'ಸಹನೆಯ ಕಟ್ಟೆ ಒಡೆದರೆ ಸಂಸದನೂ ಲೆಕ್ಕಕ್ಕಿಲ್ಲ'
ಇಸ್ಲಾಮಾಬಾದ್, ಸೆ.17: ಪಾಕಿಸ್ತಾನದ ರಾಜಕೀಯ ಮುಖಂಡ ಕಿತ್ತಾಟ ನೆಲದಿಂದ ಆಗಸಕ್ಕೆ ಹಾರಿದೆ. ವಿಐಪಿಗಳಿಗಾಗಿ ವಿಮಾನವನ್ನು ಕಾಯ್ದಿರಿಸಿದ್ದ ಪ್ರಸಂಗದಲ್ಲಿ ಡಾ. ರಮೇಶ್ ಕುಮಾರ್ ಎಂಬ ಸಂಸದ ರೊಚ್ಚಿಗೆದ್ದ ಪ್ರಯಾಣಿಕರು ಹೊರದಬ್ಬಿಸಿಕೊಂಡಿದ್ದಾರೆ. ಮೊಬೈಲ್ ವಿಡಿಯೋ ತುಣುಕು ಈಗ ಎಲ್ಲೆಡೆ ಹರಿದಾಡುತ್ತಿದ್ದು ಚರ್ಚಾಸ್ಪದವಾಗಿದೆ. ಈ ರೀತಿ ಭಾರತದಲ್ಲಿ ಎಂದಾದರೂ ಸಾಧ್ಯವೇ ಎಂಬ ಪ್ರಶ್ನೆಗಳು ಎದ್ದಿವೆ.
ಪಾಕಿಸ್ತಾನದ ಮಾಜಿ ಒಳಾಡಳಿತ ಖಾತೆ ಸಚಿವ ರೆಹಮಾನ್ ಮಲಿಕ್ ಮತ್ತು ಆಡಳಿತಾರೂಢ ಪಿಎಂಎಲ್- ಎನ್ನ ಸಂಸದ ಡಾ. ರಮೇಶ್ ಕುಮಾರ್ ಅವರ ಬರುವಿಕೆಗಾಗಿ ಕರಾಚಿಯಿಂದ ಇಸ್ಲಾಮಾಬಾದ್ಗೆ ಹೊರಡಬೇಕಿದ್ದ ಪಾಕಿಸ್ತಾನ ಇಂಟರ್ನ್ಯಾಷನಲ್ ಏರ್ಲೈನ್ಸ್ ವಿಮಾನ(ಪಿಕೆ 370)ದ ಹಾರಾಟವನ್ನು ತಡೆಹಿಡಿಯಲಾಗಿತ್ತು. ಹೀಗಾಗಿ ಹಾರಾಟ ಎರಡು ಗಂಟೆ ವಿಳಂಬಗೊಂಡಿತ್ತು.
ಇದರಿಂದ ಪ್ರಯಾಣಿಕರ ಸಹನೆಯ ಕಟ್ಟೆ ಒಡೆದಿತ್ತು. ವಿಳಂಬವಾಗಿ ಬಂದ ರಾಜಕಾರಣಿಗಳನ್ನು ಪ್ರಯಾಣಿಕರು ತರಾಟೆಗೆ ತೆಗೆದುಕೊಂಡು ವಿಮಾನ ಏರಲು ಅವಕಾಶ ನೀಡಲಿಲ್ಲ. ಈ ಘಟನೆಯ ವಿಡಿಯೋ ದೃಶ್ಯಾವಳಿಯನ್ನು ಮಾಧ್ಯಮವೊಂದು ಪ್ರಸಾರ ಮಾಡಿದೆ. ಯೂಟ್ಯೂಬ್ ನಲ್ಲಿ ಭರ್ಜರಿಯಾಗಿ ಓಡುತ್ತಿದೆ.
ಈ ಕತ್ತೆಗಳನ್ನು ಹಿಡಿದು ತದುಕಿರಿ 2-3 ಗಂಟೆ ವಿಳಂಬ ಮಾಡಿದ್ದಾರೆ. ಮೈ ಫುಟ್ ವಿಐಪಿ, ನಾನು ಅವನನ್ನು ಚೆಚ್ಚಿಬಿಡುತ್ತೇನೆ ಎಂದು ಉರ್ದುವಿನಲ್ಲಿ ಪ್ರಯಾಣಿಕರೊಬ್ಬರು ಅರಚುವುದನ್ನು ವಿಡಿಯೋದಲ್ಲಿ ಕಾಣಬಹುದು.

