'ಕಾಶ್ಮೀರಕ್ಕಾಗಿ ರಕ್ತದ ಕೊನೆ ಹನಿ ಇರುವ ತನಕ ಹೋರಾಟ'
ಇಸ್ಲಾಮಾಬಾದ್, ಆಗಸ್ಟ್ 7: "ಕಾಶ್ಮೀರಕ್ಕಾಗಿ ರಕ್ತದ ಕೊನೆ ಹನಿಯ ತನಕ ಹೋರಾಡುತ್ತೇವೆ" ಎಂದು ಕಾಶ್ಮೀರ ವ್ಯವಹಾರಗಳ ಪಾಕಿಸ್ತಾನ ಸಚಿವ ಅಲಿ ಅಮಿನ್ ಗಂದಪುರ್ ಬುಧವಾರ ಹೇಳಿದ್ದಾರೆ. ಎಆರ್ ವೈ ನ್ಯೂಸ್ ಜತೆಗೆ ಮಾತನಾಡಿದ ಅವರು, ಪ್ರಧಾನಿ ಇಮ್ರಾನ್ ಖಾನ್ ಸ್ಪಷ್ಟವಾಗಿ ಹೇಳಿದ್ದಾರೆ: ಕಾಶ್ಮೀರಕ್ಕಾಗಿ ಪಾಕಿಸ್ತಾನವು ಎಲ್ಲ ಆಯ್ಕೆಗಳನ್ನು ಬಳಸಿಕೊಳ್ಳುತ್ತದೆ, ಕೊನೆ ಹನಿ ರಕ್ತ ಇರುವ ತನಕ ಹೋರಾಡುತ್ತದೆ ಎಂದು ಹೇಳಿದ್ದಾರೆ.
ದ್ವೇಷ ತೀರಿಸಲು ಮುಂದಾದ ಪಾಕಿಸ್ತಾನದಿಂದ ಭಾರತ ರಾಯಭಾರಿ ಹೊರಕ್ಕೆ
ಜಮ್ಮು- ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಭಾರತ ಸರಕಾರ ತೆಗೆದುಹಾಕಿ, ಅದನ್ನು ಎರಡು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಿದ ನಂತರ ಈ ಹೇಳಿಕೆಯನ್ನು ಅವರು ನೀಡಿದ್ದಾರೆ. ಮಂಗಳವಾರದಂದು ಇದೇ ವಿಚಾರವಾಗಿ ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಮಾತನಾಡಿದ್ದರು.
ಜಮ್ಮು- ಕಾಶ್ಮೀರದ ಪರಿಚ್ಛೇದ 370 ಅನ್ನು ರದ್ದುಗೊಳಿಸುವ ನಿರ್ಧಾರವು ಆಡಳಿತಾರೂಢ ಬಿಜೆಪಿಯ 'ಜನಾಂಗೀಯ ಸಿದ್ಧಾಂತ'ವನ್ನು ತೋರಿಸುತ್ತದೆ. ಇತರ ಎಲ್ಲ ಧರ್ಮಗಳಿಗಿಂತ ಹಿಂದೂ ಧರ್ಮವನ್ನು ಎತ್ತರದಲ್ಲಿ ನಿಲ್ಲಿಸುತ್ತದೆ ಹಾಗೂ ಇದರ ಜತೆಗೆ ಉಳಿದೆಲ್ಲ ಧಾರ್ಮಿಕ ಗುಂಪುಗಳನ್ನು ದಮನ ಮಾಡುವಂಥ ಪ್ರಯತ್ನ ಇದು ಎಂದು ಹೇಳಿದ್ದರು.