 50 ಲಕ್ಷ ಜನಸಂಖ್ಯೆಯಿದೆ. ಆದರೆ ಕಳೆದ ಒಂದು ತಿಂಗಳ ಹಿಂದಿನಿಂದಲೇ ಲಾಕ್ಡೌನ್ ಮಾಡಿರುವ ಪರಿಣಾಮ ನಾಲ್ಕೈದು ದಿನಗಳಲ್ಲೇ ಕೊವಿಡ್ 19 ನಿಯಂತ್ರಣಕ್ಕೆ ಬಂದಿದೆ.

ಪ್ರಧಾನಿ ಜಸಿಂಡಾ ಏನು ಹೇಳುತ್ತಾರೆ?
ನಾವು ಇಡೀ ದೇಶವನ್ನೇ ಲಾಕ್ಡೌನ್ ಮಾಡಿರುವುದು ನಮಗೆ ತುಂಬಾ ಸಹಾಯಕವಾಗಿದೆ. ಬೇರೆ ದೇಶಗಳಲ್ಲಿ ಲಾಕ್ಡೌನ್ ಸಡಿಲಗೊಳಿಸಿದ್ದೇ ಅನಾಹುತಗಳಿಗೆ ಕಾರಣವಾಗಿದೆ. ಡೆನ್ಮಾರ್ಕ್ನಲ್ಲಿ 5597 ಮಂದಿಗೆ ಕೊರೊನಾ ಸೋಂಕಿದ್ದು 218 ಮಂದಿ ಮೃತಪಟ್ಟಿದ್ದಾರೆ.

ದೇಶಕ್ಕೆ ಬಂದವರು 2 ವಾರ ಕ್ವಾರಂಟೈನ್ನಲ್ಲಿದ್ದರು
ದೇಶಕ್ಕೆ ಬಂದವರು ಎರಡು ವಾರ ಕ್ವಾರಂಟೈನ್ನಲ್ಲಿದ್ದರು ಮಾರ್ಚ್ 20 ರ ನಂತರ ವಿದೇಶದವರಿಗೆ ತಮ್ಮ ದೇಶಕ್ಕೆ ಬರಲು ಅನುಮತಿಯನ್ನು ನಿರಾಕರಿಸಲಾಗಿತ್ತು. ಕಳೆದ ಎರಡು ವಾರಗಳಿಂದ ನ್ಯೂಜಿಲೆಂಡ್ ಜನತೆ ಉತ್ತಮ ಕಾರ್ಯಗಳನ್ನು ಮಾಡಿದೆ. ಸಾವಿರಾರು ಮಂದಿಯ ಜೀವ ಉಳಿಸಿದ್ದಾರೆ.

ಮೊದಲ ಕೇಸ್ ಪತ್ತೆಯಾಗಿತ್ತು
ಫೆಬ್ರವರಿ 28ರಂದು ಅಮೆರಿಕ ಹಾಗೂ ನ್ಯೂಜಿಲೆಂಡ್ನಲ್ಲಿ ಒಂದೇ ಬಾರಿಗೆ ಮೊದಲ ಪ್ರಕರಣ ಪತ್ತೆಯಾಗಿತ್ತು. ಮಾರ್ಚ್ 29ರಂದು ನ್ಯೂಜಿಲೆಂಡ್ನಲ್ಲಿ ಕೇವಲ ಓರ್ವ ಮಾತ್ರ ಮೃತಪಟ್ಟಿದ್ದಾರೆ. ಆದರೆ ಅಮೆರಿಕದಲ್ಲಿ ಸಾವಿರಾರು ಮಂದಿ ಸಾವನ್ನಪ್ಪಿದ್ದಾರೆ.

ನ್ಯೂಜಿಲೆಂಡ್ನಲ್ಲಿ 51165 ಟೆಸ್ಟ್ ಮಾಡಲಾಗಿದೆ
ನ್ಯೂಜಿಲೆಂಡ್ನಲ್ಲಿ ಈ ವಾರದ ಆರಂಭದಲ್ಲಿ 51165 ಪರೀಕ್ಷೆಗಳನ್ನು ಮಾಡಲಾಗಿದೆ. ಅಮೆರಿಕದಲ್ಲಿ 208837 ಪರೀಕ್ಷೆ ನಡೆಸಲಾಗಿದೆ. ಇದು ನ್ಯೂಜಿಲೆಂಡ್ಗಿಂತ 13 ಪಟ್ಟು ಹೆಚ್ಚಿದೆ.

ನ್ಯೂಜಿಲೆಂಡ್ನಲ್ಲಿ ಒಂದೇ ಒಂದು ಸಾವು
ನ್ಯೂಜಿಲೆಂಡ್ನಲ್ಲಿ 20-29 ವರ್ಷದೊಳಗಿನವರು ಶೇ.25ರಷ್ಟಿದ್ದಾರೆ, 30-39 ಶೇ.15 ರಷ್ಟಿದ್ದಾರೆ.
ಅಮೆರಿಕದಲ್ಲಿ 2500 ರೋಗಿಗಳಲ್ಲಿ ಶೇ.29ರಷ್ಟು ಮಂದಿ 20-44 ವರ್ಷದೊಳಗಿದ್ದಾರೆ. ಸಾಮಾನ್ಯವಾಗಿ ಈ ಕಾಯಿಲೆ ವಯಸ್ಸಿನ ಮೇಲೆ ನಿರ್ಧರಿತವಾಗಿದೆ.-
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Vijay: ನಟ, ರಾಜಕಾರಣಿ ವಿಜಯ್ ಮಹತ್ವದ ಟ್ವೀಟ್ - ಅಪ್ರಬುದ್ಧ ರಾಜಕಾರಣಿ ಎಂದ ಡಿ.ಕೆ ಶಿವಕುಮಾರ್ Tamil Nadu Assembly Election -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು?












Click it and Unblock the Notifications