ಇರಾನ್ ನಿಂದ ಅಮೆರಿಕದ 17 ಬೇಹುಗಾರರ ಬಂಧನ; ಕೆಲವರಿಗೆ ಮರಣದಂಡನೆ
ದುಬೈ, ಜುಲೈ 22: ಇರಾನ್ ನಿಂದ ಅಮೆರಿಕದ ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿಯ (ಸಿಐಎ) 17 ಕಾರ್ಯನಿರತ ಬೇಹುಗಾರರನ್ನು ಬಂಧಿಸಿದ್ದು, ಆ ಪೈಕಿ ಕೆಲವರಿಗೆ ಮರಣದಂಡನೆ ವಿಧಿಸಲಾಗಿದೆ ಎಂದು ಇರಾನ್ ನ ಮಾಧ್ಯಮಗಳು ವರದಿ ಮಾಡಿವೆ.
ಇರಾನ್ ನ ಸರಕಾರಿ ಸುದ್ದಿ ಸಂಸ್ಥೆಯು ಗುಪ್ತಚರ ಸಚಿವಾಲಯದ ಹೇಳಿಕೆ ಉದಾಹರಿಸಿ, ಸಿಐಎನ ಬೇಹುಗಾರಿಕೆ ಜಾಲವನ್ನು ಭೇದಿಸಿ, 17 ಶಂಕಿತರನ್ನು ಬಂಧಿಸಿದೆ. ಇನ್ನು ಬಂಧಿತರಲ್ಲಿ ಕೆಲವರಿಗೆ ಮರಣದಂಡನೆ ವಿಧಿಸಲಾಗಿದೆ ಎಂದು ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.
ಮೇ ತಿಂಗಳ ಆರಂಭದಲ್ಲಿ ಇರಾನ್ ವಿರುದ್ಧದ ದಿಗ್ಬಂಧನಗಳನ್ನು ಅಮೆರಿಕವು ಮತ್ತಷ್ಟು ಬಿಗಿಗೊಳಿಸಿದ್ದು, ಕಳೆದ ವಾರ ಇರಾನ್ ನಿಂದ ಬ್ರಿಟಿಷ್ ಟ್ಯಾಂಕರ್ ಅನ್ನು ಹರ್ಮೋಜ್ ಜಲಸಂಧಿಯಲ್ಲಿ ವಶಕ್ಕೆ ಪಡೆಯಲಾಗಿತ್ತು. ಅದಕ್ಕೂ ಬ್ರಿಟನ್ ನ ರಾಯಲ್ ಮರೀನ್ ನಿಂದ ಗಿಬ್ರಲ್ತರ್ ನಲ್ಲಿ ಇರಾನ್ ಟ್ಯಾಂಕರ್ ಅನ್ನು ವಶಕ್ಕೆ ಪಡೆದಿತ್ತು.

ಈಗ ಗುರುತಿಸಲಾಗಿರುವ ಬೇಹುಗಾರರು ತುಂಬ ಪ್ರಮುಖವಾದ ಆರ್ಥಿಕ ಕೇಂದ್ರ, ಅಣು, ಮೂಲಸೌಕರ್ಯ, ಮಿಲಿಟರಿ ಹಾಗೂ ಸೈಬರ್ ಗೆ ಸಂಬಂಧಿಸಿದ ಪ್ರದೇಶಗಳಲ್ಲಿ ನಿಯೋಜಿತರಾಗಿದ್ದರು. ಕೆಲವು ಸೂಕ್ಷ್ಮ ಮಾಹಿತಿಗಳನ್ನು ಕಲೆ ಹಾಕುತ್ತಿದ್ದರು ಎಂದು ಸಚಿವಾಲಯದ ಹೇಳಿಕೆಯಲ್ಲಿ ಟೀವಿಯಲ್ಲಿ ಓದಿ ಹೇಳಲಾಗಿದೆ.
ಸಿಐಎ ಇರಾನ್ ನಲ್ಲಿ ಅತಿ ದೊಡ್ಡ ಸೈಬರ್ ಬೇಹುಗಾರಿಕೆ ನಡೆಸುತ್ತಿದ್ದು, ಅದನ್ನು ಬಯಲು ಮಾಡಿದ್ದೇವೆ ಎಂದು ಜೂನ್ ನಲ್ಲಿ ಹೇಳಲಾಗಿತ್ತು. ಈಗ ಆಗಿರುವ ಬಂಧನ ಅದೇ ಪ್ರಕರಣಕ್ಕೆ ಸಂಬಂಧಿಸಿದ್ದಾ ಎಂಬ ಬಗ್ಗೆ ಖಾತ್ರಿ ಆಗಿಲ್ಲ. ಇನ್ನು ಅಮೆರಿಕದ ಹಲವು ಬೇಹುಗಾರರನ್ನು ವಿವಿಧ ದೇಶಗಳಲ್ಲಿ ಬಂಧಿಸಲಾಗಿದೆ.
-
ಇರಾನ್ ಸಮೀಪಕ್ಕೆ ಬರುತ್ತಿವೆ ಮತ್ತಷ್ಟು ನೌಕೆಗಳು, ಮಧ್ಯಪ್ರಾಚ್ಯ ಭಾಗದಲ್ಲಿ ಪರಿಸ್ಥಿತಿ ಇನ್ನಷ್ಟು ಸೂಕ್ಷ್ಮ... Iran Conflict -
19,000 ರೂಪಾಯಿ ತಲುಪುವ ಭೀತಿಯಲ್ಲಿ ಕಚ್ಚಾತೈಲ ಬೆಲೆ, ದಿಢೀರ್ ಪೆಟ್ರೋಲ್ & ಡೀಸೆಲ್ ಸಂಚಲನ... Crude Oil -
ಇರಾನ್ ಸಂಘರ್ಷ ಪರಿಣಾಮ ತೈಲ ಸಂಸ್ಕರಣಾ ಘಟಕಗಳೇ ಉಡೀಸ್, ಜಗತ್ತಿನಾದ್ಯಂತ ತೈಲ ಬೆಲೆ ಏರಿಕೆಯ ಭೀತಿ... Iran Conflict -
Premium Petrol Price: ಭಾರತದಲ್ಲಿ ಪ್ರೀಮಿಯಂ ಪೆಟ್ರೋಲ್ ದರ ಏರಿಕೆ -
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ











Click it and Unblock the Notifications