ಪಾಕಿಸ್ತಾನಕ್ಕೆ ಬೆಂಬಲ ಘೋಷಿಸಿದ ಅಮೆರಿಕ: ಯಾವ ಕಾರಣಕ್ಕೆ?
ಗೆದ್ದ ಎತ್ತಿನ ಬಾಲ ಹಿಡಿಯೋದನ್ನ ಅಮೆರಿಕ ನೋಡಿ ಕಲಿಯಬೇಕು ಅನ್ನೋ ಆರೋಪವು ಈ ಮೊದಲಿನಿಂದ ಕೂಡ ಇದೆ. ಈ ಮಾತಿಗೆ ಮತ್ತೊಮ್ಮೆ ಅಮೆರಿಕ ಸಾಕ್ಷಿಯನ್ನು ಒದಗಿಸಿ ತಾನು ಡಬಲ್ ಗೇಮ್ ಆಡೋದು ಹೇಗೆ? ಅನ್ನೋದನ್ನ ಮತ್ತೊಮ್ಮೆ ಜಗತ್ತಿನ ಎದುರು ಈಗ ತೆರೆದಿಟ್ಟಿದೆ. ಭಾರತದ ಜೊತೆಗೆ ಚೆನ್ನಾಗಿ ಇದ್ದುಕೊಂಡೇ ಪಾಕಿಸ್ತಾನ ಪರ ಮಾತನಾಡಿದ್ದಾನೆ ಜಗತ್ತಿನ ದಡ್ಡಣ್ಣ.. ಅಲ್ಲಲ್ಲ ದೊಡ್ಡಣ್ಣ!
ಭಾರತದ ಆಜನ್ಮ ವೈರಿ ಅಂತಾನೆ ಪಾಕಿಸ್ತಾನ ಗುರುತಿಸಿಕೊಂಡಿದ್ದು, ಇದೇ ಕಾರಣಕ್ಕೆ ಈಗ ಅಮೆರಿಕದ ನಾಯಕರು ಡಬಲ್ ಗೇಮ್ ಆಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಆರೋಪಕ್ಕೆ ಕಾರಣ ಏನು ಎಂದರೆ, ಇಷ್ಟು ದಿನ ಪಾಕಿಸ್ತಾನದ ಪ್ರಧಾನಿ ಜೊತೆ ಮಾತುಕತೆ ನಡೆಸದ ಅಮೆರಿಕ ಅಧ್ಯಕ್ಷ ಜೋ ಬೈಡನ್, ದಿಢೀರ್ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರ ಜೊತೆ ಮಾತುಕತೆ ನಡೆಸಿದ್ದಾರೆ. ಅಲ್ಲದೆ ಇದೇ ವೇಳೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ಗೆ ಬೆಂಬಲ ಕೂಡ ಸೂಚಿಸಿದ್ದಾರೆ ಬೈಡನ್.

ಅಮೆರಿಕದ ತಂತ್ರ ಏನು?
ಅಷ್ಟಕ್ಕೂ ಬೈಡನ್ ಅವರು 2021ರಲ್ಲಿ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಆ ನಂತರ ಪಾಕಿಸ್ತಾನದ ಯಾವುದೇ ಪ್ರಧಾನಿ ಜೊತೆಗೂ ಬೈಡನ್ ಕರೆ ಮಾಡಿ ಮಾತುಕತೆ ನಡೆಸಿರಲಿಲ್ಲ. ಆದರೆ ಇದೀಗ ದಿಢೀರ್ ಅಂತಾ ಪಾಕಿಸ್ತಾನದ ನೂತನ ಪ್ರಧಾನಿ ಶೆಹಬಾಜ್ ಷರೀಫ್ಗೆ ಕರೆ ಮಾಡಿ ಬೈಡನ್ ಮಾತುಕತೆ ನಡೆಸಿರುವುದು ಭಾರಿ ಗೊಂದಲ ಸೃಷ್ಟಿಮಾಡಿದೆ.
ಅಲ್ಲದೆ ಹೀಗೆ ದಿಢೀರ್ ಇಂತಹ ಬದಲಾವಣೆ ಯಾಕೆ? ಅನ್ನೋ ಅನುಮಾನ ಕೂಡ ಇದೀಗ ಸಹಜವಾಗಿ ಸೃಷ್ಟಿಯಾಗಿದೆ. ಇದೇ ಫೆಬ್ರವರಿ ತಿಂಗಳಲ್ಲಿ ಪಾಕಿಸ್ತಾನದ ಸಂಸತ್ ಚುನಾವಣೆ ನಡೆದಿತ್ತು. ಆದರೆ ಯಾರಿಗೂ ಬಹುಮತ ಬರದ ಕಾರಣ ಚಿತ್ರಾನ್ನಾ ಸರ್ಕಾರ ರಚಿಸಿರುವ ಪಾಕಿಸ್ತಾನ, ಆಡಳಿತ ನಡೆಸಲು ಕೈಯಲ್ಲಿ ಕಾಸು ಇಲ್ಲದೆ ಪರದಾಡುತ್ತಿದೆ. ಹೀಗೆ ಆರ್ಥಿಕ ಸಂಕಷ್ಟ ಎದುರಾದ ಸಮಯದಲ್ಲೇ ಅಮೆರಕ ಕೂಡ ಪಾಕ್ಗೆ ಬೆಂಬಲ ಸೂಚಿಸಿದೆ.
ಸಮ್ಮಿಶ್ರ ಸರ್ಕಾರದ ಗೋಳು
ಪಾಕಿಸ್ತಾನ ಸಂಸತ್ನಲ್ಲಿ ಇರುವ ಒಟ್ಟಾರೆ 336 ಸದಸ್ಯರಲ್ಲಿ ಶೆಹಬಾಜ್ 201 ಮತಗಳ ಬೆಂಬಲ ಪಡೆದು ಸರ್ಕಾರ ರಚಿಸಿದ್ದಾರೆ. ಈ ಮೂಲಕ ಅಗತ್ಯ ಇರುವ ಮತಗಳಿಗಿಂತ, ಒಟ್ಟು 32 ಮತ ಹೆಚ್ಚಾಗಿ ಸಿಕ್ಕಿದ್ದವು. ಹೀಗೆ ಇಮ್ರಾನ್ ಖಾನ್ ಅವ್ರ ಪಾಕಿಸ್ತಾನ ತೆಹ್ರೀಕ್ ಇ ಇನ್ಸಾಫ್ (ಪಿಟಿಐ) ಪಕ್ಷ ಹೀನಾಯವಾಗಿ ಸೋತು ಸುಣ್ಣವಾಗಿತ್ತು.
ಈ ಮೂಲಕ ಮತ್ತೆ ಪಾಕಿಸ್ತಾನ ಪ್ರಧಾನಿಯಾಗಿ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ತಮ್ಮ ಶೆಹಬಾಜ್ ಷರೀಫ್ ಆಯ್ಕೆಯಾಗಿದ್ದರು. ಇದೀಗ ಖುದ್ದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಪಾಕಿಸ್ತಾನಕ್ಕೆ ಕರೆ ಮಾಡಿ ಮಾತನಾಡುವ ಮೂಲಕ, ಅಮೆರಿಕ ತಾನು ಪಾಕಿಸ್ತಾನದ ಪರ ಅನ್ನೋದನ್ನ ಮತ್ತೆ ಪ್ರೂವ್ ಮಾಡಿದೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications