ಕೇರಳ ಪ್ರವಾಹ:ಕೋವಿಂದ್, ಮೋದಿಗೆ ವ್ಲಾಡಿಮಿರ್ ಪುಟಿನ್ ಪತ್ರ
ಮಾಸ್ಕೋ, ಆಗಸ್ಟ್ 21: 'ಕೇರಳ ಪ್ರವಾಹದಿಂದ ಮೃತರಾದವರಿಗೆ ನನ್ನ ತೀವ್ರ ಸಂತಾಪಗಳು' ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರಬರೆದಿದ್ದಾರೆ.
Russian President Vladimir Putin writes to President Ram Nath Kovind and PM Modi, expresses condolences over lives lost in #Keralafloods pic.twitter.com/LU1Y1pZtFt
— ANI (@ANI) August 21, 2018
"ಕೇರಳಕ್ಕೆ ಅಪ್ಪಳಿಸಿರುವ ಭೀಕರ ಪ್ರವಾಹದಿಂದ ಮೃತರಾದವರಿಗೆ ನನ್ನ ತೀವ್ರ ಸಂತಾಪಗಳು. ಈ ದುರ್ಘಟನೆಯಿಂದ ಗಾಯಗೊಂಡವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ನಾನು ಹಾರೈಸುತ್ತೇನೆ. ಈ ಸಂಕಷ್ಟದದ ಸಂದರ್ಭದಲ್ಲಿ ಸ್ನೇಹಮಯಿ ಭಾರತದ ಜನರೊಂದಿಗೆ ರಷ್ಯಾ ಸದಾ ಜೊತೆ ಇರುತ್ತದೆ" ಎಂದು ಪುಟಿನ್ ತಮ್ಮ ಪತ್ರದಲ್ಲಿ ಬರೆದಿದ್ದಾರೆ.

ಕಳೆದ ಕೆಲವು ದಿನಗಳಿಂದ ಕೇರಳದಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಗೆ ಇದುವರೆಗೆ 350 ಕ್ಕೂ ಹೆಚ್ಚು ಜನ ಮೃತರಾಗಿದ್ದು, ಲಕ್ಷಾಂತರ ಜನರು ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ದೇಶದ ಬಹುತೇಕ ರಾಜ್ಯಗಳಿಂದ ನೆರವು ಹರಿದುಬರುತ್ತಿದೆಯಾದರೂ ಈಗಾಗಲೇ ಆಗಿರುವ ನಷ್ಟವನ್ನು ತುಂಬುವುದಕ್ಕೆ ಸಾಕಷ್ಟು ಸಮಯವೇ ಬೇಕಾಗಬಹುದು.












Click it and Unblock the Notifications