ಮಲಿಕ್ ಅವರಿಗೆ ಪ್ರಯಾಣಿಕನೊಬ್ಬನ ಮಾತು
'ಮಲಿಕ್ ಸಾಹಾಬ್, ನಮ್ಮನ್ನು ಕ್ಷಮಿಸಿ, 250 ಪ್ರಯಾಣಿಕರಿಗೆ ತೊಂದರೆ ನೀಡಿದ್ದಕ್ಕೆ ನಿಮಗೆ ನಾಚಿಕೆ ಆಗಬೇಕು. ಇದಕ್ಕಾಗಿ ನೀವು ಕ್ಷಮೆ ಕೇಳಬೇಕು' ಎಂದು ಪ್ರಯಾಣಿಕನೊಬ್ಬ ಹೇಳಿರುವುದೂ ವಿಡಿಯೋದಲ್ಲಿ ಸೆರೆಯಾಗಿದೆ. ವಿಡಿಯೋದಲ್ಲಿ ಸಂಸದ ರಮೇಶ್ ಕುಮಾರ್ ಅವರು ಕಂಡುಬಂದಿಲ್ಲ. ಆದರೆ, ಪ್ರಯಾಣಿಕರು ಅವರನ್ನೂ ಹೊರದಬ್ಬಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.
|
ಆರೋಪ ತಳ್ಳಿ ಹಾಕಿದ ಮಲಿಕ್
ವಿಮಾನ ಹಾರಾಟ 50 ನಿಮಿಷಗಳ ವಿಳಂಬವಾಗುತ್ತದೆ ಎಂದು ನನಗೆ ತಿಳಿಸಲಾಗಿತ್ತು. ಅದರಂತೆ ನಾನು ವಿಮಾನದ ಕಡೆ ತಡವಾಗಿ ಬಂದೆ ಎಂದು ರೆಹಮಾನ್ ಮಲಿಕ್ ಹೇಳಿದ್ದಾರೆ.
|
ಪಿಎಂಎಲ್ ಎನ್ ಸಚಿವನ ಜೊತೆ ಹೋಲಿಸಬೇಡಿ
ಪಿಎಂಎಲ್ ಎನ್ ಸಚಿವನ ಜೊತೆ ಹೋಲಿಸಬೇಡಿ. ಪಿಟಿಐ ಕಾರ್ಯಕರ್ತನೊಬ್ಬನ ಕಿರುಚಾಟ ಕೇಳಿಸಿಕೊಂಡು ನಾನು ಹಿಂತಿರುಗಿದೆ. ವಿಮಾನ ವಿಳಂಬಕ್ಕೂ ಪಿಎಂಎಲ್ ಎನ್ ಸಚಿವನಿಗೂ ನನಗೂ ಲಿಂಕ್ ಮಾಡಬೇಡಿ
|
ವಿಮಾನಯಾನದ ಸಮಯ ಹೀಗಿತ್ತು: ಮಲಿಕ್
ವಿಮಾನಯಾನದ ಸಮಯ ಹೀಗಿತ್ತು ಎಂದು ವೇಳಾಪಟ್ಟಿ ನೀಡಿ ಸಮರ್ಥಿಸಿಕೊಂಡ ಮಲಿಕ್
ಘಟನೆ ಮೊಬೈಲ್ ನಲ್ಲಿ ಸೆರೆಹಿಡಿಯಲಾಗಿದೆ
ವಿಐಪಿಗಳಿಂದ ಪ್ರಯಾಣಿಕರಿಗೆ ಆದ ತೊಂದರೆ, ಮಲಿಕ್ ಅವರಿಗೆ ಪ್ರಯಾಣಿಕರೊಬ್ಬರ ಮಾತು ಎಲ್ಲವೂ ಮೊಬೈಲ್ ನಲ್ಲಿ ಸೆರೆಹಿಡಿಯಲಾಗಿದೆ
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ












Click it and Unblock the Notifications